• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!

Tulunadu News Posted On May 30, 2025
0


0
Shares
  • Share On Facebook
  • Tweet It

ರಾಮನಗರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇನ್ನು ಮಾಂಸಾಹಾರ, ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಅಯೋಧ್ಯೆ ನಗರ ನಿಗಮ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಸಂಪೂರ್ಣವಾಗಿ ಇಡೀ ಅಯೋಧ್ಯೆಯಲ್ಲಿ ಪಾವಿತ್ರತೆಯನ್ನು ಕಾಪಾಡಲು ಸ್ಥಳಿಯಾಡಳಿತ ತೀರ್ಮಾನ ಮಾಡಿದೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಅಯೋಧ್ಯಾ ನಗರ ನಿಗಮ ಈ ಮೊದಲೇ ನಿರ್ಧಾರ ಮಾಡಿತ್ತು. ಆದರೆ ಈಗ ಅದು ಅನುಷ್ಟಾನಕ್ಕೆ ಬರಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮಾಂಸಹಾರ ಮತ್ತು ಮದ್ಯ ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ನೋಟಿಸು ಜಾರಿ ಮಾಡಲಾಗಿದೆ. ಆ ನೋಟಿಸಿನಲ್ಲಿ ಮುಂದಿನ ಏಳು ದಿನಗಳ ಒಳಗೆ ಮಾಂಸದ ಖಾದ್ಯಗಳನ್ನು ಮತ್ತು ಮದ್ಯವನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಖಡಕ್ ಸೂಚನೆ ನೀಡಲಾಗಿದೆ. ಇದು ಅಯೋಧ್ಯೆಯ ರಾಮ ಮಂದಿರದ 15 ಕಿ.ಮೀ ಸುತ್ತಮುತ್ತಲು ಜಾರಿಗೆ ಬರಲಿದೆ. ಇದರೊಂದಿಗೆ ರಾಮಪಥದಲ್ಲಿ ತಂಬಾಕು, ಗುಟ್ಕಾ, ಒಳವಸ್ತುಗಳ ಜಾಹೀರಾತುಗಳನ್ನು ಕೂಡ ಹಾಕುವಂತಿಲ್ಲ ಎನ್ನುವ ನಿಯಮ ಜಾರಿಗೆ ತರಲಾಗಿದೆ. ರಾಮಪಥ ಅಯೋಧ್ಯೆಯ ರಾಮ ಮಂದಿರದಿಂದ ಫೈಜಾಬಾದ್ ಸೇರಿಸಿಕೊಂಡು 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ.

ಇನ್ನು ಅಧಿಕಾರಿಗಳ ಪ್ರಕಾರ ರಾಮಪಥದ ಅರ್ಧ ಕಿಲೋ ಮೀಟರ್ ನಂತರವೇ ಮಾಂಸಾಹಾರ, ಮದ್ಯ ಮಾರಬಹುದು. ಇಲ್ಲಿಯ ತನಕ ರಾಮಪಥ ಬರುವ ಫೈಜಾಬಾದ್ ನಲ್ಲಿ ಇದನ್ನೆಲ್ಲಾ ಮಾರಲಾಗುತ್ತಿತ್ತು. ಇನ್ನು ಹಾಗೆ ಮಾರುವಂತಿಲ್ಲ. ಒಂದೋ ಈ ಹೋಟೇಲುಗಳು ಮಾಂಸಹಾರ ವ್ಯಾಪಾರ ನಿಲ್ಲಿಸಬೇಕು ಅಥವಾ ತಮ್ಮ ಹೋಟೇಲನ್ನು ರಾಮಪಥದ ನಂತರದ ಅರ್ಧ ಕಿಲೋ ಮೀಟರ್ ದೂರದಲ್ಲಿ ತೆರೆಯಬೇಕು.

ಅಯೋಧ್ಯೆಯ ನಗರದಲ್ಲಿ ಮಾಂಸಹಾರ, ಮದ್ಯ ಮಾರುವುದು ಹಲವು ಕಾಲದ ಹಿಂದೆಯೇ ನಿಲ್ಲಿಸಲಾಗಿದೆ. ಆದರೆ ಈಗ ರಾಮಪಥ ಫೈಜಾಬಾದನ್ನು ಸೇರಿಸಿಕೊಂಡು ಬೆಳೆದಿರುವುದರಿಂದ ಆ ಪ್ರದೇಶದಲ್ಲಿ ಇದನ್ನು ಜಾರಿಗೆ ತರುವ ಅವಶ್ಯಕತೆ ಇತ್ತು.

ಇಂತಹ ನಿಯಮ ಸ್ಥಳೀಯಾಡಳಿತದ ಸಭೆಯಲ್ಲಿ ಪಾಸಾಗುತ್ತಿದ್ದಂತೆ ಅಯೋಧ್ಯೆಯ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ತಮ್ಮ ತಂಡದೊಂದಿಗೆ ರಾಮಪಥ ಸ್ಥಳಕ್ಕೆ ಬಂದು ಏಳು ದಿನಗಳ ಒಳಗೆ ತಮ್ಮ ಅಂಗಡಿಗಳಲ್ಲಿ ಮಾಂಸಹಾರ ಮಾರದಂತೆ ಸೂಚನೆ ನೀಡಿದರು. ಇನ್ನು ಒಂದು ವೇಳೆ ಈ ಸೂಚನೆ ಉಲ್ಲಂಘಿಸಿದ್ದಲ್ಲಿ ಸ್ಥಳೀಯಾಡಳಿತ ತೆಗೆದುಕೊಳ್ಳುವ ಮುಂದಿನ ಯಾವುದೇ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡಿದರು. ಧರ್ಮಪಥ, ರಾಮಪಥ, 14 ಕೋಸಿ ಮತ್ತು ಪಂಚಕೋಸಿ ಮಾರ್ಗದಲ್ಲಿ ಇನ್ನು ಮಾಂಸಹಾರ ಮಾರಲಾಗುವುದಿಲ್ಲ.

ಅಯೋಧ್ಯೆ ನಗರ ನಿಗಮ ಈ ನಿಯಮವನ್ನು ತಮ್ಮ ಸಭೆಯಲ್ಲಿ ಅಂಗೀಕರಿಸಿದ ನಂತರ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಗೊತ್ತಾದ ನಂತರ ಇಲ್ಲಿಯ ತನಕ ಮಾಂಸಾಹಾರ ಮಾರುತ್ತಿದ್ದ ವ್ಯಾಪಾರಿಗಳು ಕೂಡ ಇನ್ನು ಮುಂದೆ ತಮ್ಮ ಅಂಗಡಿಗಳಲ್ಲಿ ಸಸ್ಯಹಾರವನ್ನು ಮಾರಲು ನಿರ್ಧರಿಸಿದ್ದಾರೆ. ಸ್ಥಳಿಯಾಡಳಿತದ ಸೂಚನೆಯನ್ನು ಒಪ್ಪಿಕೊಂಡಿರುವ ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಸಸ್ಯಹಾರ ಮಾರುವ ಬಗ್ಗೆ ಮಾಡಬೇಕಾದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಅಯೋಧ್ಯೆಯ ಸ್ಥಳೀಯಾಡಳಿತದ ಈ ಕ್ರಮದಿಂದ ಭಾರತದ ಸನಾತನ ಪರಂಪರೆಯ ಶುದ್ಧತೆ ಮತ್ತು ಪಾವಿತ್ರತೆ ಮುಂಬರುವ ದಿನಗಳಲ್ಲಿ ಪೂರ್ಣವಾಗಿ ರಾಮನೂರಿನಲ್ಲಿ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search