• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಚಿವರ, ಶಾಸಕರ ವೇತನ, ಭತ್ಯೆ ಹೆಚ್ಚಳಕ್ಕೆ ಮಸೂದೆ!

Tulunadu News Posted On March 20, 2025


  • Share On Facebook
  • Tweet It

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರ ಅನುಭವಕ್ಕೆ ಬಂದು ಸರಕಾರದ ವಿರುದ್ಧ ಆಕ್ರೋಶ ಹೊರಬೀಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಒಂದು ಕಡೆಯಿಂದ ಗ್ಯಾರಂಟಿಗೆ ಹಣ ಸಾಕಾಗದೇ ಇದ್ದಬದ್ದ ವಸ್ತುಗಳಿಗೆ ಬೆಲೆ ಹೆಚ್ಚಿಸುತ್ತಿರುವ ಸರಕಾರ ಇನ್ನೊಂದೆಡೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಹೊಂದಿಸಲಾಗದೇ ರಾಜ್ಯದಲ್ಲಿ ಪ್ರಗತಿ ಶೂನ್ಯವನ್ನಾಗಿಸಿದೆ. ಈಗ ಸರಕಾರ ಸಚಿವರಿಂದ ಹಿಡಿದು ಶಾಸಕರ ತನಕ ಎಲ್ಲರ ವೇತನ, ಭತ್ಯೆ ದುಪ್ಪಟ್ಟು ಮಾಡಲು ಹೊರಟಿದ್ದು, ಜನರ ಕೆಂಗೆಣ್ಣಿಗೆ ಗುರಿಯಾಗಿದೆ. ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧವಾಗಿದೆ. ಹಾಗಾದರೆ ಪ್ರಸ್ತುತ ಯಾರ ವೇತನ ಎಷ್ಟಿದೆ, ಎಷ್ಟು ಹೆಚ್ಚಾಗಲಿದೆ ಎನ್ನುವುದನ್ನು ನೋಡೋಣ.

