• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಇಡೀ ಜಗತ್ತಿನಲ್ಲಿ ವೈರಲ್ ಆಗಿರುವ ಈ ಫೋಟೋ ಯಾರದ್ದೂ ಗೊತ್ತಾ! ಸಂಪೂರ್ಣ ಮಾಹಿತಿ ಇಲ್ಲಿದೆ..

Tulunadu News Posted On April 23, 2025
0


0
Shares
  • Share On Facebook
  • Tweet It

ಈ ಫೋಟೋ ಭಾರತ ಸೇರಿದಂತೆ ಜಗತ್ತಿನ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಫೋಟೋ ಯಾರದ್ದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಅವರಿಗೆ ಇದೇ ಎಪ್ರಿಲ್ 16 ರಂದು ಮದುವೆಯಾಗಿತ್ತು. ಅದ್ದೂರಿಯಾಗಿ ವಿವಾಹ ಸಂಭ್ರಮ ಆಚರಿಸಲಾಗಿತ್ತು. ಒಟ್ಟು ಹತ್ತು ದಿನಗಳ ಕಾರ್ಯಕ್ರಮದಲ್ಲಿ ಬಂಧು, ಮಿತ್ರರು, ಹಿತೈಷಿಗಳು ಸೇರಿದ್ದರು. ನೌಕಾಧಿಕಾರಿ ವಿನಯ್ ನಾರ್ವಾಲ್ ಪತ್ನಿಯೊಂದಿಗೆ ಸಂತಸದಿಂದ ಸಪ್ತಪದಿ ತುಳಿದಿದ್ದರು. ಮದುವೆಯ ಬಳಿಕ ಮಧುಚಂದ್ರಕ್ಕಾಗಿ ನವಜೋಡಿ ಸ್ವಿಝರ್ ಲ್ಯಾಂಡಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರು.

ಆದರೆ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿದ್ದ ಕಾರಣ ವಿನಯ್ ಗೆ ಅನೇಕ ದಿನ ರಜೆ ಮಂಜೂರಾಗಿರಲಿಲ್ಲ. ಆದ್ದರಿಂದ ಕಡಿಮೆ ರಜೆಯಲ್ಲಿ ಕಾಶ್ಮೀರಕ್ಕೆ ಹೋಗಿ ಬರುವ ಪ್ಲಾನ್ ಹಾಕಿಕೊಂಡ ಗಂಡ, ಹೆಂಡ್ತಿ ಕಾಶ್ಮೀರಕ್ಕೆ ಬಂದಿದ್ದರು.

ಆರಂಭದಲ್ಲಿ ವಿನಯ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿದ್ದರು. ಅವರಿಗೆ ಆರಂಭದಿಂದಲೇ ದೇಶಸೇವೆಯ ಕಿಚ್ಚು ತುಂಬಾ ಇತ್ತು. ಆದ್ದರಿಂದ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಉತ್ಕಷ್ಟ ಆಸೆ ಹೊಂದಿದ್ದರು. ಅದರಂತೆ ಪ್ರಯತ್ನ ಮಾಡಿ, ಪರೀಕ್ಷೆ ಬರೆದು, ತರಬೇತಿ ಪಡೆದು ನೌಕೆಯಲ್ಲಿ ಲೆಫ್ಟಿನೆಂಟ್ ಸ್ಥಾನಕ್ಕೆ ಏರಿದ್ದರು. ಅದರಂತೆ ನೌಕಾದಳದಲ್ಲಿ ಕ್ಲಾಸ್ ಒನ್ ಆಫೀಸರ್ ಆಗಿ ಹೊರಹೊಮ್ಮಿದ್ದರು.

ಮಧುಚಂದ್ರದ ಖುಷಿಯಲ್ಲಿದ್ದ ಗಂಡ ವಿನಯ್ ಹೆಂಡ್ತಿ ಹೀಮಾಂಶಿ ನಾರ್ವಾಲ್ ಅವರಿಗೆ ಪಹಲ್ಗಾಂನಲ್ಲಿ ತಾವು ಕೊನೆಯ ಸೂರ್ಯೋದಯ ನೋಡುತ್ತವೆ ಎಂದು ಗೊತ್ತೇ ಇರಲಿಲ್ಲ. ವಿನಯ ಅವರಿಗೆ ಈಗಷ್ಟೇ 26 ವರ್ಷ ವಯಸ್ಸು. ಅವರ ಮೂಲ ರಾಜ್ಯ ಹರ್ಯಾಣ. ಎಪ್ರಿಲ್ 16 ಕ್ಕೆ ಮದುವೆಯಾಗಿ ಮೂರು ದಿನ ಬಿಟ್ಟು ರಿಸೆಪ್ಶನ್ ನಡೆದು ಅವರು ಸೋಮವಾರ ಕಾಶ್ಮೀರಕ್ಕೆ ಬಂದಿದ್ದರು.

ಅವರು ಪೆಹಲ್ಗಾಂನ ರಮಣೀಯ ತಾಣದಲ್ಲಿ ತಿರುಗಾಡುತ್ತಾ, ಅಲ್ಲಿಯೇ ವಿನಯ್ ಒಂದು ಬೇಲ್ ಪುರಿ ಖರೀದಿಸಿ ತಿನ್ನುತ್ತಾ ನಿಂತಿದ್ದರು. ಆಗ ಅವರ ತಲೆಗೆ ಗುಂಡು ಹಾರಿಸಿ ಕೊಂದು ಬಿಡಲಾಗಿದೆ. ಆಗ ಅಲ್ಲಿಗೆ ಬಂದ ಸ್ಥಳೀಯರಿಗೆ ವಿಡಿಯೋದಲ್ಲಿ ಈ ಘಟನೆಯನ್ನು ಹೀಮಾಂಶಿ ವಿವರಿಸಿದ್ದು ಕೂಡ ವೈರಲ್ ಆಗಿದೆ.

ಬುಧವಾರ ಲೆಫ್ಟಿನೆಂಟ್ ನಾರ್ವಾಲ್ ಪಾರ್ಥಿವ ಶರೀರ ದೆಹಲಿಗೆ ತಂದಾಗ ಅವರ ಪಾರ್ಥಿವ ದೇಹ ಇಟ್ಟ ಪೆಟ್ಟಿಗೆಯನ್ನು ಅಪ್ಪಿ ” ವಿನಯ್ ಅವರ ಆತ್ಮಕ್ಕೆ ಸದ್ಗತಿ ಕೋರೋಣ. ಅದರೊಂದಿಗೆ ಹೆಮ್ಮೆ ಬರುವಂತಹ ಕೆಲಸ ಮಾಡೋಣ” ಎಂದು ದು:ಖತಪ್ತರಾಗಿ ಹೀಮಾಂಶಿ ಹೇಳುತ್ತಿದ್ದದ್ದು ಎಲ್ಲರ ಕಣ್ಣಾಲಿಗೆ ಒದ್ದೆ ಮಾಡಿದ್ದವು.

 

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search