• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇರಳದ ಬಯೋ ವೇಸ್ಟ್ ಮಂಗಳೂರಿನ ಚರಂಡಿಗಳಲ್ಲಿ..ಕಾದಿದೆ ಅಪಾಯ!

Tulunadu News Posted On February 24, 2025


  • Share On Facebook
  • Tweet It

ಮಂಗಳೂರು ನಗರ ಹೊರವಲಯದಲ್ಲಿರುವ ತಲಪಾಡಿ ಕೇರಳದ ಗಡಿಪ್ರದೇಶವಾಗಿದೆ. ಕೇರಳದ ಮಂಜೇಶ್ವರ, ಕಾಸರಗೋಡು ಸಹಿತ ಅಕ್ಕಪಕ್ಕದ ಜಿಲ್ಲೆಗಳ ಜನರು ಉದ್ಯೋಗ, ವ್ಯವಹಾರ, ಶಿಕ್ಷಣ, ವೈದ್ಯಕೀಯ ಸಹಿತ ವಿವಿಧ ಕಾರಣಗಳಿಗಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ನಿತ್ಯ ಸಾವಿರಾರು ಜನ ಉಭಯ ರಾಜ್ಯಗಳಿಗೆ ಹೋಗಿ ಬರುತ್ತಾರೆ. ಇದಿಷ್ಟೇ ಆಗಿದ್ದರೆ ಅದರಲ್ಲಿ ಅಂತಹ ತೊಂದರೆ ಏನೂ ಇರಲಿಲ್ಲ. ಆದರೆ ಕೇರಳ ನಮ್ಮ ಮಂಗಳೂರನ್ನು ಎಷ್ಟರಮಟ್ಟಿಗೆ ಗ್ರಾಟೆಂಡ್ ಆಗಿ ತೆಗೆದುಕೊಂಡಿದೆ ಎಂದರೆ ಅವರು ಶುದ್ಧ ಪರಿಸರದಲ್ಲಿ ಜೀವಿಸಿದರೆ ಸಾಕು, ಮಂಗಳೂರಿನವರು ಹಾಳಾಗಿ ಹೋಗಲಿ ಎಂದು ಧೃಡವಾಗಿ ನಿಶ್ಚಯಿಸಿದ್ದಾರೆ. ಇಲ್ಲಿಯ ತನಕ ಅಲ್ಲಿನ ತ್ಯಾಜ್ಯವನ್ನು ತಂದು ಸೈಲೆಂಟಾಗಿ ಮಂಗಳೂರಿನ ಚರಂಡಿಗಳಲ್ಲಿ ಹಾಕಿ ಹೋಗುತ್ತಿದ್ದವರು ಈಗ ಅಲ್ಲಿನ ಬಯೋ ತ್ಯಾಜ್ಯವಾಗಿರುವ ಆಸ್ಪತ್ರೆಗಳ ಗಲೀಜನ್ನು ಕೂಡ ಇಲ್ಲಿ ತಂದು ಸುರಿಯುತ್ತಿದ್ದಾರೆ. ಇದನ್ನು ಅವರು ಎಷ್ಟು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂದರೆ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಎರಡು ಟ್ಯಾಂಕರ್ ಗಳ ಮೂಲಕ ತಂದು ಅದನ್ನು ಇಲ್ಲಿ ಸುರಿದು ಹೋಗುತ್ತಿದ್ದಾರೆ.

ಕೇರಳದವರಿಗೆ ಮಂಗಳೂರು ಮಹಾನಗರ ಪಾಲಿಕೆಯ ಗಾಡಿ ಹೇಗೆ ಸಿಗುತ್ತದೆ? ಇದರ ಅರ್ಥ ಮಂಗಳೂರು ಪಾಲಿಕೆಯ ಕೆಲವು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಅವರ ಸಹಕಾರವಿಲ್ಲದಿದ್ದರೆ ಏಕಾಏಕಿ ತ್ಯಾಜ್ಯ ಮಂಗಳೂರಿನ ಒಳಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಕೇರಳಿಗರು ತಮ್ಮ ರಾಜ್ಯದ ವಾಹನಗಳಲ್ಲಿ ತಂದು ಇಲ್ಲಿ ಸುರಿಯಲು ಹೋದರೆ ಸಿಕ್ಕಿಬೀಳುತ್ತೇವೆ ಎಂದು ಗೊತ್ತಿರುವುದರಿಂದ ಇಲ್ಲಿನವರನ್ನೇ ಸೆಟ್ ಮಾಡಿಕೊಂಡು ತಮ್ಮ ಕೆಲಸಗಳನ್ನು ಮುಗಿಸುತ್ತಿದ್ದಾರೆ.

ಕೇರಳದವರು ಬಯೋ ಮೆಡಿಕಲ್ ವೇಸ್ಟ್ ತಂದು ಮಂಗಳೂರಿನ ಸಿಕ್ಕ ಸಿಕ್ಕ ಹಳ್ಳಕ್ಕೆ ಬಿಸಾಕಿ ಹೋಗುವುದರಿಂದ ಆ ತ್ಯಾಜ್ಯ ಇಲ್ಲಿನ ಪರಿಸರದಲ್ಲಿ ರೋಗ ರುಜಿನಗಳ ಉಗಮಕ್ಕೆ ಕಾರಣವಾಗುತ್ತದೆ. ಅದರೊಂದಿಗೆ ಜಲಚರಗಳಿಗೆ ಮತ್ತು ಜೀವರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಪಾಲಿಕೆಯ ಸಭೆ ನಡೆಸಿ, ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ಕೆಲವು ದಿನಗಳ ತನಕ ಕೇರಳದಿಂದ ತ್ಯಾಜ್ಯವಾಗಲೀ, ಬಯೋ ವೇಸ್ಟ್ ಆಗಲಿ ಬರುವುದು ನಿಂತುಹೋಗಬಹುದು. ಆದರೆ ವಿಷಯ ಒಮ್ಮೆ ತಣ್ಣಗಾದ ಮೇಲೆ ಇದು ಮತ್ತೆ ಆರಂಭವಾಗುತ್ತದೆ. ಹಾಗಾದರೆ ಕೇರಳದವರ ಈ ಅಕ್ರಮ ಕಾರ್ಯಗಳಿಗೆ ಶಾಶ್ವತ ತಡೆ ಇಲ್ವಾ? ಮಂಗಳೂರಿನವರು ಏನಾದರೂ ಆಗಿ ಹಾಳಾಗಿ ಹೋಗಲಿ, ನಾವು ಚೆನ್ನಾಗಿರಬೇಕು ಎನ್ನುವ ಕೇರಳದವರ ಧೋರಣೆಗೆ ಅಂಕುಶ ಹಾಕುವುದು ಯಾರು? ಹೇಗೆ?

 

 

 

 

 

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search