• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುವತಿಯರೊಂದಿಗೆ ಸೆಲ್ಫಿ ತೆಗೆಸಲು ರಾಜಕಾರಣಿಗಳು ಹಿಂದೇಟು! ಹನಿಟ್ರಾಪ್ ಇಫೆಕ್ಟ್!

Tulunadu News Posted On March 24, 2025
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಈಗ ಹನಿಟ್ರಾಪಿನದ್ದೇ ಸುದ್ದಿ. ಯಾವಾಗ ಅಧಿವೇಶನದಲ್ಲಿಯೇ ಸಚಿವ ರಾಜಣ್ಣ ತಮ್ಮ ಮೇಲೆ ಹನಿಟ್ರಾಪಿನ ಪ್ರಯತ್ನ ನಡೆದಿದೆ ಎಂದು ಹೇಳಿದರೋ ಅದರ ನಂತರ ಹನಿಟ್ರಾಪ್ ವಿಷಯ ರಾಜ್ಯದಲ್ಲಿ ಜೋರಾಗಿ ಚಲಾವಣೆಯಲ್ಲಿದೆ. ಇನ್ನು ಆಡಳಿತ, ವಿಪಕ್ಷದ ಒಟ್ಟು 48 ಶಾಸಕರ ಹನಿಟ್ರಾಪ್ ನಡೆದಿದೆ ಎನ್ನುವ ವಿಷಯದಲ್ಲಿ ಪ್ರತಿ ಶಾಸಕರೂ ಹೆದರುವ ಪ್ರಸಂಗ ಉದ್ಭವಿಸಿದೆ. ಯಾರಾದರೂ ಯುವತಿ ಫೋನ್ ಮಾಡಿದರೆ ಮಾತನಾಡಲು ನೂರು ಸಲ ಯೋಚಿಸುವ ಪರಿಸ್ಥಿತಿಗೆ ಕರ್ನಾಟಕದ ಶಾಸಕರು ಬಂದಿದ್ದಾರೆ. ಇನ್ನು ಯುವತಿಯರು ಯಾರಾದರೂ ಸಿಂಗಲ್ ಆಗಿ ಭೇಟಿ ಮಾಡಲು ಬಂದರೆ ತಕ್ಷಣ ಯಾರೂ ಇಲ್ಲದಿದ್ದರೆ ಕನಿಷ್ಟ ಕಚೇರಿಯ ಸಿಬ್ಬಂದಿಗಳನ್ನಾದರೂ ಕರೆಸಿ ಮಾತನಾಡುವ ಪ್ರಸಂಗ ಇದೆ. ಇದಕ್ಕೆಲ್ಲಾ ಕಾರಣ ಹನಿಟ್ರಾಪ್. ಒಂದು ವೇಳೆ ಫೋಟೋ ತೆಗೆಯಲೇಬೇಕು ಎಂದು ಯುವತಿ ಒತ್ತಾಯ ಮಾಡಿದರೆ ಗ್ರೂಪ್ ಫೋಟೋ ಮಾತ್ರ ಎನ್ನುವ ಕಂಡೀಷನ್ ಹಾಕುವ ಅನಿವಾರ್ಯತೆ ಇದೆ. ಯಾಕೆಂದರೆ ಯಾರು ಹನಿ ಟ್ರಾಪ್ ಮಾಡಲು ಬಂದವರು, ಯಾರು ನಿಜವಾಗಿ ಕಷ್ಟ, ಸುಖ ಹೇಳಲು ಬಂದವರು ಎಂದು ಗೊತ್ತಾಗದೇ ಸಾರ್ವಜನಿಕ ಜೀವನದಲ್ಲಿರುವ ಶಾಸಕರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.

ಇಂತಹ ಸ್ಥಿತಿ ಪ್ರತಿ ಶಾಸಕರಿಗೂ ಬಂದಿದ್ದರೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಮಾತ್ರ ಈ ವಿಷಯವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಬಿಜೆಪಿಯ ಯಾರಿಗೆಲ್ಲಾ ಹನಿಟ್ರಾಪಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾರಾಯಣ ತಮ್ಮ ಸಾರ್ವಜನಿಕ ಜೀವನ ಕ್ರಮ ಬದಲಾಗಿರುವುದರ ಹಿಂದಿನ ಹಿಂಟ್ ಕೊಟ್ಟರು.

ಯಾರಾದರೂ ಯುವತಿ ಫೋನ್ ಮಾಡಿದರೆ ಮೊದಲಿಗೆ ಅವರ ಕಚೇರಿಯ ಸಿಬ್ಬಂದಿಯೇ ಮಾತನಾಡುತ್ತಾರಂತೆ. ಅವರು ಮಾತನಾಡಿ ಎನು ವಿಷಯ ಎಂದು ಕೂಲಂಕುಶವಾಗಿ ಕೇಳಿ ನಂತರ ಅಗತ್ಯ ಬಿದ್ದರೆ ನಾರಾಯಣ ಸ್ವಾಮಿಯವರಿಗೆ ಕೊಡುತ್ತಾರಂತೆ. ಸೆಲ್ಫಿ ಅಥವಾ ಸಿಂಗಲ್ ಫೋಟೋಗೆ ನೋ ಎಂದು ಹೇಳುವ ಪರಿಪಾಠ ಆರಂಭಿಸಿದ್ದಾರಂತೆ. ಏನಿದ್ದರೂ ಗ್ರೂಪ್ ಫೋಟೋ ಮಾತ್ರ. ಕಚೇರಿಯಲ್ಲಿ ಸಿಬ್ಬಂದಿಯವರ ಜೊತೆ, ಸಾರ್ವಜನಿಕರ ಜೊತೆಯಲ್ಲಿ ಕುಳಿತು ಯುವತಿಯರೊಂದಿಗೆ ಮಾತುಕತೆ ಮಾತ್ರ. ಬಹಿರಂಗವಾಗಿ ಹೇಳಬೇಕು. ಅದು ಬಿಟ್ಟು ಪರ್ಸನಲ್ ಆಗಿ ಇಲ್ಲವೇ ಇಲ್ಲ. ಏಕೆಂದರೆ ಒಮ್ಮೆ ಹನಿಟ್ರಾಪಿಗೆ ಸಿಲುಕಿದರೆ ನಂತರ ಆ ಪಾಡು ಯಾರಿಗೂ ಬೇಡಾ ಎಂದು ನಾರಾಯಣ ಸ್ವಾಮಿ ಹೇಳಿದ್ದಾರೆ.

ಈಗ ಬಹುತೇಕ ಶಾಸಕರು, ಸಚಿವರು ಇದನ್ನೇ ಅನುಸರಿಸುತ್ತಿದ್ದಾರೆ. ಹಾಗಂತ ಬಹಿರಂಗವಾಗಿ ಹೇಳಲಾಗದ ಸ್ಥಿತಿ. ಪರಿಚಯದ ಮಹಿಳೆ ಬಂದು ಫೋಟೋ ಕೇಳಿದರೂ ಇಲ್ಲವೆನ್ನಲಾಗದ ಕಥೆ. ಯಾಕೆಂದರೆ ಯಾವಾಗ, ಎಲ್ಲಿ ಗ್ರಹಚಾರ ಕೆಟ್ಟಿದೆ ಎಂದು ಹೇಳಲು ಆಗುವುದಿಲ್ಲವಲ್ಲ.

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search