• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಐಪಿಎಲ್ ನಲ್ಲಿ ದಾಂಡಿಗರ ಬ್ಯಾಟ್ ಪರಿಶೀಲನೆ ಅಂಪೈರ್ ಮಾಡುವುದು ಯಾಕೆ!

Tulunadu News Posted On April 17, 2025


  • Share On Facebook
  • Tweet It

ಐಪಿಎಲ್ ನಲ್ಲಿ ದಾಂಡಿಗ ಬ್ಯಾಟ್ ಹಿಡಿದು ಕ್ರೀಸಿಗೆ ಬರುತ್ತಿದ್ದಾರೆ. ಸಡನ್ನಾಗಿ ಅಂಪೈರ್ ಅವರ ಬ್ಯಾಟ್ ಹಿಡಿದು ಅದನ್ನು ಪರೀಕ್ಷಿಸುತ್ತಿದ್ದಾರೆ. ಹೀಗೆ ಯಾಕೆ ಮಾಡುತ್ತಾರೆ, ಇದು ಅವಮಾನವಲ್ಲವೇ, ಆಟಗಾರರ ಕ್ಷಮತೆ ಮೇಲೆ ಅನುಮಾನವೇಕೆ ಎಂದು ಅನಿಸಬಹುದು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ನಿಯಮಗಳಲ್ಲಿ ಹೊಸ ಬದಲಾವಣೆಯನ್ನು ತರುತ್ತಿದ್ದು, ನಾಲ್ಕೈದು ದಿನಗಳಿಂದ ಅಂಪೈರ್ ಗಳು ಬ್ಯಾಟ್ಸಮೆನ್ ಗಳ ಬ್ಯಾಟಿನ ಸೈಜ್ ಬಗ್ಗೆ ತಪಾಸಣೆಗೆ ಇಳಿದಿದ್ದಾರೆ.

ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಇವರ ಬ್ಯಾಟ್ ಗಳನ್ನು ಚೆಕ್ ಮಾಡಿರುವ ಅಂಪೈರ್ ಗಳು ಸಮಾಧಾನಗೊಂಡ ಬಳಿಕ ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಐಪಿಎಲ್ ಎಂದರೆ ಅಲ್ಲಿ ರನ್ ಸುರಿಮಳೆ ಇಲ್ಲದಿದ್ದರೆ ಬ್ಯಾಟರ್ ಗೆ ಮರ್ಯಾದೆ ಇಲ್ಲ. ಆದ್ದರಿಂದ ಮೈದಾನದಲ್ಲಿ ಸಿಕ್ಸರ್, ಫೋರ್ ಬಾರಿಸುವ ದಾಂಡಿಗನ ಬ್ಯಾಟ್ ಐಪಿಎಲ್ 5.7 ನಿಯಮಗಳ ಪ್ರಕಾರ ಇದೆಯೇ ಎನ್ನುವುದು ಕೂಡ ಅಷ್ಟೇ ಮುಖ್ಯ.

ಹಾಗಾದರೆ ಐಪಿಎಲ್ 5.7 ನಿಯಮ ಏನು?

ಕ್ರಿಕೆಟ್ ನಲ್ಲಿ ಬ್ಯಾಟ್ ಎರಡು ಭಾಗಗಳನ್ನು ಹೊಂದಿರುತ್ತದೆ. ಮೊದಲನೇಯದು ಹ್ಯಾಂಡಲ್ ಮತ್ತು ಎರಡನೇಯದು ಬ್ಲೇಡ್. ಹ್ಯಾಂಡಲ್ ಹೊರತುಪಡಿಸಿ ಒಟ್ಟು ಉದ್ದ 38 ಇಂಚು ಇರಬೇಕು ಅಥವಾ 96.52 ಸೆಂಟಿಮೀಟರ್ ಮೀರಬಾರದು. ಬ್ಲೇಡ್ ನ ಅಗಲ ಗರಿಷ್ಟ 4.25 ಇಂಚುಗಳಾಗಿರಬಹುದು. ಬ್ಯಾಟ್ ನ ಆಳ 2.64 ಇಂಚು ಮೀರಬಾರದು. ಮತ್ತು ಅಂಚುಗಳು 1.56 ಇಂಚು ಮೀರಬಾರದು. ಇಷ್ಟಿದ್ದೂ ಬ್ಯಾಟರ್ ಗಳು ನಿಯಮ ಉಲ್ಲಂಘಿಸಿ ಕ್ರೀಸಿಗೆ ಬಂದರೆ ಬ್ಯಾಟ್ಸಮೆನ್ ಗಳಿಗೆ ಬೇರೆ ಬ್ಯಾಟ್ ಬಳಸಲು ಅಂಪೈರ್ ಗಳು ಸೂಚಿಸಬಹುದೇ ವಿನ: ದಂಡದ ಅವಕಾಶ ನಿಯಮಗಳಲ್ಲಿ ಇಲ್ಲ.

ಆದ್ದರಿಂದ ಒಂದು ವೇಳೆ ನಿಯಮಗಳು ಉಲ್ಲಂಘನೆಯಾದರೆ ಬ್ಯಾಟ್ಸಮೆನ್ ಗಳು ಇರಿಸುಮುರಿಸು ಅನುಭವಿಸುವ ಬದಲು ಮೊದಲೇ ನಿಯಮಗಳ ಪ್ರಕಾರ ಬ್ಯಾಟ್ ಹಿಡಿದು ಆಡಲು ಆಗಮಿಸುವುದರಿಂದ ಇಲ್ಲಿಯ ತನಕ ನಿಯಮ ಉಲ್ಲಂಘನೆಯಾದ ಉದಾಹರಣೆ ಇಲ್ಲ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search