• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜೀವಭಯ.. ಪತ್ನಿಯನ್ನು ಪ್ರೇಮಿ ಜೊತೆ ಮದುವೆ ಮಾಡಿಸಿದ ಗಂಡ!

Tulunadu News Posted On March 31, 2025


  • Share On Facebook
  • Tweet It

ಇತ್ತೀಚೆಗೆ ಪತ್ನಿಯರು ಪ್ರೇಮಿಗಳೊಂದಿಗೆ ಸೇರಿ ಗಂಡನನ್ನೇ ಮುಗಿಸುವುದು ಅಥವಾ ಗಂಡನನ್ನು ಕೊಲ್ಲಲು ಸ್ಕೆಚ್ ಹಾಕುವುದು ಅಲ್ಲಲ್ಲಿ ಸುದ್ದಿಯಾಗುತ್ತಿರುವ ವಿಷಯವನ್ನು ಓದುತ್ತಿದ್ದೇವೆ. ಇಂತಹ ವಿಷಯಗಳನ್ನು ಕೇಳುವಾಗ ಅಂತಹ ವಿಷಯ ಗೊತ್ತಾದರೆ ಗಂಡ ಆಕೆಯನ್ನು ಪ್ರೇಮಿಯೊಂದಿಗೆ ಕಳುಹಿಸಿಕೊಟ್ಟಲ್ಲಿ ಅವನ ಜೀವ ಉಳಿಯುತ್ತಿರಲಿಲ್ಲವಾ ಎಂದು ನಿಮಗೆ ಅನಿಸಬಹುದು. ಇಲ್ಲೊಬ್ಬ ಗಂಡ ಹಾಗೆ ಮಾಡಿದ್ದಾನೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಪತ್ನಿಯನ್ನು ಪ್ರೇಮಿಯೊಂದಿಗೆ ಮದುವೆ ಮಾಡಿಸಿದ್ದಾನೆ.

ಇದು ನಡೆದದ್ದು ಉತ್ತರ ಪ್ರದೇಶದ ಕಟಾರ್ ಜೋತ್ ಎಂಬ ಪ್ರದೇಶದಲ್ಲಿ. ಗಂಡನ ಹೆಸರು ಬಬ್ಲು. ಇವನಿಗೆ 2017 ರಲ್ಲಿ ರಾಧಿಕಾ ಎನ್ನುವವಳ ಜೊತೆ ಮದುವೆಯಾಗಿತ್ತು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೂಲಿ ಕಾರ್ಮಿಕನಾಗಿರುವುದರಿಂದ ಬಬ್ಲು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ. ಅಲ್ಲಿ ಹಲವು ದಿನ ದುಡಿದು ಹೆಂಡತಿ, ಮಕ್ಕಳನ್ನು ಸಾಕುತ್ತಿದ್ದ. ಹೀಗಿರುವಾಗ ಒಂದು ಸಲ ಬಬ್ಲುವಿಗೆ ತನ್ನ ಪತ್ನಿ ವಿಕಾಸ್ ಎನ್ನುವವನ ಜೊತೆ ರಹಸ್ಯ ಸಂಬಂಧ ಇರಿಸಿಕೊಂಡಿರುವುದರ ಸುಳಿವು ಸಿಕ್ಕಿತ್ತು. ಅದನ್ನು ಪತ್ತೆ ಹಚ್ಚಲು ಒಮ್ಮೆ ಅಚಾನಕ್ ಆಗಿ ಆತ ಹೆಂಡತಿಗೆ ಹೇಳದೇ ಊರಿಗೆ ಬಂದಿದ್ದ. ಬಂದವನಿಗೆ ವಿಷಯ ಗ್ಯಾರಂಟಿಯಾಗಿತ್ತು.

ಆದರೆ ಬಬ್ಲು ಆಕೆಯ ಮೇಲಾಗಲಿ, ಆಕೆಯ ಪ್ರಿಯಕರನ ಮೇಲಾಗಲೀ ರೇಗಾಡಲಿಲ್ಲ. ನೇರವಾಗಿ ಊರಿನ ಪ್ರಮುಖರ ಬಳಿ ಹೋದ. ಇಲ್ಲಿ ಅವರಿಬ್ಬರನ್ನು ದೂರ ಮಾಡಿದರೆ ಇವತ್ತಲ್ಲ, ನಾಳೆ ತನಗೆ ರಿಸ್ಕ್. ಒಂದಲ್ಲ ಒಂದು ದಿನ ನನ್ನ ಗೋರಿ ತೋಡಿ ನನ್ನನ್ನು ಇಲ್ಲವಾಗಿಸಬಹುದು. ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅದಕ್ಕಾಗಿ ಅವರಿಬ್ಬರಿಗೆ ತಾನು ಮದುವೆ ಮಾಡಿಸುತ್ತೇನೆ, ಸಹಕಾರ ನೀಡಬೇಕು ಎಂದು ಕೋರಿದ್ದಾನೆ. ಎಲ್ಲರನ್ನು ಒಪ್ಪಿಸಿ, ತನ್ನ ಹೆಂಡತಿಗೂ, ವಿಕಾಸನಿಗೂ ಮದುವೆ ಮಾಡಿ ಫೋಟೋ ತೆಗೆಸಿ, ಮಕ್ಕಳನ್ನು ತಾನೇ ಸಾಕುವ ನಿರ್ಧಾರ ಮಾಡಿ ಜೀವ ಉಳಿಸಿಕೊಂಡಿದ್ದಾನೆ.

ಹೀಗೆಕೆ ಮಾಡಿದೆ ಎಂದು ಜನರು ಕೇಳಿದಾಗ ” ತನ್ನ ಜೀವ ಉಳಿದರೆ ಸಾಕಿತ್ತು. ಅವರಿಬ್ಬರು ಒಟ್ಟಾಗಿ ನನ್ನ ತಲೆ ಒಡೆದು ಡ್ರಮಿನಲ್ಲಿ ತುಂಬಿಟ್ಟರೆ ಮಕ್ಕಳಿಗೆ ಯಾರು ಗತಿ” ಎಂದು ಹೇಳಿದ್ದಾನೆ.
ಇತ್ತೀಚೆಗೆ ಮೀರತ್ ನಲ್ಲಿ ಪತ್ನಿ ಮತ್ತು ಅವಳ ಪ್ರಿಯಕರ ಒಟ್ಟಿಗೆ ಸೇರಿ ಸರ್ ಪ್ರೈಸ್ ಕೊಡಲು ಪರ ಊರಿನಿಂದ ಬಂದಿದ್ದ ಗಂಡನನ್ನು ಮಗನ ಜನ್ಮದಿನದಂದೇ ಮುಗಿಸಿದ ಘಟನೆ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದ ಈಗ ಹೆಂಡ್ತಿಯನ್ನು ಪ್ರಿಯಕರರೊಂದಿಗೆ ಮದುವೆ ಮಾಡಿಸುವುದೇ ಜೀವ ಉಳಿಯುವ ದಾರಿ ಎಂದು ನೊಂದ ಗಂಡಂದಿರು ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search