ಈಗ ಶಾಸಕರಿಗೆ ಸಂಬಳ 40000 ಇದೆ. ಅದು 80000 ಕ್ಕೆ ಏರಿಕೆ ಆಗಲಿದೆ. ಅಂದರೆ ಒಂದೇ ಸಲಕ್ಕೆ ಡಬಲ್. ಇನ್ನು ಕ್ಷೇತ್ರ ಪ್ರವಾಸಕ್ಕೆ 60000 ಶಾಸಕರಿಗೆ ಸಿಗುತ್ತದೆ. ಅದು ಇನ್ನು 80000 ಕ್ಕೆ ಏರಲಿದೆ. ಇನ್ನು ರೈಲು, ವಿಮಾನ ಟಿಕೆಟ್ ವಾರ್ಷಿಕವಾಗಿ ಇವರಿಗೆ 2,50,000 ಇದ್ದರೆ ಅದು ಇನ್ನು 3,50,000 ಆಗಲಿದೆ. ಅದರೊಂದಿಗೆ ಶಾಸಕರಿಗೆ ಇನ್ನು ಕೆಲವು ಭತ್ಯೆಗಳು ಸಿಗಲಿದ್ದು, ಅದು ಪ್ರತ್ಯೇಕವಾಗಿರುತ್ತವೆ. ಇನ್ನು ಸಚಿವರಿಗೆ ಪ್ರಸ್ತುತ 60000 ರೂಪಾಯಿ ಸಂಬಳ ಇದ್ದರೆ ಅದು ಇನ್ನು 1.25 ಲಕ್ಷ ರೂಪಾಯಿಗೆ ಹೋಗಲಿದೆ. ಅದೇ ರೀತಿ ಮುಖ್ಯಮಂತ್ರಿ ವೇತನವೂ ಡಬಲ್ ಆಗಲಿದೆ. ಈಗ 75000 ರೂ ಇದ್ದದ್ದು ಇನ್ನು ಮುಂದೆ 1,50,000 ರೂ ಆಗಲಿದೆ. ಇನ್ನು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆತಿಥ್ಯ ಭತ್ಯೆ 4.50 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗಳಾಗಲಿವೆ. ಇನ್ನು ಸಚಿವರಿಗೆ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರೂಗಳಿಂದ ನೇರವಾಗಿ 2.50 ಲಕ್ಷ ರೂಪಾಯಿಗಳಿಗೆ ಹೋಗಲಿದೆ. ಇನ್ನು ಸಭ್ಯಾಧ್ಯಕ್ಷರ, ಸಭಾಪತಿಗಳ ವೇತನವೂ 75 ಸಾವಿರದಿಂದ 1.25 ಲಕ್ಷ ರೂಗಳಿಗೆ ಏರಲಿದೆ. ಇನ್ನು ಅವರ ಆತಿಥ್ಯ ಭತ್ಯೆ ಕೂಡ 4 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಏರಲಿದೆ. ಇವರುಗಳೊಂದಿಗೆ ಇನ್ನು ಸರಕಾರದ ವಿವಿಧ ಹುದ್ದೆಯಲ್ಲಿರುವ ಉಪಸಭಾಧ್ಯಕ್ಷ, ಉಪಸಭಾಪತಿ, ವಿಪಕ್ಷದ ನಾಯಕ, ಸರಕಾರದ ಮುಖ್ಯ ಸಚೇತಕ, ವಿಪಕ್ಷ ಮುಖ್ಯ ಸಚೇತಕರ ಮನೆ ಬಾಡಿಗೆಯೂ 1.60 ಲಕ್ಷ ರೂಗಳಿಂದ 2.50 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಅದರೊಂದಿಗೆ ಅವರ ಆತಿಥ್ಯ ಭತ್ಯೆಯೂ 2.50 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಇವರೆಲ್ಲರೂ ಅವರವರ ಜಿಲ್ಲೆಯಲ್ಲಿ, ತಾಲೂಕಿನಲ್ಲಿರುವಾಗ ಸರಕಾರಿ ಅತಿಥಿ ಗೃಹ, ಸರಕರಿ ಕಚೇರಿಯಲ್ಲಿ ಇದ್ದರೆ, ಬೆಂಗಳೂರಿನಲ್ಲಿರುವಾಗ ವಿಧಾನಸೌಧದ ಪಕ್ಕದಲ್ಲಿರುವ ವಿಕಾಸ ಸೌಧದಲ್ಲಿ ಇರುತ್ತಾರೆ. ಆದರೆ ಮನೆ ಬಾಡಿಗೆ ಮಾತ್ರ ಇವರಿಗೆ ಪ್ರತಿ ತಿಂಗಳು ಲಕ್ಷಗಳಲ್ಲಿ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಭರಿಸಬೇಕಾಗುತ್ತದೆ.

ಇಷ್ಟೇ ಅಲ್ಲದೆ ಇವರೆಲ್ಲರೂ ಮಾಜಿಗಳಾದರೂ ಇವರಿಗೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿ ಕೂಡ ನೀಡಲಾಗುತ್ತದೆ. ಶಾಸಕರಿಗೆ ಪಿಂಚಣಿ ಈಗ ಪ್ರಸ್ತುತ 50 ಸಾವಿರ ಇದ್ದರೆ ಇನ್ನು 75 ಸಾವಿರ ಆಗಲಿದೆ. ಹೆಚ್ಚುವರಿ ಪಿಂಚಣಿ ಇದ್ದದ್ದು 5 ರಿಂದ 20 ಸಾವಿರ ಆಗಲಿದೆ. ಮಾಜಿ ಶಾಸಕರ ವೈದ್ಯಕೀಯ ಭತ್ಯೆ 5 ರಿಂದ 20 ಸಾವಿರ ಆಗಲಿದೆ.

ಒಟ್ಟಿನಲ್ಲಿ ಜನಸಾಮಾನ್ಯರ ಸಂಬಳ ಹದಿನೈದು ಶೇಕಡಾ ಏರಲು ಕಷ್ಟವಿರುವ ಈ ದಿನಗಳಲ್ಲಿ ಶಾಸಕರು, ಸಚಿವರು ಏಕಾಏಕಿ ನೂರು ಶೇಕಡಾ ಏರಿಸುತ್ತಿರುವುದು ನಿಜಕ್ಕೂ ಅವರಿಗೆ ಆತ್ಮಸಾಕ್ಷಿಗೆ ನೋವಾಗಲ್ವೆ ಎನ್ನುವುದು ಕೇಳಬೇಕಾದ ಸಂಗತಿ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search