• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಸಲ್ಮಾನ್-ರಶ್ಮಿಕಾ 31 ವಯಸ್ಸಿನ ಅಂತರ! ಇದಕ್ಕೆ ಸಲ್ಲು ಉತ್ತರ ಏನು?

Tulunadu News Posted On March 24, 2025
0


0
Shares
  • Share On Facebook
  • Tweet It

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಈಗ ತಮ್ಮ ಹೊಸ ಸಿನೆಮಾದ ಬಿಡುಗಡೆಯ ಸಂತಸದಲ್ಲಿದ್ದಾರೆ. 60 ನೇ ವಯಸ್ಸಿಗೆ ಕಾಲಿಟ್ಟಿರುವ ಸಲ್ಮಾನ್ ಈಗಲೂ ಬಾಲಿವುಡ್ ಬೇಡಿಕೆಯ ನಟ. ಅವರ ಹೊಸ ಸಿನೆಮಾ ಸಿಕಂದರ್ ಬೆಳ್ಳಿತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಇದರ ಪ್ರಚಾರಕ್ಕಾಗಿ ಅವರು ಸಿನೆಮಾದ ನಾಯಕಿ, ಕೊಡಗಿನ ಮೂಲದ ರಶ್ಮಿಕಾ ಮಂದಣ್ಣ ಜೊತೆ ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ. ಅಲ್ಲಿ ಮಾಧ್ಯಮದವರ ಜೊತೆ ಸಿನೆಮಾದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮುಂಬೈಯಲ್ಲಿ ಸಿನೆಮಾ ಪ್ರಚಾರದಲ್ಲಿ ಭಾಗವಹಿಸಿದರು. ಅಲ್ಲಿ ಅವರಿಗೆ ಮಾಧ್ಯಮದವರ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ ವಯಸ್ಸಿನ ಅಂತರ ಮತ್ತು ರೋಮಾನ್ಸ್.

ಸಲ್ಲುವಿಗೆ ಈಗ 60 ರ ಹರೆಯ. ರಶ್ಮಿಕಾ ಇನ್ನೂ 28 ರ ಹೊಸ್ತಿಲಲ್ಲಿ ಇದ್ದಾರೆ. ಏನೇ ಅಳೆದು ತೂಗಿ ಹಾಕಿದರೂ 31 ವರ್ಷದ ಗ್ಯಾಪ್ ಇದೆ. ಇದು ಒಂದು ತಂದೆ, ಮಗಳ ವಯಸ್ಸಿನ ಅಂತರದಷ್ಟೇ ಇದೆ. ಹೀಗಿರುವಾಗ ತೆರೆಯ ಮೇಲೆ ಜೋಡಿಯಾಗಿ ನಟಿಸುವಾಗ ರೋಮಾನ್ಸ್ ಇದ್ದರೆ ಅದನ್ನು ಹೇಗೆ ನಿರ್ವಹಿಸುವಿರಿ ಎಂದು ಮಾಧ್ಯಮದವರು ಕೇಳಿದ್ದಾರೆ. ಇಂತಹ ಪ್ರಶ್ನೆ ಬಂದಾಗ ತಮ್ಮ ನೇರ ಉತ್ತರಕ್ಕೆ ಹೆಸರಾಗಿರುವ ಸಲ್ಲು ” ರೋಮಾನ್ಸ್ ಬಗ್ಗೆ ರಶ್ಮಿಕಾರಿಗೆ ತೊಂದರೆ ಇಲ್ಲ. ಇನ್ನು ನಿಮಗ್ಯಾಕೆ ಸಮಸ್ಯೆ?” ಎಂದು ಮರುಪ್ರಶ್ನೆ ಹಾಕಿದ್ದಾರೆ. ಸಲ್ಮಾನ್ ಖಾನ್ ಈ ಉತ್ತರದಿಂದ ಅಲ್ಲಿಯೇ ಇದ್ದ ರಶ್ಮಿಕಾ ನಾಚಿ ನೀರಾಗಿದ್ದಾರೆ. ರಶ್ಮಿಕಾ ಪ್ರತಿಕ್ರಿಯೆ ಕಂಡು ಇನ್ನಷ್ಟು ಉತ್ಸಾಹಭರಿತವಾಗಿ ಮಾತನಾಡುವುದನ್ನು ಮುಂದುವರೆಸಿದ ಸಲ್ಮಾನ್ ” ಮುಂದೆ ರಶ್ಮಿಕಾಗೆ ಮದುವೆಯಾಗಿ ಅವಳಿಗೆ ಹೆಣ್ಣುಮಕ್ಕಳಾದರೆ, ಆ ಮಕ್ಕಳು ದೊಡ್ಡವರಾದ ಬಳಿಕ ರಶ್ಮಿಕಾ ಸಮ್ಮತಿ ಪಡೆದು ಅಕೆಯ ಪುತ್ರಿ ಜೊತೆಗೂ ಅಭಿನಯಿಸುವೆ” ಎಂದು ಹೇಳಿದ್ದಾರೆ. ಇದರಿಂದ ರಶ್ಮಿಕಾ ಅವರು ಇನ್ನಷ್ಟು ನಾಚಿದ್ದು, ಅಲ್ಲಿ ಚಿತ್ರತಂಡದಲ್ಲಿ ಖುಷಿಯ ಅಲೆ ಎಬ್ಬಿಸಿತ್ತು.

