• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಓಯೋ ಲಾಡ್ಜಿನಲ್ಲಿ ಇನ್ನು ಅವಿವಾಹಿತ ಜೋಡಿಗಳಿಗೆ ರೂಂ ಕೊಡುವುದಿಲ್ಲ!

Tulunadu News Posted On January 6, 2025
0


0
Shares
  • Share On Facebook
  • Tweet It

ಅವಿವಾಹಿತರಿಗೆ ಓಯೋ ಹೇಳಿ ಮಾಡಿಸಿದ್ದು ಎನ್ನುವ ಅಪಾರ್ಥದ ಟ್ರೋಲ್, ಮಿಮ್ಸ್ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಓಯೋ ಸಂಸ್ಥೆ ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಓಯೋ ಪಾಲುದಾರಿಕೆಯ ಹೋಟೇಲುಗಳಲ್ಲಿ ಅವಿವಾಹಿತ ಜೋಡಿಗಳಿಗೆ ರೂಂ ಕೊಡಲು ಸಾಧ್ಯವಿಲ್ಲ ಎನ್ನುವ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಇನ್ನು ಮುಂದೆ ಓಯೋ ಹೋಟೇಲುಗಳಲ್ಲಿ ರೂಂ ಮಾಡಿ “ರೆಸ್ಟ್” ತೆಗೆದುಕೊಳ್ಳೋಣ ಎಂದು ಪ್ಲಾನ್ ಮಾಡುತ್ತಿದ್ದ ಅವಿವಾಹಿತ ಜೋಡಿಗಳಿಗೆ ಸಾಕಷ್ಟು ನಿರಾಸೆಯಾಗಬಹುದು. ಓಯೋ ಭಾರತಾದ್ಯಂತ ದೊಡ್ಡ ಹೋಟೇಲುಗಳ ನೆಟ್ ವರ್ಕ್ ಹೊಂದಿದೆ.
ದೇಶದ ಮೂಲೆ ಮೂಲೆಗಳಲ್ಲಿಯೂ ಹೀಗೆ ಹೋಟೇಲುಗಳ ಸರಣಿ ಹೊಂದಿರುವುದರಿಂದ ಎಲ್ಲಿ ಬೇಕಾದರೂ ರೂಂ ವ್ಯವಸ್ಥೆ ಜನರಿಗೆ ಸಿಗುತ್ತಿತ್ತು. ಇದರಿಂದ ಕಾಲೇಜು ಯುವಕ, ಯುವತಿಯರು, ಪ್ರೇಮಿಗಳು ಇಲ್ಲಿ ರೂಂ ಮಾಡಲು ಅನುಕೂಲವಾಗುತ್ತಿತ್ತು. ಇನ್ನು ಹಾಗೆ ಆಗುವುದಿಲ್ಲ.
ಈ ನಿಯಮ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಗೆ ಸೀಮಿತ ಮಾಡಲಾಗಿದ್ದು, ನಂತರ ಭವಿಷ್ಯದಲ್ಲಿ ಬೇರೆ ಕಡೆ ಇದನ್ನು ವಿಸ್ತರಿಸಲು ಯೋಜನೆ ಓಯೋ ಹಾಕಿಕೊಂಡಿದೆ. ಇನ್ನು ಮುಂದೆ ಹೀಗೆ ನಿಯಮ ಎಲ್ಲಾ ಕಡೆ ಜಾರಿಗೆ ಬಂದರೆ ದಂಪತಿ ತಾವು ರೂಂ ಪ್ರವೇಶಿಸುವ ಮುನ್ನ ವಿವಾಹಿತರಾಗಿರುವುದಕ್ಕೆ ದಾಖಲೆಯನ್ನು ತೋರಿಸಬೇಕಾಗುತ್ತದೆ. ಇದು ಆನ್ ಲೈನ್ ನಲ್ಲಿ ರೂಂ ಬುಕ್ ಮಾಡುವಾಗಲೂ ಅನ್ವಯವಾಗುತ್ತದೆ. ಒಂದು ವೇಳೆ ಹೋಟೇಲಿನಲ್ಲಿ ರೂಂ ನೀಡುವಾಗ ಅಲ್ಲಿನ ಮ್ಯಾನೇಜರ್ ಅವರಿಗೆ ಜೋಡಿ ವಿವಾಹಿತರಲ್ಲದ ಬಗ್ಗೆ ಸಂಶಯ ಬಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ಹೊಂದಿರುವುದಾಗಿ ಓಯೋ ಆಡಳಿತ ಸ್ಪಷ್ಟನೆ ನೀಡಿದೆ. ರೂಂ ನೀಡುವುದು, ನಿರಾಕರಿಸುವುದು ಆಯಾ ಹೋಟೇಲಿನ ಮ್ಯಾನೇಜರ್ ಅವರ ಸ್ವನಿರ್ಧಾರಕ್ಕೆ ಬಿಟ್ಟಿರುವ ಸಂಗತಿಯಾಗಿದೆ.
