• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಕ್ ಸೇನಾ ಮುಖ್ಯಸ್ಥ ನಾಪತ್ತೆ! 5000 ಸೈನಿಕರಿಂದ ರಾಜೀನಾಮೆ…

Tulunadu News Posted On April 28, 2025


  • Share On Facebook
  • Tweet It

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರದಾಳಿಯ ಹಿಂದೆ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಕೈವಾಡವಿರುವುದು ಖಚಿತವಾಗುತ್ತಿದ್ದಂತೆ ಇದಕ್ಕೆ ಭಾರತ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಗ್ಯಾರಂಟಿಯಾಗುತ್ತಿದ್ದಂತೆ ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ಪಹಲ್ಗಾಮ್ ದಾಳಿಯ ಬಳಿಕ ಭಾರತ ಯುದ್ಧಕ್ಕೆ ಸನ್ನದ್ಧವಾಗುತ್ತಿದ್ದರೆ ಅತ್ತ ಪಾಕಿಸ್ತಾನದಲ್ಲಿ ತಮ್ಮ ಸೇನಾ ಮುಖ್ಯಸ್ಥನ ವಿರುದ್ಧ ಅಲ್ಲಿನ ಜನ ಆಕ್ರೋಶಿತಗೊಂಡಿದ್ದಾರೆ. ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಏತನ್ಯಧ್ಯೆ ಅಸೀಂ ಮುನೀರ್ ತನ್ನ ಕುಟುಂಬದವರನ್ನು ಬೇರೆ ರಾಷ್ಟ್ರಕ್ಕೆ ಕಳುಹಿಸಿಕೊಟ್ಟಿದ್ದು, ತಾನು ರಾವಲ್ಪಿಂಡಿಯ ಬಂಕರ್ ನಲ್ಲಿ ಅಡಗಿಕುಳಿತುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮುನೀರ್ ನ ಭಾಷಣದಿಂದ ಉಗ್ರರು ಪ್ರೇರೆಪಿತರಾಗಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ. ಭಾಷಣದಲ್ಲಿ ಮುನೀರ್ ” ಕಾಶ್ಮೀರ ನಮ್ಮ ಕಂಠನಾಳವಿದ್ದಂತೆ. ಅದನ್ನು ನಾವು ಮರೆಯುವುದಿಲ್ಲ. ನಾವು ಹಿಂದೂಗಳಿಗಿಂತ ಎಲ್ಲಾ ವಿಧದಲ್ಲಿಯೂ ಭಿನ್ನರು. ಆದ್ದರಿಂದಲೇ ದೇಶ ವಿಭಜನೆಯಾಗಿದ್ದು” ಎಂದು ಹೇಳಿದ್ದ.

ಈ ನಡುವೆ ಪಾಕಿಸ್ತಾನದ ಐದು ಸಾವಿರ ಸೈನಿಕರು ಎರಡು ದಿನಗಳ ಅಂತರದಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಇದು ಪಾಕಿಸ್ತಾನ ಸೇನೆಗೆ ತಲೆನೋವಿನ ಸಂಗತಿಯಾಗಿದೆ. ಸಡನ್ನಾಗಿ ಈ ಪ್ರಮಾಣದಲ್ಲಿ ರಾಜೀನಾಮೆ ಪರ್ವಕ್ಕೆ ಕಾರಣ ಪೆಹಲ್ಗಾಮ್ ನಲ್ಲಿ ಪಾಕ್ ಉಗ್ರರು ಮಾಡಿದ ದಾಳಿಯೇ ಕಾರಣ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಮೇಲೆ ಭಾರತ ಯಾವುದೇ ರೀತಿಯ ದಾಳಿಯನ್ನು ಮಾಡುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಪಾಕ್ ಸೈನಿಕರ ಕುಟುಂಬದವರು ಸೇನೆಯಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಪತ್ನಿಯರ ಪ್ರೀತಿಗೆ ಮನವಿಗೆ ಓಗೊಟ್ಟು ಪಾಕ್ ಸೈನಿಕರು ರಾಜೀನಾಮೆ ನೀಡುವ ಪರಿಸ್ಥಿತಿ ತಂದುಕೊಂಡಿದ್ದಾರೆ. ವರದಿಗಳ ಪ್ರಕಾರ ಪಾಕ್ ಸೈನಿಕರಲ್ಲಿ ಅನೇಕರು ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸುವುದರಿಂದ ವಿನಾಯಿತಿ ಕೋರುತ್ತಿದ್ದಾರೆ. ಇನ್ನು ಕೆಲವರು ಈಗಾಗಲೇ ಸೈನಿಕ ಕ್ಯಾಂಪಿನಿಂದ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ.

ಪಾಕಿಸ್ತಾನ ಸೈನಿಕ ಪಡೆಯ ಉನ್ನತ ಸ್ಥಾನದಲ್ಲಿ ಇರುವವರು ಲೆಫ್ಟಿನೆಂಟ್ ಜನರಲ್ ಉಮರ್ ಬುಖಾರಿ ಸಹಿತ ಕಮಾಂಡರ್ ಗಳು ರಾಜೀನಾಮೆ ನೀಡಿದ್ದರಿಂದ ಕೆಳಮಟ್ಟದ ಸೈನಿಕರ ಜಂಘಾಬಲ ಹುದುಗಿದ್ದು, ಒಂದು ವೇಳೆ ಯುದ್ಧ ನಡೆದರೆ ಪಾಕಿಸ್ತಾನ ಸಮರ್ಥ ಉತ್ತರ ಕೊಡಲು ಅಸಾಧ್ಯ ಎನ್ನುವ ಅಭಿಪ್ರಾಯ ಮೂಡಿದೆ. ಮಾಹಿತಿಯ ಪ್ರಕಾರ ಪಾಕಿಸ್ತಾನದ ಪಶ್ಚಿಮ ಗಡಿ ಭಾಗದ 12 ನೇ ತುಕಡಿಯಲ್ಲಿ 200 ಅಧಿಕಾರಿಗಳು ಹಾಗೂ 600 ಸೈನಿಕರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಉತ್ತರ ಸೇನಾ ಘಟಕದಲ್ಲಿ 100 ಅಧಿಕಾರಿಗಳು ಹಾಗೂ 500 ಸೈನಿಕರು ಕೇಂದ್ರ ಸ್ಥಾನ ಬಿಟ್ಟು ತೆರಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಗಡಿ ನಿಯಂತ್ರಣ ರೇಖೆಯಲ್ಲಿರುವ ಮಂಗಲ್ ಪಡೆಯ 75 ಅಧಿಕಾರಿಗಳು ಮತ್ತು 500 ಸೈನಿಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

  • Share On Facebook
  • Tweet It


- Advertisement -


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Tulunadu News May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Tulunadu News May 23, 2025
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search