• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಚಿವರ, ಶಾಸಕರ ವೇತನ, ಭತ್ಯೆ ಹೆಚ್ಚಳಕ್ಕೆ ಮಸೂದೆ!

Tulunadu News Posted On March 20, 2025
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರ ಅನುಭವಕ್ಕೆ ಬಂದು ಸರಕಾರದ ವಿರುದ್ಧ ಆಕ್ರೋಶ ಹೊರಬೀಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಒಂದು ಕಡೆಯಿಂದ ಗ್ಯಾರಂಟಿಗೆ ಹಣ ಸಾಕಾಗದೇ ಇದ್ದಬದ್ದ ವಸ್ತುಗಳಿಗೆ ಬೆಲೆ ಹೆಚ್ಚಿಸುತ್ತಿರುವ ಸರಕಾರ ಇನ್ನೊಂದೆಡೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಹೊಂದಿಸಲಾಗದೇ ರಾಜ್ಯದಲ್ಲಿ ಪ್ರಗತಿ ಶೂನ್ಯವನ್ನಾಗಿಸಿದೆ. ಈಗ ಸರಕಾರ ಸಚಿವರಿಂದ ಹಿಡಿದು ಶಾಸಕರ ತನಕ ಎಲ್ಲರ ವೇತನ, ಭತ್ಯೆ ದುಪ್ಪಟ್ಟು ಮಾಡಲು ಹೊರಟಿದ್ದು, ಜನರ ಕೆಂಗೆಣ್ಣಿಗೆ ಗುರಿಯಾಗಿದೆ. ವೇತನ, ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧವಾಗಿದೆ. ಹಾಗಾದರೆ ಪ್ರಸ್ತುತ ಯಾರ ವೇತನ ಎಷ್ಟಿದೆ, ಎಷ್ಟು ಹೆಚ್ಚಾಗಲಿದೆ ಎನ್ನುವುದನ್ನು ನೋಡೋಣ.

