• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

140 ಕಿ.ಮೀ ನಡೆಯುತ್ತಾ ಅನಂತ್ ಅಂಬಾನಿಯಿಂದ ದ್ವಾರಕ ಭೇಟಿಗೆ ಸಂಕಲ್ಪ!

Tulunadu News Posted On April 1, 2025
0


0
Shares
  • Share On Facebook
  • Tweet It

ಶ್ರೀಮಂತರ ಮಕ್ಕಳಿಂದ ಇದೆಲ್ಲಾ ಸಾಧ್ಯವಾ ಎನ್ನುವ ಪ್ರಶ್ನೆಗೆ ಉತ್ತರವಾಗಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಯ ಪುತ್ರ ಅನಂತ್ ಅಂಬಾನಿ 140 ಕಿ.ಮೀ ಕ್ರಮಿಸಿ ದ್ವಾರಕೆಯಲ್ಲಿ ದೇವರ ದರ್ಶನ ಮಾಡಲು ಹೊರಟಿದ್ದಾರೆ. ಗುಜರಾತಿನ ಜಾಮ್ ನಗರದ ತಮ್ಮ ಮನೆಯಿಂದ ಹೊರಟು ದ್ವಾರಕಕ್ಕೆ ಬರುವ ದಾರಿಯುದ್ದಕ್ಕೂ ಅವರು ಹನುಮಾನ್ ಚಾಲಿಸಾ ಪಠಣ ಮಾಡುತ್ತಾ ಇದ್ದಾರೆ. ತಮ್ಮ 30ನೇ ವರ್ಷದ ಜನ್ಮದಿನವನ್ನು ಅನಂತ್ ಅಂಬಾನಿ ಈ ರೀತಿಯಲ್ಲಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಕೇವಲ ನಡಿಗೆಯ ಮೂಲಕ ಅಷ್ಟು ದೂರ ಕ್ರಮಿಸಲಿರುವ ಅನಂತ್ ಅಂಬಾನಿ ತಮ್ಮ ದೇವರ ಮೇಲಿರುವ ಭಕ್ತಿಯನ್ನು ದೈಹಿಕ ಶ್ರಮದ ಮೂಲಕವೂ ತೋರಿಸಿಕೊಟ್ಟು ಯುವಜನಾಂಗಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ.

ನಮ್ಮ ಸ್ವಅಭಿವೃದ್ಧಿ ಮತ್ತು ಯಶಸ್ಸಿಗೆ ದೇವರ ಆರ್ಶೀವಾದ ಎಷ್ಟು ಅಗತ್ಯ ಎನ್ನುವುದನ್ನು ಅನಂತ್ ಸಾಧಿಸಿ ತೋರಿಸಿದ್ದಾರೆ. ತಮ್ಮ ಪಾದಯಾತ್ರೆಯ ಉದ್ದಕ್ಕೂ ಸನಾತನ ಧರ್ಮದಲ್ಲಿ ವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ಏರಲು ದೇವರ ಅನುಗ್ರಹ ಪಡೆಯಬಹುದು ಎಂದು ಕ್ರಿಯೆಯ ಮೂಲಕ ತೋರಿಸಿದ್ದಾರೆ. ಶಿಸ್ತು, ನಂಬಿಕೆ ಮತ್ತು ತಾನು ಏನೂ ಅಲ್ಲ, ಎಲ್ಲವೂ ಭಗವಂತ ಎನ್ನುವ ದೇವರೊಂದಿಗಿನ ಸಂಬಂಧದಿಂದ ಯಾವುದೇ ಸವಾಲನ್ನು ಎದುರಿಸಿ ಗೆದ್ದು ಬರಬಹುದು ಎಂದು ಅಂಬಾನಿ ಪುತ್ರ ತೋರಿಸಿಕೊಟ್ಟಿದ್ದಾರೆ.

ಪಾದಯಾತ್ರೆಯ ಮುಂಚೂಣಿಯಲ್ಲಿ ನಡೆದು ಬರುತ್ತಿರುವ ಅನಂತ ಅಂಬಾನಿ, ಒಂದು ಯಶಸ್ಸನ್ನು ಕನಸು ಕಾಣುವ ಜೊತೆಗೆ ಅದನ್ನು ಪಡೆಯಲು ಶಿಸ್ತು ಮತ್ತು ಅನುಷ್ಠಾನ ಎಷ್ಟು ಮುಖ್ಯ ಎಂದು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಅಧ್ಯಾತ್ಮಿಕತೆ ಮತ್ತು ಮಾನಸಿಕ ಶಕ್ತಿಯ ಮೇಲೆ ನಾವು ವಿಶ್ವಾಸ ಇಟ್ಟಾಗ ಯಶಸ್ಸಿನ ದಾರಿಯಲ್ಲಿ ಬರುವ ಎಂತಹ ಸಂಕಷ್ಟಗಳನ್ನು ಕೂಡ ದೂರ ಮಾಡಬಹುದು ಎಂದು ಅನಂತ್ ನಂಬಿದ್ದಾರೆ.

ಅನಂತ್ ಅಂಬಾನಿ ಮಾರ್ಚ್ 28 ರಂದು ಪಾದಯಾತ್ರೆ ಆರಂಭಿಸಿದ್ದು, ಒಟ್ಟು 12 ರಿಂದ 13 ದಿನಗಳ ತನಕ ನಡೆಯಲಿದ್ದಾರೆ. ನಿತ್ಯ ಕನಿಷ್ಟ 12 ಕಿಲೋ ಮೀಟರ್ ನಡೆಯುವ ಪಾದಯಾತ್ರೆ ದ್ವಾರಕಾವನ್ನು ಏಪ್ರಿಲ್ 8 ರಂದು ತಲುಪಲಿದೆ. ಅಲ್ಲಿ ಅವರು ಏಪ್ರಿಲ್ 10 ರಂದು ದ್ವಾರಕಾಧೀಶರಿಗೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನವನ್ನು ಆಚರಿಸಲಿದ್ದಾರೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search