ಈ ಹೊಸ ನಿಯಮ ಓಯೋದ ಬ್ರಾಂಡ್ ಇಮೇಜ್ ಹೆಚ್ಚಿಸುವ ಮತ್ತು ಬಾಹ್ಯನೋಟಕ್ಕೆ ಇಂತಹ ಹೋಟೇಲುಗಳ ರೂಂಗಳ ಬಗ್ಗೆ ಗೌರವ ಭಾವನೆ ಬರುವಂತೆ ನೋಡಿಕೊಳ್ಳುವ ಪ್ರಯತ್ನವೂ ಅಡಗಿದೆ. ಹೀಗೆ ಮಾಡುವುದರಿಂದ ಸಭ್ಯ ಕುಟುಂಬದವರು, ಉದ್ಯಮಿಗಳು, ಒಬ್ಬರೇ ಪ್ರವಾಸ ಮಾಡುವ ಪ್ರವಾಸಿಗರು ಇಂತಹ ಹೋಟೇಲುಗಳ ರೂಂಗಳಲ್ಲಿ ತಂಗಲು ಮುಜುಗರಪಡದ ಸನ್ನಿವೇಶ ಇರುತ್ತದೆ. ಇದರಿಂದ ಇಂತಹ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಅವರು ಪ್ರತಿ ಬಾರಿ ಇಂತಹ ಹೋಟೇಲುಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇರುತ್ತದೆ.
ಇನ್ನು ಇದರಿಂದ ಓಯೋ ಬ್ರಾಂಡ್ ಕೂಡ ಹಾಳಾಗದ ರೀತಿಯಲ್ಲಿ ಅದನ್ನು ಉಳಿಸುವ ಚಿಂತನೆ ಕೂಡ ಓಯೋ ಆಡಳಿತ ಮಂಡಳಿಗೆ ಇದೆ. ಒಂದು ವೇಳೆ ಈ ನಿಯಮಗಳನ್ನು ವಿರೋಧಿಸಿ ಯಾವುದಾದರೂ ಹೋಟೇಲಿನವರು ಮುಂದುವರೆದರೆ ಅಂತಹ ಲಾಡ್ಜ್ ಗಳನ್ನು ಬ್ಲ್ಯಾಕ್ ಲಿಸ್ಟಿಗೆ ಹಾಕುವ ಕೆಲಸ ಕೂಡ ನಡೆಯಲಿದೆ. ಮೀರತ್ ನಲ್ಲಿ ಓಯೋ ಹೋಟೇಲುಗಳ ರೂಂಗಳನ್ನು ಅಶ್ಲೀಲ ಉದ್ದೇಶಗಳಿಗೆ ಬಳಸುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಅಲ್ಲಿ ಈ ನಿಯಮವನ್ನು ಆರಂಭಿಸಲು ಯೋಜಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಓಯೋ ಉತ್ತರ ಭಾರತದ ಪ್ರಾದೇಶಿಕ ಅಧಿಕಾರಿ ಪವಾಸ್ ಶರ್ಮಾ ” ಓಯೋ ಯಾವತ್ತೂ ಗ್ರಾಹಕರ ಸುರಕ್ಷೆ ಮತ್ತು ಆತಿಥ್ಯದ ಜವಾಬ್ದಾರಿಯನ್ನು ಖಾತರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತದೆ. ನಾವು ಪ್ರತಿಯೊಬ್ಬ ಗ್ರಾಹಕನ ವೈಯಕ್ತಿಕ ಹಿತಾಸಕ್ತಿಯ ಜೊತೆಗೆ ದೇಶದ ಕಾನೂನನ್ನು ಕೂಡ ಗೌರವಿಸುವ ಅಗತ್ಯ ಇದೆ. ಸಭ್ಯ ಸಮಾಜದ ನಡುವೆ ನಾವು ವ್ಯವಹಾರ ನಡೆಸುವಾಗ ಎಲ್ಲರಿಗೂ ಒಪ್ಪತಕ್ಕಂತಹ ನಿಯಮಗಳನ್ನು ಪಾಲಿಸಬೇಕು. ಆ ನಿಟ್ಟಿನಲ್ಲಿ ನಾವು ಆಗಾಗ ನಮ್ಮ ಪಾಲಿಸಿಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರುತ್ತೇವೆ” ಎಂದು ಅವರು ಹೇಳಿದ್ದಾರೆ.
0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search