• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಧುಮೇಹಿಗಳಿಗೆ ಸಿಹಿ ಸುದ್ದಿ! ಇನ್ನು ಮಾತ್ರೆಗೆ ಅಷ್ಟು ಹಣ ಕೊಡಬೇಕಿಲ್ಲ!

Tulunadu News Posted On March 14, 2025
0


0
Shares
  • Share On Facebook
  • Tweet It

ಭಾರತವನ್ನು ಮಧುಮೇಹಿಗಳ ತವರೂರು ಎನ್ನುವ ನೋವಿನ ಹಣೆಪಟ್ಟಿ ಭಾರತೀಯರಿಗೆ ಸಿಕ್ಕಿದೆ. ಡಯಾಬೀಟಿಸ್ ಕಾಯಿಲೆ ಬರದಿರಲಿ ಎಂದು ಬೇಡುವವರಿಗೇನೂ ತೊಂದರೆ ಇಲ್ಲ. ಬಹುತೇಕರು ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಮಾತ್ರೆಗಳನ್ನು ತಿನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಫ್ಲೋಜಿನ್ ಮಾತ್ರೆಗೆ ಈ ಮೊದಲು 60 ರೂಪಾಯಿ ಇತ್ತು. ಆದರೆ ಎಂಪಾಗ್ಲಿಪ್ಲೋಜಿನ್ ಔಷಧದ ತಯಾರಿಕಾ ಕಂಪೆನಿಯಾದ ಬೋರಿಂಜರ್ ಇಂಗ್ಲ್ ಹೈಂ (ಬಿಐ) ಹೊಂದಿದ ಪೇಟೆಂಟ್ ಅವಧಿ ಮಾರ್ಚ್ ಗೆ ಮುಕ್ತಾಯವಾಗಿದೆ.

ಹೀಗಾಗಿ ಹಲವು ಕಂಪೆನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿವೆ. ಇದರ ಪರಿಣಾಮ ಔಷಧಗಳ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಟ್ಟು ದರ ಪಾತಾಳ ತಲುಪಿದೆ. ಪ್ರಸ್ತುತ ಒಂದು ಮಾತ್ರೆಗೆ ಐದು ರೂಪಾಯಿಯಿಂದ ದರ ಆರಂಭವಾಗಿದೆ. ಇದರಿಂದ ಭಾರತದ ಕೋಟ್ಯಾಂತರ ನಾಗರಿಕರಿಗೆ ಉಪಯೋಗವಾಗಲಿದೆ. ಇಲ್ಲಿಯ ತನಕ ಪಾಪದವರ ದುಡಿಯುವ ಗಮನಾರ್ಹ ಮೊತ್ತ ಈ ಮಾತ್ರೆಗಳಿಗೆ ತಗಲುತ್ತಿತ್ತು. ಇನ್ನು ಅದು ಉಳಿತಾಯವಾಗಲಿದೆ. ದೆಹಲಿ ಮೂಲದ ಕಂಪೆನಿ ಮ್ಯಾನ್ ಕ್ಲೈಂಡ್ ಇದರ ಬೆಲೆಯನ್ನು ಐದೂವರೆ ರೂಪಾಯಿಯಿಂದ ಆರಂಭಿಸಿದ್ದರೆ ಮುಂಬೈ ಮೂಲದ ಗ್ಲೆನ್ ಮಾರ್ಕ್ 11 ರೂಪಾಯಿಯಿಂದ ಆರಂಭಿಸಿದೆ. ಇನ್ನು ಆಲ್ಕೆಂ ಕಂಪೆನನಿಯು ಮೂಲ ದರಕ್ಕಿಂತ 80 ಶೇಕಡಾ ಕಡಿಮೆ ದರವನ್ನು ನಿಗದಿಪಡಿಸಿದೆ.

ಒಟ್ಟಿನಲ್ಲಿ ವಿಷಯ ಚಿಕ್ಕದಿದ್ದರೂ ಇದರ ಪ್ರಯೋಜನ ಮಾತ್ರ ದೊಡ್ಡದು. ಒಂದು ಸಂಸ್ಥೆಗೆ ಪೇಟೆಂಟ್ ಇದ್ದರೆ ಅದರ ದರ ಹೇಗಿರುತ್ತದೆ ಮತ್ತು ಪೇಟೆಂಟ್ ಇಲ್ಲದಿದ್ದರೆ ಬಡವರಿಗೆ ಎಷ್ಟು ಲಾಭವಾಗುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search