• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!

TULUNADU NEWS Posted On June 16, 2025
0


0
Shares
  • Share On Facebook
  • Tweet It

ಭಾರತ ಇಡೀ ವಿಶ್ವಕ್ಕೆ ಯುಪಿಐ ವ್ಯವಹಾರದ ವಿಷಯದಲ್ಲಿ ನಾಯಕ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಯಾಕೆಂದರೆ ಭಾರತದಲ್ಲಿ ಬೀಡಾ ಸ್ಟಾಲ್ ನಿಂದ ಮಾಲ್ ಗಳ ತನಕ ಯುಪಿಐ ಪೇಮೆಂಟ್ ಚಾಲ್ತಿಯಲ್ಲಿದೆ. ಯುಪಿಐ ಎಂದರೆ ಯುನಿಫೈಡ್ ಪೇಮೆಂಟ್ ಇಂಟರಫೇಸ್ ಎನ್ನುವುದು ಅದರ ಪೂರ್ಣ ರೂಪ. ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿನ ಶಾಖೆಗೆ ಹಣವನ್ನು ಮೊಬೈಲ್ ಆಪ್ ಮೂಲಕ ಹಸ್ತಾಂತರಿಸುವುದೇ ಇದರ ನಿಜವಾದ ಕೆಲಸ. ಬೇರೆ ಬೇರೆ ಕಂಪೆನಿಗಳ ಆಪ್ ಗಳ ಮೂಲಕ ಇಲ್ಲಿ ಹಣವನ್ನು ವರ್ಗಾಯಿಸಬಹುದು. ವಿಶ್ವದ 50% ಯುಪಿಐ ಟ್ರಾನ್ಸಫರ್ ಭಾರತದ ಒಂದರಲ್ಲಿಯೇ ನಡೆಯುತ್ತದೆ. ಅಷ್ಟು ದೊಡ್ಡದಾಗಿ ಆಧುನಿಕತೆಗೆ ಭಾರತ ತೆರೆದುಕೊಂಡಿದೆ. ಇಲ್ಲಿ ಸೊಪ್ಪು ಮಾರುವವ ಕೂಡ ಕ್ಯೂ ಆರ್ ಕೋಡ್ ಹೊಂದಿದ್ದಾನೆ. ಜಾತ್ರೆಯಲ್ಲಿಯೂ ಬೊಂಬೆ ಮಾರುವವರ ಬಳಿ ಕ್ಯೂ ಆರ್ ಕೋಡ್ ಇದೆ. ಆದ್ದರಿಂದ ಆರ್ಥಿಕ ಪಾರದರ್ಶಕತೆಗೆ ಭಾರತ ಹಣಕಾಸು ವ್ಯವಸ್ಥೆ ಹೊಂದಿಕೊಂಡಿದೆ.

ಒಂದು ಯುಪಿಐ ಪೇಮೆಂಟ್ ಆಗಲು ಇಲ್ಲಿಯ ತನಕ ತಗಲುತ್ತಿದ್ದ ವೇಳೆಗಿಂತ ಇನ್ನು ಮುಂದೆ ಬಹಳ ವೇಗವಾಗಿ ಈ ಹಣ ವರ್ಗಾವಣೆ ಆಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ. ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಎನ್ನುವ ಸಂಸ್ಥೆ ಈ ವ್ಯವಹಾರವನ್ನು ನೋಡಿಕೊಳ್ಳುತ್ತದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಜಂಟಿಯಾಗಿ ನಿರ್ವಹಿಸುತ್ತವೆ.
ಇಂದಿನಿಂದ ಯುಪಿಐ ಪೇಮೆಂಟ್ ವೇಗ ಪಡೆದುಕೊಳ್ಳುತ್ತಿರುವ ಬಗ್ಗೆ ಎನ್ ಪಿಸಿಐ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಲ್ಲಿಯ ತನಕ ಯಾವುದೇ ಯುಪಿಐ ಟ್ರಾನ್ಸೆಕ್ಷನ್, ಅದು ಹಣ ಪಡೆದುಕೊಳ್ಳುವುದು ಅಥವಾ ಕಳುಹಿಸಿಕೊಡುವುದು ಯಾವುದೂ ಇರಲಿ, ಹೆಚ್ಚು ಕಡಿಮೆ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿತ್ತು. ಇನ್ನು ಹೊಸ ನಿಯಮಗಳ ಪ್ರಕಾರ ಇನ್ನು 15 ಸೆಕೆಂಡುಗಳ ಒಳಗೆ ಈ ವರ್ಗಾವಣೆ ನಡೆದುಹೋಗಲಿದೆ. ಇದು ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸಹಿತ ಎಲ್ಲಾ ರೀತಿಯ ಆಪ್ ಗಳಿಗೂ ಅನ್ವಯವಾಗುತ್ತದೆ.