ಸಲ್ಮಾನ್ ಈಗಾಗಲೇ ತಮಗಿಂತ ಎಷ್ಟೋ ಚಿಕ್ಕವರಾದ ನಟಿಯೊಂದಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅದಕ್ಕೆ ಅವರು ಇಟ್ಟುಕೊಂಡಿರುವ ವರ್ಚಸ್ಸು, ದೇಹಧಾಡ್ಯತೆ ಮತ್ತು ಜನಪ್ರಿಯತೆಯೇ ಕಾರಣ. ಇದರಿಂದ ಅವರೊಂದಿಗೆ ನಟಿಸಲು ಎಷ್ಟೇ ಚಿಕ್ಕ ವಯಸ್ಸಿನ ನಟಿಯರಾದರೂ ಒಪ್ಪಿಕೊಳ್ಳುತ್ತಾರೆ. ಅದರೊಂದಿಗೆ ಸಂಭಾವನೆ, ಪರದೆಯ ಮೇಲೆ ಪ್ರಭಾವಿ ಪಾತ್ರ ಹಾಗೂ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆಗೆ ಸಿಗುವ ಅವಕಾಶ ಎಲ್ಲವೂ ಗಣನೆಗೆ ಬರುವುದರಿಂದ ನಟಿಯರೂ ಇಲ್ಲಿ ವಯಸ್ಸಿನ ಅಂತರ ನೋಡುವುದಿಲ್ಲ. ಅದರೆ ಕೆಲವೊಮ್ಮೆ ಪ್ರೇಕ್ಷಕ ಮಾತ್ರ ತೆರೆಯ ಮೇಲೆ ಜೋಡಿ ಚೆನ್ನಾಗಿ ಕಾಣಿಸಿ ಕೆಮೆಸ್ಟ್ರಿ ವರ್ಕ್ ಔಟ್ ಆದರೆ ಓಕೆ ಎನ್ನುತ್ತಾನೆ, ಇಲ್ಲದಿದ್ದರೆ ರಿಜೆಕ್ಟ್ ಮಾಡುತ್ತಾನೆ. ಒಟ್ಟಿನಲ್ಲಿ ಸಿಕಂದರ್ ತೆರೆಗೆ ಬಂದ ನಂತರ ರಶ್ಮಿಕಾ ಜೊತೆ ಸಲ್ಲು ರೋಮಾನ್ಸ್ ಅನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search