• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಾಜಪಾ ರಾಜ್ಯಾಧ್ಯಕ್ಷರಾಗಿ ಕೇರಳದಲ್ಲಿ ಬಿಜೆಪಿಯನ್ನು ಗೆಲ್ಲಿಸಬಲ್ಲರೇ ರಾಜೀವ್ ಚಂದ್ರಶೇಖರ್?

Tulunadu News Posted On March 24, 2025


  • Share On Facebook
  • Tweet It

ಮಾಜಿ ಕೇಂದ್ರ ಸಚಿವ, ಮಾಧ್ಯಮ ಲೋಕದ ದೊಡ್ಡ ಹೆಸರು ರಾಜೀವ್ ಚಂದ್ರಶೇಖರ್ ಅವರನ್ನು ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ನಾಯಕರು ಕೇರಳ ಬಿಜೆಪಿಯ ಸಾರಥಿಯನ್ನಾಗಿ ಮಾಡುವ ಮೂಲಕ ಬಹುದೊಡ್ಡ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ, ಆದರೆ ನಿರಂತರ ಹೋರಾಟ, ಪ್ರತಿಭಟನೆ, ಬಂದ್ ನಿಂದಾಗಿ ಯುವಜನಾಂಗದ ವಿಶ್ವಾಸವನ್ನು ಕಳೆದುಕೊಂಡಿರುವ ಕೇರಳದ ರಾಜಕೀಯ ವಾತಾವರಣವನ್ನು ಸರಿಮಾಡಲು ಒಬ್ಬ ಗುರುತರ ಜವಾಬ್ದಾರಿ ಹೊರಬಲ್ಲ ನಾಯಕನ ಅವಶ್ಯಕತೆ ಬಿಜೆಪಿಗೆ ಇತ್ತು.

ಇಲ್ಲಿಯ ತನಕ ಬಿಜೆಪಿ ಕೇರಳದಲ್ಲಿ ಕಮ್ಯೂನಿಸ್ಟರಿಗೆ, ಕಾಂಗ್ರೆಸ್ಸಿಗೆ ಟಕ್ಕರ್ ಕೊಡುತ್ತಿದ್ದರೂ ಇಡೀ ರಾಜ್ಯವ್ಯಾಪಿ ವರ್ಚಸ್ಸು ಹೊಂದಿರುವ ನಾಯಕ ಸಿಕ್ಕಿರಲಿಲ್ಲ. ರಾಜೀವ್ ಚಂದ್ರಶೇಖರ್ ಎಲ್ಲಾ ರೀತಿಯ ಬಲ, ಇಮೇಜ್, ಪರಿಣಿತಿ ಹೊಂದಿರುವುದರಿಂದ ಕೇರಳದ ಯುವಜನಾಂಗಕ್ಕೆ ಮುಂದಿನ ಭವಿಷ್ಯವಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ಬಿಜೆಪಿ ನಾಯಕರ ನಂಬಿಕೆ. ಅದೆಲ್ಲವನ್ನು ಪರಿಗಣಿಸಿ ರಾಜೀವ್ ಚಂದ್ರಶೇಖರ್ ಅವರನ್ನು ಕೇರಳ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದ ಪತ್ರವನ್ನು ತಿರುವನಂತಪುರದಲ್ಲಿ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಸ್ತಾಂತರಿಸಿದರು.

ಕೇರಳದಲ್ಲಿ ಬಿಜೆಪಿ ಇಲ್ಲಿಯ ತನಕ ಅಧಿಕಾರದ ಸನಿಹಕ್ಕೂ ಹೋಗದೇ ಇದ್ದರೂ ಇಲ್ಲಿ ಬಣ ರಾಜಕೀಯಕ್ಕೆ ಏನೂ ಕಡಿಮೆ ಇರಲಿಲ್ಲ. ಎಲ್ಲಾ ಬಣಗಳು ಒಂದಾದರೆ ಇಲ್ಲಿ ಬಿಜೆಪಿ ಪ್ರಬಲ ವಿಪಕ್ಷವಾಗಿಯೂ ಕೆಲಸ ನಿರ್ವಹಿಸುವಷ್ಟು ಜನಬೆಂಬಲ ನಿಧಾನವಾಗಿಯೂ ಸಿಗಲಿದೆ. ಆದರೆ ಬಿಜೆಪಿ ನಾಯಕರ ಆಂತರಿಕ ಸಮಸ್ಯೆಗಳಿಂದ ಜನರಿಗೆ ಬಿಜೆಪಿ ಬೇಕು ಎಂದು ಅನಿಸಿದರೂ ಅದಕ್ಕೆ ಪೂರಕವಾಗಿ ವಾತಾವರಣ ನಿರ್ಮಾಣವಾಗಿಲ್ಲ. ಕಾಂಗ್ರೆಸ್, ಕಮ್ಯೂನಿಸ್ಟರಿಂದ ರೋಸಿ ಹೋಗಿರುವ ಯುವ ಮತದಾರರಿಗೆ ಪರ್ಯಾಯವಾಗಿ ಪ್ರಬಲ ಮುಖ ಸಿಗುವ ಆಶಾಭಾವನೆ ಇಲ್ಲಿಯ ತನಕ ಕಾಣಿಸಿರಲಿಲ್ಲ. ಇದನ್ನೆಲ್ಲಾ ಪರಿಗಣಿಸಿ ಬಿಜೆಪಿ ಆರ್ ಸಿಯವರನ್ನು ಪಕ್ಷದ ರಾಜ್ಯ ನಾಯಕತ್ವಕ್ಕೆ ಸೂಚಿಸಿದೆ.

ಈ ವರ್ಷ ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿವೆ. ಆರ್ ಸಿ ಇದನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯ ಮಾಡಬೇಕಿದೆ. ಇವರು ರಾಜ್ಯಾಧ್ಯಕ್ಷರಾದರೆ ಬಿಜೆಪಿಗೆ ತನು, ಮನ, ಧನದಲ್ಲಿಯೂ ಸಹಕಾರ ಸಿಗಲಿದೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬಲ್ಲ ಛಾತಿಯೂ ಇವರಿಗೆ ಇರುವುದರಿಂದ ಕೊನೆಗೂ ಕೇರಳದಲ್ಲಿ ಬಿಜೆಪಿಯ ಅಲೆ ಎದ್ದುಬರಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search