• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ – 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!

Tulunadu News Posted On May 31, 2025
0


0
Shares
  • Share On Facebook
  • Tweet It

ಒಂದು ಕಾಲದಲ್ಲಿ ಪ್ರಖ್ಯಾತವಾಗಿದ್ದ ಹಿಂದಿ ಧಾರಾವಾಹಿ ಕ್ಯೂಂ ಕೀ ಸಾಸ್ ಬಿ ಕಬೀ ಭಹೂ ತೀ ನಿಂದ ಜನಮಾನಸದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಸ್ಮೃತಿ ಇರಾನಿ ಅದೇ ಇಮೇಜಿನೊಂದಿಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಕೇಂದ್ರದ ನಾಯಕರಾಗಿಯೂ ಕೆಲಸ ಮಾಡಿದ ಸ್ಮೃತಿ 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಸರ್ವೋಚ್ಚ ನಾಯಕ ರಾಹುಲ್ ಗಾಂಧಿಯವರನ್ನು ಸೋಲಿಸಿದ್ದರು. ಮೋದಿ ಮೊದಲ ಬಾರಿ ಪ್ರಧಾನಿಯಾದಾಗಲೇ 2014 ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರು. ಕೇಂದ್ರದಲ್ಲಿ 2014 ರಿಂದ 2024 ರ ತನಕ ಮಂತ್ರಿಯನ್ನಾಗಿ ಮಾಡಿದ್ದರು. ಕೇಂದ್ರದಲ್ಲಿ ಮೋದಿಯವರ ಸಚಿವ ಸಂಪುಟದಲ್ಲಿ ಹತ್ತು ವರ್ಷಗಳ ತನಕ ಸಚಿವೆಯಾಗಿದ್ದರು.

2019 ರಿಂದ 2024 ರವರೆಗೆ ಅಮೇಠಿಯಲ್ಲಿ ಸಂಸದರಾಗಿ, ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೂ 2024 ರಲ್ಲಿ ಅಮೇಠಿಯ ಜನ ಅವರ ಕೈ ಹಿಡಿಯಲಿಲ್ಲ. ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಶರ್ಮಾ ಅವರ ವಿರುದ್ಧ ಸೋತು ರಾಜಕಾರಣದಲ್ಲಿ ಒಂದಿಷ್ಟು ನೈಪಥ್ಯಕ್ಕೆ ಸರಿದಿದ್ದರು. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತದೆ ಎನ್ನುವ ವದಂತಿ ಇದ್ದರೂ ಅದು ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಇನ್ನೊಂದೆಡೆ ರಾಷ್ಟ್ರೀಯ ಅಧ್ಯಕ್ಷೆಯನ್ನಾಗಿ ಅವರನ್ನು ಭಾಜಪಾ ಹೈಕಮಾಂಡ್ ನೇಮಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ ಅದು ಇನ್ನೂ ಜಾರಿಗೆ ಬಂದಿಲ್ಲ.

ಈ ಕಾಲಘಟ್ಟದಲ್ಲಿ ಮತ್ತೆ ಲೈಮ್ ಲೈಟಿಗೆ ಬರಲು ಸ್ಮೃತಿ ಇರಾನಿ ಸಿದ್ಧತೆಯನ್ನು ನಡೆಸಿದ್ದಾರೆ.
ಏಕ್ತಾ ಕಪೂರ್ ನಿರ್ಮಾಣದ ಕ್ಯೂಂ ಕಿ… ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿರುವ ಅವರಿಗೆ ಚಿತ್ರೀಕರಣದಲ್ಲಿ ಝಡ್ ಪ್ಲಸ್ ಭದ್ರತಾ ವ್ಯವಸ್ಥೆ ನೀಡಲಾಗಿದೆ. ಅವರು ಚಿತ್ರೀಕರಣದಲ್ಲಿ ಇದ್ದಾಗ ಕಠಿಣ ನಿಯಮಗಳನ್ನು ಧಾರಾವಾಹಿ ತಂಡ ಜಾರಿಗೆ ತಂದಿದ್ದು, ಯಾವುದೇ ಫೋನ್ ತೆಗೆದುಕೊಂಡು ಚಿತ್ರೀಕರಣದ ಜಾಗದಲ್ಲಿ ಇರುವಂತಿಲ್ಲ. ಕೇವಲ ಸ್ಮೃತಿ ಇರಾನಿ, ಅಮರ್ ಉಪಾಧ್ಯಾಯ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಅವರ ಮೊಬೈಲ್ ಫೋನ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲರ ಫೋನ್ ಗಳನ್ನು ಟ್ರಾಪ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಾಗರಿಕರು ಚಿತ್ರೀಕರಣದ ಸ್ಥಳದ ಹತ್ತಿರದಲ್ಲಿಯೂ ಸುಳಿಯದಂತೆ ನೋಡಿಕೊಳ್ಳಲಾಗಿದೆ.

ಒಂದೂವರೆ ದಶಕದ ನಂತರ ಈ ಪ್ರಖ್ಯಾತ ಧಾರಾವಾಹಿಯ ಎರಡನೇ ಭಾಗ ಮತ್ತೆ ಪ್ರಸಾರಗೊಳ್ಳಲು ಅಣಿಯಾಗಿದ್ದು, ಸ್ಮೃತಿ ಇರಾನಿ ಹೇಗೆ ಅಭಿನಯಿಸಿದ್ದಾರೆ ಎನ್ನುವ ಕುತೂಹಲ ಜನರಿಗೆ ಇದೆ. ಅದರೊಂದಿಗೆ ಅವರ ಹಿಂದಿನ ಭಾಗದ ಜೋಡಿ ಅಮರ್ ಉಪಾಧ್ಯಾಯ ಕೂಡ ಜೊತೆಯಾಗಲಿದ್ದು, ಇದು ಕೂಡ ಹೆಣ್ಣುಮಕ್ಕಳ ಕುತೂಹಲವನ್ನು ಕೆರಳಿಸಿದೆ.

ತುಳಸಿ ಎನ್ನುವ ಹೆಸರಿನಿಂದ ಧಾರಾವಾಹಿ ಪ್ರಿಯರ ಮನೆಮಾತಾಗಿದ್ದ ಸ್ಮೃತಿ ಆ ಧಾರಾವಾಹಿಯಲ್ಲಿ ಸುಮಾರು ಎಂಟು ವರ್ಷ ಅಭಿನಯಿಸಿದ್ದರು. ಇದರ ಪ್ರಖ್ಯಾತಿ ಅವರನ್ನು ರಾಜಕೀಯ ಕ್ಷೇತ್ರಕ್ಕೆ 2003 ರಲ್ಲಿ ತೆಗೆದುಕೊಂಡು ಹೋಗಿತ್ತು. ಈಗ ಮುಂದಿನ ಭಾಗ ಯಾವಾಗ ಟಿವಿಯಲ್ಲಿ ಬರಲಿದೆ ಎಂದು ಹೇಳಲಾಗಿಲ್ಲ.

0
Shares
  • Share On Facebook
  • Tweet It


- Advertisement -


Trending Now
ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
Tulunadu News June 25, 2025
ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
Tulunadu News June 25, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
  • Popular Posts

    • 1
      ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • 2
      ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • 3
      ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • 4
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search