• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಜ್ಯ ಸರಕಾರದಿಂದ ಡಿಸೀಲ್ ಬೆಲೆ 2 ರೂ ಹೆಚ್ಚಳ.. ವಸ್ತುಗಳ ಬೆಲೆ ಹೆಚ್ಚಳ ಶೀಘ್ರ!

Tulunadu News Posted On April 3, 2025
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯ ಸರಕಾರ ಡಿಸೀಲ್ ಬೆಲೆಯನ್ನು ಲೀಟರಿಗೆ ಎರಡು ರೂಪಾಯಿ ಹೆಚ್ಚಿಸಿರುವುದನ್ನು ಲಾರಿ ಮಾಲೀಕರ ಸಂಘ, ವಸ್ತು ಸಾಗಾಣಿಕಾ ಲಾರಿಗಳ ಒಕ್ಕೂಟ, ಖಾಸಗಿ ಬಸ್ ಮಾಲೀಕರ ಸಂಘ ಮತ್ತು ಕ್ಯಾಬ್ ಮಾಲೀಕರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯ ಸರಕಾರ ಡಿಸೀಲ್ ಮೇಲಿನ ಸೇಲ್ಸ್ ಟ್ಯಾಕ್ಸ್ ಅನ್ನು 18.44% ನಿಂದ 21.17% ಹೆಚ್ಚಿಸಿರುವುದರಿಂದ ತಲಾ ಲೀಟರ್ ಮೇಲೆ ರೂ 2.05 ಹೆಚ್ಚಳವಾಗಿದೆ. ಇಲ್ಲಿ ಡಿಸೀಲ್ ದರ ಹೆಚ್ಚಿಸಿರುವ ರಾಜ್ಯ ಸರಕಾರದ ಈ ನಡೆಯಿಂದ ಆಕ್ರೋಶಿತಗೊಂಡಿರುವ ಈ ಒಕ್ಕೂಟಗಳು ಇದರಿಂದ ಸಾಗಾಣಿಕಾ ವೆಚ್ಚವೂ ಏರಲಿದ್ದು, ಅದು ಜನಸಾಮಾನ್ಯರ ಮೇಲೆ ಪ್ರಭಾವ ಬೀರುವುದಾಗಿ ಹೇಳಿವೆ.
ಕರ್ನಾಟಕ ಲಾರಿ ಮಾಲೀಕರ ಅಸೋಸಿಯೇಶನ್ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು ಸರಕಾರ ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಈ ದರ ಹೆಚ್ಚಳವನ್ನು ಶೀಘ್ರ ಹಿಂದಕ್ಕೆ ಪಡೆದುಕೊಳ್ಳಬೇಕಾಗಿ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟಗಳ ಅಸೋಸಿಯೇಶನ್ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ ಈ ಬೆಲೆ ಹೆಚ್ಚಳದಿಂದ ನಿತ್ಯ 800 ರೂಪಾಯಿಗಳ ಹೆಚ್ಚಿನ ಹೊರೆ ಮತ್ತು ತಿಂಗಳಿಗೆ 24000 ರೂ ಹೊರೆ ನಮಗೆ ತಗಲುತ್ತದೆ. ಇದರಿಂದ ಜನಸಾಮಾನ್ಯರ ದಿನಸಿ ವಸ್ತುಗಳ ಬೆಲೆ ಕೂಡ ಹೆಚ್ಚಾಗಲಿದ್ದು, ಖಾಸಗಿ ವಾಹನಗಳಲ್ಲಿ ದೂರ ಪ್ರಯಾಣವು ದುಬಾರಿಯಾಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಹಾಲು, ವಿದ್ಯುತ್, ಸರಕಾರಿ ಬಸ್ ಟಿಕೆಟ್ ದರ ಹೆಚ್ಚಳವಾಗಿದ್ದು, ಈಗ ಡಿಸೀಲ್ ದರವೂ ಹೆಚ್ಚಳವಾಗಿರುವುದರಿಂದ ವರ್ತಕರು, ವ್ಯಾಪಾರಿಗಳು ದಿನಸಿ ವಸ್ತುಗಳ ಮತ್ತು ತರಕಾರಿಗಳ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಿಸಲಿದ್ದಾರೆ. ಅವರಿಗೆ ಬೀಳುವ ಹೊರೆಯನ್ನು ಅವರು ಜನಸಾಮಾನ್ಯರ ಮೇಲೆ ಹಾಕಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೃಹತ್ ಬೆಂಗಳೂರು ಹೋಟೇಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ ಈಗಾಗಲೇ ಹಾಲಿನ ದರ ಹೆಚ್ಚಳದಿಂದ ಕಾಫಿ, ಟೀ ದರ ಜಾಸ್ತಿ ಮಾಡಬೇಕಿದೆ. ಇನ್ನು ಡಿಸೀಲ್ ದರ ಹೆಚ್ಚಿಸಿರುವುದರಿಂದ ದಿನಸಿ ವಸ್ತುಗಳು, ತರಕಾರಿ, ಹಣ್ಣುಹಂಪಲುಗಳು, ಆಹಾರ ತಯಾರಿಕೆಗೆ ಅಗತ್ಯವಾಗಿ ಬೇಕಾಗುವ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗಲಿದೆ. ನಾವು ಊಟ, ತಿಂಡಿಯ ಬೆಲೆ ಹೆಚ್ಚಿಸದೇ ವಿಧಿಯಿಲ್ಲ ಎನ್ನುವವ ಪರಿಸ್ಥಿತಿ ಇದೆ. ಇಲ್ಲದಿದ್ದರೆ ಹೋಟೇಲುಗಳು, ಕ್ಯಾಂಟಿನುಗಳು ಮುಚ್ಚುವ ಪರಿಸ್ಥಿತಿ ಬರಲಿದೆ” ಎಂದರು.
ಇನ್ನು ಕರ್ನಾಟಕ ರಾಜ್ಯ ಪ್ರೈವೇಟ್ ಟಾನ್ಸಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ ” ಡಿಸೀಲ್ ಬೆಲೆ ಹೆಚ್ಚಳವಾಗಿರುವುದರಿಂದ ಪ್ರತಿ ವಸ್ತುವಿನ ಬೆಲೆ ಹೆಚ್ಚಳವಾಗುತ್ತದೆ. ಏಕೆಂದರೆ ಸಾಗಾಣಿಕಾ ವೆಚ್ಚ ಹೆಚ್ಚಾದಾಗ ಅದು ಪರೋಕ್ಷವಾಗಿ ವಸ್ತುವಿನ ಬೆಲೆಯನ್ನು ಕೂಡ ಹೆಚ್ಚಿಸುತ್ತದೆ. ಇದರಿಂದ ಕೈಗಾರಿಕೆ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತದೆ. ಕೊನೆಯದಾಗಿ ಲಾಭ ಆಗುವುದು ಸರಕಾರಕ್ಕೆ ಮಾತ್ರ ” ಎಂದು ಹೇಳಿದರು.
ಡಿಸೀಲ್ ಹೆಚ್ಚಿಸುವ ಮೊದಲು ಉದ್ಯಮಿಗಳನ್ನು, ವಸ್ತು ಸಾಗಾಟದಲ್ಲಿ ನಿರತರಾಗಿರುವ ಕ್ಷೇತ್ರಗಳ ಪ್ರಮುಖರನ್ನು ಸರಕಾರ ಔಪಚಾರಿಕವಾಗಿಯೂ ಸಂಪರ್ಕಿಸಿಲ್ಲ ಎನ್ನುವ ಬೇಸರ ಅವರಲ್ಲಿದೆ.
ಈ ಡಿಸೀಲ್ ಬೆಲೆ ಹೆಚ್ಚಳದಿಂದ ಲಾರಿಗಳ ಮಾಲೀಕರು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಡಿಸೀಲ್ ತುಂಬಿಸಲಿದ್ದಾರೆ. ಏಕೆಂದರೆ ಅಲ್ಲಿ ಬೆಲೆ ಕರ್ನಾಟಕಕ್ಕಿಂತ ಕಡಿಮೆ ಇದೆ. ಆದರೆ ತೊಂದರೆಗೆ ಒಳಗಾಗುವವರು ರಾಜ್ಯದಲ್ಲಿಯೇ ವ್ಯವಹಾರ ಮಾಡುವ ಸಂಸ್ಥೆಗಳು ಮತ್ತು ಜನಸಾಮಾನ್ಯರು.

0
Shares
  • Share On Facebook
  • Tweet It




Trending Now
ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
Tulunadu News January 2, 2026
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Tulunadu News January 1, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
  • Popular Posts

    • 1
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 2
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 3
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search