• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಲ್ಮಾನ್-ರಶ್ಮಿಕಾ 31 ವಯಸ್ಸಿನ ಅಂತರ! ಇದಕ್ಕೆ ಸಲ್ಲು ಉತ್ತರ ಏನು?

Tulunadu News Posted On March 24, 2025


  • Share On Facebook
  • Tweet It

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಈಗ ತಮ್ಮ ಹೊಸ ಸಿನೆಮಾದ ಬಿಡುಗಡೆಯ ಸಂತಸದಲ್ಲಿದ್ದಾರೆ. 60 ನೇ ವಯಸ್ಸಿಗೆ ಕಾಲಿಟ್ಟಿರುವ ಸಲ್ಮಾನ್ ಈಗಲೂ ಬಾಲಿವುಡ್ ಬೇಡಿಕೆಯ ನಟ. ಅವರ ಹೊಸ ಸಿನೆಮಾ ಸಿಕಂದರ್ ಬೆಳ್ಳಿತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಇದರ ಪ್ರಚಾರಕ್ಕಾಗಿ ಅವರು ಸಿನೆಮಾದ ನಾಯಕಿ, ಕೊಡಗಿನ ಮೂಲದ ರಶ್ಮಿಕಾ ಮಂದಣ್ಣ ಜೊತೆ ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ. ಅಲ್ಲಿ ಮಾಧ್ಯಮದವರ ಜೊತೆ ಸಿನೆಮಾದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಮುಂಬೈಯಲ್ಲಿ ಸಿನೆಮಾ ಪ್ರಚಾರದಲ್ಲಿ ಭಾಗವಹಿಸಿದರು. ಅಲ್ಲಿ ಅವರಿಗೆ ಮಾಧ್ಯಮದವರ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ ವಯಸ್ಸಿನ ಅಂತರ ಮತ್ತು ರೋಮಾನ್ಸ್.

ಸಲ್ಲುವಿಗೆ ಈಗ 60 ರ ಹರೆಯ. ರಶ್ಮಿಕಾ ಇನ್ನೂ 28 ರ ಹೊಸ್ತಿಲಲ್ಲಿ ಇದ್ದಾರೆ. ಏನೇ ಅಳೆದು ತೂಗಿ ಹಾಕಿದರೂ 31 ವರ್ಷದ ಗ್ಯಾಪ್ ಇದೆ. ಇದು ಒಂದು ತಂದೆ, ಮಗಳ ವಯಸ್ಸಿನ ಅಂತರದಷ್ಟೇ ಇದೆ. ಹೀಗಿರುವಾಗ ತೆರೆಯ ಮೇಲೆ ಜೋಡಿಯಾಗಿ ನಟಿಸುವಾಗ ರೋಮಾನ್ಸ್ ಇದ್ದರೆ ಅದನ್ನು ಹೇಗೆ ನಿರ್ವಹಿಸುವಿರಿ ಎಂದು ಮಾಧ್ಯಮದವರು ಕೇಳಿದ್ದಾರೆ. ಇಂತಹ ಪ್ರಶ್ನೆ ಬಂದಾಗ ತಮ್ಮ ನೇರ ಉತ್ತರಕ್ಕೆ ಹೆಸರಾಗಿರುವ ಸಲ್ಲು ” ರೋಮಾನ್ಸ್ ಬಗ್ಗೆ ರಶ್ಮಿಕಾರಿಗೆ ತೊಂದರೆ ಇಲ್ಲ. ಇನ್ನು ನಿಮಗ್ಯಾಕೆ ಸಮಸ್ಯೆ?” ಎಂದು ಮರುಪ್ರಶ್ನೆ ಹಾಕಿದ್ದಾರೆ. ಸಲ್ಮಾನ್ ಖಾನ್ ಈ ಉತ್ತರದಿಂದ ಅಲ್ಲಿಯೇ ಇದ್ದ ರಶ್ಮಿಕಾ ನಾಚಿ ನೀರಾಗಿದ್ದಾರೆ. ರಶ್ಮಿಕಾ ಪ್ರತಿಕ್ರಿಯೆ ಕಂಡು ಇನ್ನಷ್ಟು ಉತ್ಸಾಹಭರಿತವಾಗಿ ಮಾತನಾಡುವುದನ್ನು ಮುಂದುವರೆಸಿದ ಸಲ್ಮಾನ್ ” ಮುಂದೆ ರಶ್ಮಿಕಾಗೆ ಮದುವೆಯಾಗಿ ಅವಳಿಗೆ ಹೆಣ್ಣುಮಕ್ಕಳಾದರೆ, ಆ ಮಕ್ಕಳು ದೊಡ್ಡವರಾದ ಬಳಿಕ ರಶ್ಮಿಕಾ ಸಮ್ಮತಿ ಪಡೆದು ಅಕೆಯ ಪುತ್ರಿ ಜೊತೆಗೂ ಅಭಿನಯಿಸುವೆ” ಎಂದು ಹೇಳಿದ್ದಾರೆ. ಇದರಿಂದ ರಶ್ಮಿಕಾ ಅವರು ಇನ್ನಷ್ಟು ನಾಚಿದ್ದು, ಅಲ್ಲಿ ಚಿತ್ರತಂಡದಲ್ಲಿ ಖುಷಿಯ ಅಲೆ ಎಬ್ಬಿಸಿತ್ತು.

