• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಣ್ಣೇದುರೇ ಶೂಟೌಟ್, ಜಿಪ್ ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್”! ತನಿಖೆ ಶುರು..

Tulunadu News Posted On April 29, 2025
0


0
Shares
  • Share On Facebook
  • Tweet It

ಪೆಹಲ್ಗಾಂನಲ್ಲಿ ಉಗ್ರಗಾಮಿಗಳು ಅಮಾಯಕ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಟ್ಟು ಗುಂಡಿನ ದಾಳಿ ಮಾಡಿದಾಗ ಒಬ್ಬ ಪ್ರವಾಸಿ ಜಿಪ್ ಲೈನ್ ( ರೋಪ್ ವೇ) ನಲ್ಲಿ ನೇತಾಡಲು ಸಜ್ಜಾಗಿದ್ದ. ಅವರ ಹೆಸರು ರಿಶಿ ಭಟ್. ಅವರು ಇನ್ನೇನೂ ಅಲ್ಲಿಂದ ಮೂವ್ ಆಗಬೇಕು ಎನ್ನುವ ಕೆಲವೇ ಸೆಕೆಂಡ್ ಗಳ ಮೊದಲು ಅಲ್ಲಿದ್ದ ಜಿಪ್ ಲೈನ್ ಆಪರೇಟರ್ ಅಲ್ಲಾಹು ಅಕ್ಬರ್ ಎನ್ನುವ ಶಬ್ದಗಳನ್ನು ಉಚ್ಚರಿಸಿದ್ದಾನೆ. ಅವನು ಹಾಗೆ ಹೇಳುವಾಗ ಕೆಳಗೆ ನೋಡುತ್ತಿದ್ದ. ಆಗ ಗುಂಡಿನ ಶಬ್ದಗಳು ಕೇಳಿಸಿವೆ. ಅದನ್ನು ನೋಡಿಯೇ ಅವನು ಹಾಗೆ ಪಠಿಸುತ್ತಾ ಈ ರಿಶಿ ಭಟ್ ಎನ್ನುವ ಪ್ರವಾಸಿಯನ್ನು ಕೆಳಗೆ ಕಳುಹಿಸಲು ಸಜ್ಜಾಗಿದ್ದಾನೆ.

ಇದರ ಅರ್ಥ ಏನು?

