• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ – ಲಾರೆನ್ಸ್ ಬಿಷ್ಣೋಯಿ

Tulunadu News Posted On April 30, 2025


  • Share On Facebook
  • Tweet It

ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ಯುದ್ಧ ಆರಂಭವಾಗುತ್ತದೆ ಎನ್ನುವ ಕುತೂಹಲದ ನಡುವೆ ಈ ಒಟ್ಟು ಸಂಘರ್ಷಕ್ಕೆ ಕುಖ್ಯಾತ ಡಾನ್ ಲಾರೆನ್ಸ್ ಬಿಷ್ಣೋಯಿ ಎಂಟ್ರಿ ಹೊಡೆದಿದ್ದಾನೆ. ಅವನ ಗ್ಯಾಂಗಿನಿಂದ ಬಂದಿರುವ ಸುದ್ದಿಯ ಪ್ರಕಾರ ಭಾರತದ ಅಮಾಯಕ ಹಿಂದೂಗಳನ್ನು ಹತ್ಯೆ ಮಾಡಿರುವ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲಿದ್ದೇವೆ. ಅವರ ದೇಶಕ್ಕೆ ನುಗ್ಗಿ ಒಬ್ಬನನ್ನಾದರೂ ಮುಗಿಸಿ ಬರಲಿದ್ದೇವೆ. ಇನ್ನು ನಾವು ಹತ್ಯೆ ಮಾಡುವ ಒಬ್ಬ ಪಾಕಿಸ್ತಾನದ ಒಂದು ಲಕ್ಷ ಜನರಿಗೆ ಸಮನಾಗಿರಲಿದ್ದಾನೆ ಎಂದು ಹೇಳಲಾಗಿದೆ.

 

ಬಿಷ್ಣೋಯಿ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ತಿಳಿಸಿದೆ. ಬಿಷ್ಣೋಯಿ ಗ್ಯಾಂಗ್ ಬಿಡುಗಡೆಗೊಳಿಸಿದ ಫೋಟೋದಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಈ ತೋಯಿಬಾ ಮುಖ್ಯಸ್ಥ ಹಫೀಜ್ ಸಯಿದ್ ಫೋಟೋಗೆ ತಪ್ಪು ಸಮಾನಾರ್ಥಕ ಚಿನ್ನೆಯನ್ನು ಬಳಸಲಾಗಿದೆ.

ಅದರೊಂದಿಗೆ ಸಂದೇಶ ಬರೆಯಲಾಗಿದ್ದು ” ಜೈ ಶ್ರೀರಾಮ್ ರಾಮ್ ರಾಮ್, ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರಗಾಮಿಗಳಿಂದ ಅಮಾಯಕರ ಹತ್ಯಾಕಾಂಡ ನಡೆದು ಯಾವುದೇ ತಪ್ಪು ಮಾಡದ ಅಮಾಯಕರ ಅಂತ್ಯವಾಗಿದೆ. ಆದಷ್ಟು ಶೀಘ್ರದಲ್ಲಿ ಇದಕ್ಕೆ ಪ್ರತೀಕಾರ ನಾವು ತೆಗೆದುಕೊಳ್ಳಲಿದ್ದೇವೆ. ನಮ್ಮ ನಾಗರಿಕರ ಹತ್ಯೆಗೆ ಸಮನಾಗಿ ನಾವು ಪಾಕಿಸ್ತಾನದ ಒಳಗೆ ನುಗ್ಗಿ ಒಬ್ಬನನ್ನಾದರೂ ಮುಗಿಸಿ ಬರಲಿದ್ದೇವೆ. ಇನ್ನು ಆ ಒಬ್ಬ ಪಾಕಿಸ್ತಾನದ ಒಂದು ಲಕ್ಷ ಜನರಿಗೆ ಸಮನಾಗಿರುತ್ತಾನೆ” ಎಂದು ಬರೆಯಲಾಗಿದೆ. ಬಿಷ್ಣೋಯಿ ಗ್ಯಾಂಗಿನ ಬರವಣಿಗೆಯ ಒಟ್ಟು ತಾತ್ಪರ್ಯ ಇಷ್ಟೇ, ನಾವು ಪಾಕಿಸ್ತಾನದ ದೊಡ್ಡ ಮಿಕವೊಂದನ್ನು ಉರುಳಿಸಲಿದ್ದೇವೆ.

ಹಾಗಾದರೆ ಬಿಷ್ಣೋಯಿ ಗ್ಯಾಂಗ್ ಮೋಸ್ಟ್ ವಾಟೆಂಡ್ ಉಗ್ರ ಹಫೀಜ್ ಸೈಯಿದ್ ನನ್ನು ಮುಗಿಸಲಿದೆಯಾ? ಹಫೀಜ್ ಉಗ್ರ ಸಂಘಟನೆ ಲಷ್ಕರೆ ಈ ತೊಯಿಬಾದ ಮುಖ್ಯಸ್ಥನಾಗಿದ್ದಾನೆ. ಅವನು ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಹಫೀಜ್ ಭಾರತದ ವಿವಿದೆಡೆ ನಡೆದ ಉಗ್ರರ ದಾಳಿಗಳ ಪ್ರಮುಖ ಸೂತ್ರಧಾರನೂ ಆಗಿದ್ದಾನೆ. ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳು ಅವನನ್ನು ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯಲ್ಲಿ ಸ್ಥಾನ ನೀಡಿವೆ. ಅವನನ್ನು ನಮಗೆ ಹಸ್ತಾಂತರಿಸಿ ಎಂದು ಭಾರತ ಅನೇಕ ಸಲ ಪಾಕಿಸ್ತಾನಕ್ಕೆ ಹೇಳಿದರೂ ಪಾಕಿಸ್ತಾನ ಇನ್ನು ಅವನನ್ನು ಸುರಕ್ಷಿತ ಸ್ಥಾನದಲ್ಲಿಟ್ಟು ಕಾಪಾಡುತ್ತಿದೆ.

  • Share On Facebook
  • Tweet It


- Advertisement -


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Tulunadu News May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Tulunadu News May 23, 2025
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search