ಸಲ್ಮಾನ್ ಈಗಾಗಲೇ ತಮಗಿಂತ ಎಷ್ಟೋ ಚಿಕ್ಕವರಾದ ನಟಿಯೊಂದಿಗೆ ನಾಯಕನಾಗಿ ಅಭಿನಯಿಸಿದ್ದಾರೆ. ಅದಕ್ಕೆ ಅವರು ಇಟ್ಟುಕೊಂಡಿರುವ ವರ್ಚಸ್ಸು, ದೇಹಧಾಡ್ಯತೆ ಮತ್ತು ಜನಪ್ರಿಯತೆಯೇ ಕಾರಣ. ಇದರಿಂದ ಅವರೊಂದಿಗೆ ನಟಿಸಲು ಎಷ್ಟೇ ಚಿಕ್ಕ ವಯಸ್ಸಿನ ನಟಿಯರಾದರೂ ಒಪ್ಪಿಕೊಳ್ಳುತ್ತಾರೆ. ಅದರೊಂದಿಗೆ ಸಂಭಾವನೆ, ಪರದೆಯ ಮೇಲೆ ಪ್ರಭಾವಿ ಪಾತ್ರ ಹಾಗೂ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆಗೆ ಸಿಗುವ ಅವಕಾಶ ಎಲ್ಲವೂ ಗಣನೆಗೆ ಬರುವುದರಿಂದ ನಟಿಯರೂ ಇಲ್ಲಿ ವಯಸ್ಸಿನ ಅಂತರ ನೋಡುವುದಿಲ್ಲ. ಅದರೆ ಕೆಲವೊಮ್ಮೆ ಪ್ರೇಕ್ಷಕ ಮಾತ್ರ ತೆರೆಯ ಮೇಲೆ ಜೋಡಿ ಚೆನ್ನಾಗಿ ಕಾಣಿಸಿ ಕೆಮೆಸ್ಟ್ರಿ ವರ್ಕ್ ಔಟ್ ಆದರೆ ಓಕೆ ಎನ್ನುತ್ತಾನೆ, ಇಲ್ಲದಿದ್ದರೆ ರಿಜೆಕ್ಟ್ ಮಾಡುತ್ತಾನೆ. ಒಟ್ಟಿನಲ್ಲಿ ಸಿಕಂದರ್ ತೆರೆಗೆ ಬಂದ ನಂತರ ರಶ್ಮಿಕಾ ಜೊತೆ ಸಲ್ಲು ರೋಮಾನ್ಸ್ ಅನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

  • Share On Facebook
  • Tweet It


- Advertisement -


Trending Now
ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
Tulunadu News May 30, 2025
ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
Tulunadu News May 30, 2025
Leave A Reply

  • Recent Posts

    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?
    • ಸೋಮಶೇಖರ್, ಹೆಬ್ಬಾರ್ ಬಿಜೆಪಿಯಿಂದ ಕೊನೆಗೂ ಗೇಟ್ ಪಾಸ್!
    • ಕೋವಿಡ್ ಏರಿಕೆ: ಮಕ್ಕಳ, ವೃದ್ಧರ, ಗರ್ಭೀಣಿಯರ ಬಗ್ಗೆ ಸರಕಾರ ಹೇಳಿದ್ದೇನು?
  • Popular Posts

    • 1
      ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • 2
      ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • 3
      ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • 4
      ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • 5
      ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search