ಈ ಪ್ರವಾಸಿ ಕೂಡ ಸಾಯಲಿ ಎನ್ನುವ ಕಾರಣಕ್ಕಾ? ಒಂದು ವೇಳೆ ಅಲ್ಲಿ ಜಿಪ್ ಲೈನ್ ಆಪರೇಟರ್ ಗೆ ಭಯೋತ್ಪಾದಕರು ಕಾಣಿಸದೇ ಇದ್ದಲ್ಲಿ ಆ ವಿಷಯ ಬೇರೆ. ಆದರೆ ಇಲ್ಲಿ ಬಹಳ ಸ್ಪಷ್ಟವಾಗಿ ಮರದ ಮೇಲೆ ನಿಂತಿರುವ ಆಪರೇಟರ್ ಗೂ ಆತನ ಹಿಂದೆ ನಿಂತಿರುವ ಇನ್ನೊಬ್ಬ ವ್ಯಕ್ತಿಗೂ ಎಲ್ಲವೂ ಬಹಳ ನಿಖರವಾಗಿ ಕಾಣಿಸುತ್ತಿತ್ತು. ಅದರ ನಂತರವೇ ಈ ಪ್ರವಾಸಿಗನನ್ನು ಕೆಳಗೆ ಬಿಡಲಾಗಿದೆ. ಇಲ್ಲಿ ಆ ಸ್ಥಳೀಯ ಆಪರೇಟರ್ ಮತ್ತು ಅವನ ಜೊತೆಗಿದ್ದ ವ್ಯಕ್ತಿಗೆ ಈ ಗುಂಡಿನ ಮೊರೆತ ಕೇಳಿಸುತ್ತಿತ್ತು. ಇದರಿಂದ ಆ ಉಗ್ರರಿಗೆ ಇವರೇ ಸುಳಿವು ಕೊಟ್ಟು ರೈಟ್ ಟೈಮ್ ಬಗ್ಗೆ ಹಿಂಟ್ ಕೊಟ್ಟರಾ ಎನ್ನುವ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ದಳದವರು ಜಿಪ್ ಲೈನ್ ಆಪರೇಟರನನ್ನು ತೀವ್ರವಾಗಿ ವಿಚಾರಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪಿಡಿಪಿ ವಕ್ತಾರ ಮೊಹಮ್ಮದ್ ಇಕ್ಬಾಲ್ ಟ್ರಬೊ ” ನಮ್ಮ ಆಚಾರ, ವಿಚಾರದ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ನಾವು ಯಾವಾಗಲೂ ಏನಾದರೂ ದುರ್ಘಟನೆಯನ್ನು ನೋಡಿದರೆ ಆಗ ಕಾಶ್ಮೀರಿಗಳ ಬಾಯಿಯಿಂದ ಅಲ್ಲಾಹು ಅಕ್ಬರ್ ಎನ್ನುವ ಮಾತು ಹೊರಗೆ ಬರುತ್ತದೆ. ಅಂತಹ ಭಯಾನಕ ಘಟನೆಗಳು ಆದಾಗ ನಾವು ಅಲ್ಲಾಹನನ್ನು ಸ್ಮರಿಸುತ್ತೇವೆ. ಈಗ ಅವನನ್ನು ವಿಚಾರಣೆಗೆ ಕರೆದಿರುವುದು ನಮ್ಮ ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಪಡೆಗಳು ತಮ್ಮ ಲೋಪವನ್ನು ಮುಚ್ಚಿಡಲು ಮಾತ್ರ. ಭಯೋತ್ಪಾದಕ ಕೃತ್ಯಗಳಿಗೂ, ಪಾಕಿಸ್ತಾನದ ಜನಸಾಮಾನ್ಯರಿಗೂ ಯಾವುದೇ ಸಂಬಂಧವಿಲ್ಲ. ಏನೇ ಘಟನೆಗಳಿಗೆ ನಾವು ಅಲ್ಲಾಹು ಅಕ್ಬರ್ ಎಂದು ಹೇಳುವ ಮೂಲಕ ನಮ್ಮ ಪ್ರತಿಕ್ರಿಯೆಯನ್ನು ನೀಡುವುದು ಸರ್ವೇ ಸಾಮಾನ್ಯ” ಎಂದು ಹೇಳಿದ್ದಾರೆ.

ಇಡೀ ಘಟನೆ ಜಿಪ್ ಲೈನ್ ನಲ್ಲಿ ತೂಗುತ್ತಿದ್ದ ರಿಶಿ ಭಟ್ ಮೊಬೈಲಿನಲ್ಲಿ ದಾಖಲಾಗಿದೆ. ರಿಶಿ ಭಟ್ ಅದೃಷ್ಟ ಚೆನ್ನಾಗಿತ್ತು. ಅವನು ಗುಂಡಿನ ದಾಳಿಯಿಂದ ಪಾರಾಗಿದ್ದಾನೆ. ಅವನ ಮಾತಿನ ಪ್ರಕಾರ ಇವನು ಎಲ್ಲಿ ಲ್ಯಾಂಡ್ ಆಗಬೇಕಿತ್ತೋ ಅಲ್ಲಿ ಉಗ್ರರು ಇದ್ದರು. ಅದಕ್ಕಾಗಿ ನಿಗದಿತ ಸ್ಥಳಕ್ಕಿಂತ ಮೊದಲೇ ಇವನು ಕೆಳಗೆ ಹಾರಿದ್ದಾನೆ. ಅಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಸ್ಥಳದಿಂದ ಪಾರಾಗಿದ್ದಾನೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search