• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

40 ವರ್ಷಗಳಿಂದ ಈ ದೇವಳದಿಂದ ನಡೆಯುತ್ತಿದೆ ಇಫ್ತಾರ್ ಆಚರಣೆ!

Tulunadu News Posted On March 22, 2025


  • Share On Facebook
  • Tweet It

ರಮ್ಜಾನ್ ಮುಸ್ಲಿಮರ ಪವಿತ್ರ ಮಾಸ. ಈ ಸಮಯದಲ್ಲಿ ಸೂರ್ಯಾಸ್ತಮಾನದ ನಂತರ ಉಪವಾಸ ಮುರಿದು ಆಹಾರ ಸೇವಿಸುವ ಪದ್ಧತಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ. ಇದು ದೇಶ, ವಿದೇಶದಲ್ಲಿ ನಡೆದುಕೊಂಡು ಬಂದಿದೆ. ಆದರೆ ಮುಸ್ಲಿಮರ ಇಫ್ತಾರ್ ಕೂಟಕ್ಕೆ ದೇವಾಲಯವೊಂದು ಆಹಾರ ಪೂರೈಸುತ್ತಿದೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಷ್ಟಕ್ಕೂ ಈ ದೇವಸ್ಥಾನ ಇರುವುದು ಬೇರೆ ಎಲ್ಲಿಯೂ ಅಲ್ಲ. ತಮಿಳುನಾಡಿನ ರಾಜಧಾನಿ ಚೆನೈ ನಗರದ ಹೃದಯಭಾಗದಲ್ಲಿ.

ಈ ದೇವಸ್ಥಾನ ಚೆನೈನ ಮೈಲಾಪುರ್ ಎನ್ನುವ ಏರಿಯಾದಲ್ಲಿ ಇದೆ. ಕಳೆದ 40 ವರ್ಷಗಳಿಂದ ಪ್ರತಿ ರಮ್ಜಾನ್ ಮಾಸದಲ್ಲಿ ನಿತ್ಯ ಇಲ್ಲಿ ಇಫ್ತಾರ್ ಆಹಾರವನ್ನು ತಯಾರಿಸಲಾಗುತ್ತದೆ. ದಾದಾ ರತನಚಂದ್ ಎನ್ನುವ ನಿರಾಶ್ರಿತ ವ್ಯಕ್ತಿ ಭಾರತ ವಿಭಜನೆಯ ಸಂದರ್ಭದಲ್ಲಿ ಚೆನೈನಲ್ಲಿ ಆಶ್ರಯ ಪಡೆದುಕೊಂಡಿದ್ದಾಗ ಈ ದೇವಸ್ಥಾನವನ್ನು ನಿರ್ಮಿಸಿದ್ದರು. ನಂತರ ಇಲ್ಲಿ ಇಫ್ತಾರ್ ಆಹಾರವನ್ನು ತಯಾರಿಸುವ ಸಂಪ್ರದಾಯವನ್ನು ಆರಂಭಿಸಿದ್ದರು. ಅದು ಈಗ 40 ವರ್ಷಗಳಿಂದ ಜಾರಿಯಲ್ಲಿದೆ.

ಇಲ್ಲಿನ ಸ್ವಯಂ ಸೇವಕರು ನಿತ್ಯ ಬೆಳಿಗ್ಗೆ 7.30 ರಿಂದ ಆಹಾರ ತಯಾರಿಸುವ ಕೆಲಸಕಾರ್ಯವನ್ನು ಆರಂಭಿಸುತ್ತಾರೆ. ನಿತ್ಯ 1200 ಜನರಿಗೆ ಆಹಾರ ತಯಾರಿಸಲಾಗುತ್ತದೆ. ಅದರಲ್ಲಿ ಬಿರಿಯಾನಿ, ಫ್ರೈಡ್ ರೈಸ್, ಉಪ್ಪಿನಕಾಯಿ, ಕೇಸರಿ ಹಾಲು ಮತ್ತು ಹಣ್ಣುಹಂಪಲುಗಳು ಸೇರಿರುತ್ತವೆ. ದೇವಳದಲ್ಲಿ ತಯಾರಿಸಿದ ಆಹಾರವನ್ನು ಹತ್ತಿರದ ಮಸೀದಿಯಲ್ಲಿ ಅಲ್ಲಿ ಆಗಮಿಸಿದ ಜನರಿಗೆ ಹಂಚಲಾಗುತ್ತದೆ. ಅದರೊಂದಿಗೆ ಆಹಾರವನ್ನು ಮನೆಗಳಿಗೂ ಹಂಚುವ ಕ್ರಮ ಚಾಲ್ತಿಯಲ್ಲಿದೆ.

ಈ ದೇವಸ್ಥಾನ ಎಲ್ಲಾ ಧರ್ಮ, ಮತದವರ ನಡುವೆ ಸೌಹಾರ್ದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಇಲ್ಲಿನ ವಿವಿಧ ಮತ, ಸಂಪ್ರದಾಯದವರು ಅಭಿಪ್ರಾಯ ಪಟ್ಟಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search