ಈಗ ಶಾಸಕರಿಗೆ ಸಂಬಳ 40000 ಇದೆ. ಅದು 80000 ಕ್ಕೆ ಏರಿಕೆ ಆಗಲಿದೆ. ಅಂದರೆ ಒಂದೇ ಸಲಕ್ಕೆ ಡಬಲ್. ಇನ್ನು ಕ್ಷೇತ್ರ ಪ್ರವಾಸಕ್ಕೆ 60000 ಶಾಸಕರಿಗೆ ಸಿಗುತ್ತದೆ. ಅದು ಇನ್ನು 80000 ಕ್ಕೆ ಏರಲಿದೆ. ಇನ್ನು ರೈಲು, ವಿಮಾನ ಟಿಕೆಟ್ ವಾರ್ಷಿಕವಾಗಿ ಇವರಿಗೆ 2,50,000 ಇದ್ದರೆ ಅದು ಇನ್ನು 3,50,000 ಆಗಲಿದೆ. ಅದರೊಂದಿಗೆ ಶಾಸಕರಿಗೆ ಇನ್ನು ಕೆಲವು ಭತ್ಯೆಗಳು ಸಿಗಲಿದ್ದು, ಅದು ಪ್ರತ್ಯೇಕವಾಗಿರುತ್ತವೆ. ಇನ್ನು ಸಚಿವರಿಗೆ ಪ್ರಸ್ತುತ 60000 ರೂಪಾಯಿ ಸಂಬಳ ಇದ್ದರೆ ಅದು ಇನ್ನು 1.25 ಲಕ್ಷ ರೂಪಾಯಿಗೆ ಹೋಗಲಿದೆ. ಅದೇ ರೀತಿ ಮುಖ್ಯಮಂತ್ರಿ ವೇತನವೂ ಡಬಲ್ ಆಗಲಿದೆ. ಈಗ 75000 ರೂ ಇದ್ದದ್ದು ಇನ್ನು ಮುಂದೆ 1,50,000 ರೂ ಆಗಲಿದೆ. ಇನ್ನು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಆತಿಥ್ಯ ಭತ್ಯೆ 4.50 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗಳಾಗಲಿವೆ. ಇನ್ನು ಸಚಿವರಿಗೆ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರೂಗಳಿಂದ ನೇರವಾಗಿ 2.50 ಲಕ್ಷ ರೂಪಾಯಿಗಳಿಗೆ ಹೋಗಲಿದೆ. ಇನ್ನು ಸಭ್ಯಾಧ್ಯಕ್ಷರ, ಸಭಾಪತಿಗಳ ವೇತನವೂ 75 ಸಾವಿರದಿಂದ 1.25 ಲಕ್ಷ ರೂಗಳಿಗೆ ಏರಲಿದೆ. ಇನ್ನು ಅವರ ಆತಿಥ್ಯ ಭತ್ಯೆ ಕೂಡ 4 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಏರಲಿದೆ. ಇವರುಗಳೊಂದಿಗೆ ಇನ್ನು ಸರಕಾರದ ವಿವಿಧ ಹುದ್ದೆಯಲ್ಲಿರುವ ಉಪಸಭಾಧ್ಯಕ್ಷ, ಉಪಸಭಾಪತಿ, ವಿಪಕ್ಷದ ನಾಯಕ, ಸರಕಾರದ ಮುಖ್ಯ ಸಚೇತಕ, ವಿಪಕ್ಷ ಮುಖ್ಯ ಸಚೇತಕರ ಮನೆ ಬಾಡಿಗೆಯೂ 1.60 ಲಕ್ಷ ರೂಗಳಿಂದ 2.50 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಅದರೊಂದಿಗೆ ಅವರ ಆತಿಥ್ಯ ಭತ್ಯೆಯೂ 2.50 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಲಿದೆ. ಇವರೆಲ್ಲರೂ ಅವರವರ ಜಿಲ್ಲೆಯಲ್ಲಿ, ತಾಲೂಕಿನಲ್ಲಿರುವಾಗ ಸರಕಾರಿ ಅತಿಥಿ ಗೃಹ, ಸರಕರಿ ಕಚೇರಿಯಲ್ಲಿ ಇದ್ದರೆ, ಬೆಂಗಳೂರಿನಲ್ಲಿರುವಾಗ ವಿಧಾನಸೌಧದ ಪಕ್ಕದಲ್ಲಿರುವ ವಿಕಾಸ ಸೌಧದಲ್ಲಿ ಇರುತ್ತಾರೆ. ಆದರೆ ಮನೆ ಬಾಡಿಗೆ ಮಾತ್ರ ಇವರಿಗೆ ಪ್ರತಿ ತಿಂಗಳು ಲಕ್ಷಗಳಲ್ಲಿ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಭರಿಸಬೇಕಾಗುತ್ತದೆ.

ಇಷ್ಟೇ ಅಲ್ಲದೆ ಇವರೆಲ್ಲರೂ ಮಾಜಿಗಳಾದರೂ ಇವರಿಗೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿ ಕೂಡ ನೀಡಲಾಗುತ್ತದೆ. ಶಾಸಕರಿಗೆ ಪಿಂಚಣಿ ಈಗ ಪ್ರಸ್ತುತ 50 ಸಾವಿರ ಇದ್ದರೆ ಇನ್ನು 75 ಸಾವಿರ ಆಗಲಿದೆ. ಹೆಚ್ಚುವರಿ ಪಿಂಚಣಿ ಇದ್ದದ್ದು 5 ರಿಂದ 20 ಸಾವಿರ ಆಗಲಿದೆ. ಮಾಜಿ ಶಾಸಕರ ವೈದ್ಯಕೀಯ ಭತ್ಯೆ 5 ರಿಂದ 20 ಸಾವಿರ ಆಗಲಿದೆ.

ಒಟ್ಟಿನಲ್ಲಿ ಜನಸಾಮಾನ್ಯರ ಸಂಬಳ ಹದಿನೈದು ಶೇಕಡಾ ಏರಲು ಕಷ್ಟವಿರುವ ಈ ದಿನಗಳಲ್ಲಿ ಶಾಸಕರು, ಸಚಿವರು ಏಕಾಏಕಿ ನೂರು ಶೇಕಡಾ ಏರಿಸುತ್ತಿರುವುದು ನಿಜಕ್ಕೂ ಅವರಿಗೆ ಆತ್ಮಸಾಕ್ಷಿಗೆ ನೋವಾಗಲ್ವೆ ಎನ್ನುವುದು ಕೇಳಬೇಕಾದ ಸಂಗತಿ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search