• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇನ್ನು ಹೋಟೇಲ್ ಬಿಲ್ ಗಳಲ್ಲಿ ಸೇವಾ ಶುಲ್ಕ ಹಾಕಿದರೆ ಕೊಡಲೇಬೇಕಾಗಿಲ್ಲ!

Tulunadu News Posted On March 29, 2025
0


0
Shares
  • Share On Facebook
  • Tweet It

ನೀವು ಹೋಟೇಲುಗಳಲ್ಲಿ ತಿಂಡಿ, ತಿನಿಸು, ಊಟ ಸವಿದ ನಂತರ ಬಿಲ್ ಬಂದಾಗ ಅದರಲ್ಲಿ ಸರ್ವಿಸ್ ಚಾರ್ಜ್ ಎಂದು ಪ್ರತ್ಯೇಕ ಇಂತಿಷ್ಟು ಹಣ ಹಾಕಿರುತ್ತಾರೆ. ನೀವು ಅಲ್ಲಿ ಅದು ಯಾಕೆ ಎಂದು ಕೇಳಲು ಹೋಗುವುದಿಲ್ಲ. ಒಂದು ವೇಳೆ ಕೇಳಿದರೂ ಅದು ಬಡಿಸುವವರಿಗೆ ಕೊಡುವ ಹಣ ಎಂದು ಹೋಟೇಲಿನವರು ಉತ್ತರಿಸಿಯಾರು. ಆದರೆ ಹೀಗೆ ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವುದು ಕಾನೂನು ಬಾಹಿರ ಎನ್ನುವುದನ್ನು ದೆಹಲಿ ಹೈಕೋರ್ಟ್ ತೀರ್ಪು ನೀಡಿ ಆದೇಶಿಸಿದೆ.

ಇದು ಒಂದು ರೀತಿಯಲ್ಲಿ ಗ್ರಾಹಕರಿಗೆ ಸಂದ ಜಯ. ಹೋಟೇಲುಗಳು ಮತ್ತು ರೆಸ್ಟೋರೆಂಟ್ ಗಳು ಬಿಲ್ ಗಳ ಮೇಲೆ ಕಡ್ಡಾಯವಾಗಿ ಸೇವಾ ತೆರಿಗೆಯನ್ನು ವಿಧಿಸುವುದನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ನಿರ್ಭಂದಿಸಿದೆ. ಇದನ್ನು ವಿರೋಧಿಸಿ ಕೆಲವು ಹೋಟೇಲುಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದವು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿದ ನ್ಯಾಯಾಲಯ ಹೋಟೇಲುಗಳು ಹೀಗೆ ಗ್ರಾಹಕರಿಂದ ವಸೂಲಿ ಮಾಡುವ ಹಣವನ್ನು ಬಡಿಸುವವರಿಗೆ ನೀಡುತ್ತದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ಇದು ಗ್ರಾಹಕರಿಂದ ವಸೂಲಿ ಮಾಡುವ ಬಲವಂತದ ಕ್ರಮ. ಇದು ಗ್ರಾಹಕರ ದಾರಿ ತಪ್ಪಿಸುವ, ಮೋಸದ ಹಾಗೂ ಅನ್ಯಾಯಯುತ ವ್ಯಾಪಾರ ಪದ್ಥತಿ ಎಂದು ಹೇಳಿದ್ದು ಮಾತ್ರವಲ್ಲದೇ ಸಿಸಿಪಿಎ ನಿರ್ಧಾರ ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ತಲಾ 1 ಲಕ್ಷ ರೂ ದಂಡ ವಿಧಿಸಿದೆ.

ಹೋಟೇಲುಗಳು ಊಟ, ತಿಂಡಿಯನ್ನು ಲಾಭ ಇಟ್ಟುಕೊಂಡೇ ಮಾರಾಟ ಮಾಡುತ್ತವೆ. ಅದರಲ್ಲಿಯೇ ಅವು ನೌಕರರ ವೇತನದ ಖರ್ಚನ್ನು ಕೂಡ ಸೇರಿಸಿರುತ್ತವೆ. ಅಷ್ಟಿದ್ದರೂ ಸೇವಾ ಶುಲ್ಕವನ್ನು ಇದರೊಂದಿಗೆ ಪ್ರತ್ಯೇಕವಾಗಿ ಸೇರಿಸಿ ಬಿಲ್ ನೀಡುತ್ತವೆ. ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಸೆಕ್ಷನ್ 2 (47) ರ ಪ್ರಕಾರ ಇದು ಅನ್ಯಾಯದ ವ್ಯಾಪಾರ ಕ್ರಮವಾಗಿದೆ. ಇದನ್ನು ಅನುಸರಿಸಿ 2022 ರಲ್ಲಿಯೇ ಸಿಸಿಪಿಎ ಸೇವಾ ಶುಲ್ಕ ಐಚ್ಚಿಕ ಎಂದು ಹೇಳಿದೆ. ಇನ್ನು ಈ ಸಂಸ್ಥೆಗೆ ಆದೇಶ ಹೊರಡಿಸುವ ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ.

0
Shares
  • Share On Facebook
  • Tweet It




Trending Now
ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
Tulunadu News August 19, 2025
ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
Tulunadu News August 19, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
    • ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
  • Popular Posts

    • 1
      ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • 2
      ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

  • Privacy Policy
  • Contact
© Tulunadu Infomedia.

Press enter/return to begin your search