ಇನ್ನು ಹಣ ವರ್ಗಾವಣೆಯ ಸ್ಟೇಟಸ್ ಪರಿಶೀಲನೆ ಮತ್ತು ವಿಫಲವಾದ ವರ್ಗಾವಣೆಯನ್ನು ಮರುಚಾಲನೆಗೊಳಿಸುವ ಪ್ರಕ್ರಿಯೆ ಕೂಡ ಇಷ್ಟೇ ವೇಗದಲ್ಲಿ ನಡೆಯಲಿದೆ. ಈ ಹಿಂದೆ ನಮ್ಮ ಹಣ ವರ್ಗಾವಣೆ ಆಗುವಲ್ಲಿ ವಿಫಲವಾಗಿದ್ದರೆ ನಾವು ಮೂವತ್ತು ಸೆಕೆಂಡ್ಸ್ ತನಕ ಕಾದು ಹಣ ವರ್ಗಾವಣೆ ಆಗಿದೆಯಾ ಅಥವಾ ನಮ್ಮ ಖಾತೆಯಲ್ಲಿ ಉಳಿದಿದೆಯಾ ಎಂದು ಕಾಯಬೇಕಿತ್ತು. ಈಗ ಈ ಪ್ರಕ್ರಿಯೆ ಕೇವಲ 10 ಸೆಕೆಂಡ್ಸ್ ಒಳಗೆ ಮುಗಿಯಲಿದೆ. ಇದರಿಂದ ವರ್ಗಾವಣೆ ಪ್ರಕ್ರಿಯೆ ಯಶಸ್ವಿಯಾ ಅಥವಾ ವಿಫಲನಾ ಎಂದು ಗ್ರಾಹಕರಿಗೆ ತಕ್ಷಣ ಗೊತ್ತಾಗುತ್ತದೆ.

ಇಲ್ಲಿ ಒಂದು ಉದಾಹರಣೆಯೊಂದಿಗೆ ನಿಮಗೆ ವಿವರಿಸುತ್ತೇನೆ. ನೀವು ಒಂದು ಮಳಿಗೆಗೆ ಹೋಗುತ್ತೀರಿ. ಅಲ್ಲಿ 500 ರೂಪಾಯಿಯ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಅಂಗಡಿಯವರ ಕ್ಯೂಆರ್ ಕೋಡ್ ಅನ್ನು ಬ್ಯಾಂಕ್ ಆಪ್ ಮೂಲಕ ಸ್ಕ್ಯಾನ್ ಮಾಡುತ್ತೀರಿ. ಆಗ ನಿಮ್ಮ ಮೊಬೈಲಿನ ಏಪ್ ಆ ಅಂಗಡಿಯ ಮಾಲೀಕನ ಆಪ್ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್ ಪಿಸಿಐ ಮೂಲಕ ಯುಪಿಐಗೆ ಸಂದೇಶ ಕಳುಹಿಸಿಕೊಡುತ್ತದೆ. ನಂತರ ಹಣ ಪ್ರಕ್ರಿಯೆ ಆರಂಭವಾಗುತ್ತದೆ. ಅದರ ನಂತರ ಹಣ ವರ್ಗಾವಣೆ ಆಗಿದೆಯಾ ಇಲ್ವಾ ಎನ್ನುವ ಸಂದೇಶ ನಿಮ್ಮ ಆಪ್ ಮೂಲಕ ನಿಮಗೆ ಸಿಗುತ್ತದೆ. ಈ ಒಟ್ಟು ಪ್ರಕ್ರಿಯೆ ನಡೆಯಲು ಇಲ್ಲಿಯ ತನಕ 30 ಸೆಕೆಂಡ್ಸ್ ತಗಲುತ್ತಿತ್ತು. ಇನ್ನು ಅದು 15 ಸೆಕೆಂಡ್ಸ್ ಒಳಗೆ ಮುಗಿಯಲಿದೆ.

0
Shares
  • Share On Facebook
  • Tweet It


- Advertisement -


Trending Now
ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
TULUNADU NEWS June 25, 2025
ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
TULUNADU NEWS June 25, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
  • Popular Posts

    • 1
      ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • 2
      ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • 3
      ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • 4
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search