• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ

Tulunadu News Posted On March 15, 2025
0


0
Shares
  • Share On Facebook
  • Tweet It

ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿಮಠದ ಮೂಲಮಠದಲ್ಲಿ ಮೊಕ್ಕಾಂನಲ್ಲಿರುವ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಮಠದ ಆರಾಧ್ಯ ದೇವರಾಗಿರುವ ಶ್ರೀ ವೇದವ್ಯಾಸ ದೇವರ ಮೂರ್ತಿಯನ್ನು ಹೊತ್ತು ಗಂಗಾಸ್ನಾನವನ್ನು ಮಾಡಿದರು.

ವಾರಣಾಸಿಯಲ್ಲಿರುವ ಮೂಲಮಠದಲ್ಲಿ ವೃಂದಾವನಸ್ಥರಾಗಿರುವ ಕಾಶೀಮಠದ ಗುರುಪರಂಪರೆಯ ಮೂರನೇ ಯತಿ ಶ್ರೀಮದ್ ಉಪೇಂದ್ರ ತೀರ್ಥ ಸ್ವಾಮೀಜಿಯವರ 350 ಪುಣ್ಯತಿಥಿ ಹಾಗೂ ಐದನೇ ಯತಿ ಶ್ರೀಮದ್ ರಾಘವೇಂದ್ರ ತೀರ್ಥ ಸ್ವಾಮೀಜಿಯವರ 300 ನೇ ಪುಣ್ಯತಿಥಿ ಆಚರಣೆಯ ಅಂಗವಾಗಿ ಮೂಲಮಠಕ್ಕೆ ಚಿತ್ತೈಸಿರುವ ಶ್ರೀಗಳು ಮಠದ ದೇವರಿಗೆ ಪೂಜೆಯನ್ನು ಸಲ್ಲಿಸಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಭಕ್ತರನ್ನು ಅನುಗ್ರಹಿಸಿದರು.

ಕಾಶಿಯ ಬ್ರಹ್ಮಘಾಟ್ ನಲ್ಲಿ ಕಾಶಿಮಠದ ಮೂಲಮಠ ಗಂಗಾನದಿಯ ದಡದಲ್ಲಿದ್ದು, ಇಲ್ಲಿ ಮೊಕ್ಕಾ ಮಾಡುವ ಕಾಶೀಮಠಾಧೀಶರು ಮಠದ ದೇವರ ಸಹಿತ ಗಂಗಾಸ್ನಾನ ಮಾಡುವ ಸಂಪ್ರದಾಯ ಅನಾದಿಕಾಲದಿಂದ ಜಾರಿಯಲ್ಲಿದೆ.

ಇಂತಹ ಪುಣ್ಯ ಸಂದರ್ಭದಲ್ಲಿ ಶ್ರೀಗಳೊಂದಿಗೆ ಗುಜರಾತ್ ಐಎಎಸ್ ಅಧಿಕಾರಿ ಡಾ. ವಿನೋದ್ ರಾವ್, ಮುಂಬೈ ಜಿಎಸ್ ಬಿ ಸೇವಾ ಮಂಡಲದ ಪ್ರಮುಖರಾದ ದೀಪಕ್ ಭಾಸ್ಕರ್ ಶೆಣೈ, ಮಂಗಳೂರು ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಮುಖಂಡರಾದ ನಿತಿನ್ ಪ್ರಭು, ಜಯಂತ ಪ್ರಭು, ರಾಜೀವ್ ವಾದ್ಯಾರ್, ಮನೋಹರ್ ನಾಯಕ್, ಚೆಂಪಿ ಉಮೇಶ್ ಭಟ್, ವೈದಿಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

0
Shares
  • Share On Facebook
  • Tweet It




Trending Now
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
  • Popular Posts

    • 1
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 2
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 3
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search