• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಮತಾ ಬ್ಯಾನರ್ಜಿ ನೆನಪಿರಲಿ, ವಿವೇಕಾನಂದರು ಮಾಡಿದ್ದು ರಾಜಕೀಯ ಭಾಷಣವಲ್ಲ

TNN Correspondent Posted On September 10, 2017


  • Share On Facebook
  • Tweet It

‘ಸಿಸ್ಟರ್ಸ್‌ ಆ್ಯಂಡ್ ಬ್ರದರ್ಸ್‌ ಆಫ್ ಅಮೆರಿಕ’

ಸೆ.11, 1983ರಲ್ಲಿ ಅಮೆರಿಕದ ಷಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾಷಣ ಆರಂಭಿಸುತ್ತಲೇ ಆಡಿದ ಈ ಒಂದು ಮಾತು ಮಿಸ್ಟರ್, ಮಿಸ್ಟ್ರೆಸ್ ಎನ್ನುವುದೇ ಗೌರವ ಎಂದು ತಿಳಿದಿದ್ದ ಅಮೆರಿಕ ಮಾತ್ರವಲ್ಲ, ಇಡೀ ಜಗತ್ತೇ ಮಂತ್ರಮುಗ್ಧವಾಗುವಂತೆ, ಇದಪ್ಪ ಸಂಸ್ಕಾರ ಎಂದು ಮಾತನಾಡುವಂತೆ ಮಾಡಿತ್ತು! ಅಷ್ಟೇ ಅಲ್ಲ, ಅಂದು ವಿವೇಕಾನಂದರ ಪ್ರತಿ ಮಾತೂ, ಪ್ರತಿ ಪದ ದೇಶದ ತೂಕವನ್ನು ಹೆಚ್ಚಿಸಿತ್ತು.

ಇಂಥ ವಿವೇಕಾನಂದರ ಭಾಷಣಕ್ಕೆ ಸೆ.11ಕ್ಕೆ 125 ವರ್ಷ ತುಂಬುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿದೆ. ನರೇಂದ್ರ ಮೋದಿ ಅವರೇ ದೇಶವನ್ನುದ್ದೇಶಿಸಿ ಈ ಕುರಿತು ಮಾತನಾಡಲಿದ್ದಾರೆ. ಹೇಳಿ, ದೇಶದ ಘನತೆ ಹೆಚ್ಚಿಸಿದ ಸಿಡಿಲ ಸನ್ಯಾಸಿ ವಿವೇಕಾನಂದರ ಭಾಷಣದ 125ನೇ ವಾರ್ಷಿಕೋತ್ಸವದ ನಿಮಿತ್ತ ಇಂಥ ಕಾರ್ಯಕ್ರಮ ಆಯೋಜಿಸುವುದರಲ್ಲಿ ತಪ್ಪೇನಿದೆ?

ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ, ಇದೇ ದೊಡ್ಡ ತಪ್ಪಾಗಿ ಕಾಣಿಸುತ್ತಿದೆ…
ವಿಚಾರ ಸಂಕಿರಣವನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ ಸಂಕಿರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಪ್ರಸಾರವಾಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾಾರೆ?
ಇದು ‘ವಿವೇಕ’ ಇರುವ ರಾಜಕಾರಣಿ ಆಡುವ ಮಾತೇ? ಕೇಂದ್ರ ಸರಕಾರದ ನಿರ್ಣಯ ವಿರೋಧಿಸಬೇಕು ಎಂದು ಮಮತಾ ಈ ಮಟ್ಟಕ್ಕೂ ಇಳಿಯಬಲ್ಲರಾ? ಅಷ್ಟಕ್ಕೂ, ವಿವೇಕಾನಂದರೇನು ಅಬು ಸಲೇಂ, ಅಫ್ಜಲ್ ಗುರುನಾ? ಷಿಕಾಗೋದಲ್ಲಿ ಮಾಡಿದ್ದು ರಾಜಕೀಯ ಭಾಷಣವಾ? ಏನಾಗಿದೆ ಇವರ ಮಿದುಳಿಗೆ?
ಇಷ್ಟು ಬೊಗಳೆ ಬಿಡುವ ಮಮತಾ ಬ್ಯಾನರ್ಜಿ ಮಾತ್ರ ಬಾಂಗ್ಲಾದೇಶಿಯರಿಗೆ ವೋಟರ್ ಐಡಿ ಕೊಟ್ಟು ಮಕ್ಕಳಂತೆ ಬಂಗಾಳದಲ್ಲಿ ಸಾಕುತ್ತಿದ್ದಾರೆ. ಹಿಂದೂಗಳನ್ನು ಮಲಮಕ್ಕಳಂತೆ ಕಾಣುವುದಲ್ಲದೇ, ಅವರ ವಿರುದ್ಧ ಎತ್ತಿಕಟ್ಟುತ್ತಾರೆ. ಹಿಂದೂಗಳ ಹಬ್ಬಗಳಿಗೆ ನಿಷೇಧ ಹೇರುತ್ತಾರೆ. ಆದರೆ ವಿಶ್ವವೇ ಮೆಚ್ಚಿದ ವಿವೇಕಾನಂದರ ಕುರಿತ ವಿಚಾರ ಸಂಕಿರಣಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ವಿಚಾರ, ವಿವೇಕ ಇರುವವರು ಹೀಗೆ ಮಾಡುವುದಿಲ್ಲ ಮಮತಾ. ಕಮ್ಯುನಿಸ್ಟರ ವಿರುದ್ಧ ಹೋರಾಡಿ, ಈಗ ಕಮ್ಯುನಿಷ್ಟರಂತೆಯೇ ವರ್ತಿಸುತ್ತಿರುವ ಮಮತಾರ ‘ಕಮ್ಮಿನಿಷ್ಠೆೆ ಗೊತ್ತು ಬಿಡಿ.

-ಅಶ್ವಿನ್ ಉಬ್ಬಜ್ಜಿಪಲ್

  • Share On Facebook
  • Tweet It


- Advertisement -


Trending Now
ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
Tulunadu News October 3, 2023
ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
Tulunadu News October 2, 2023
Leave A Reply

  • Recent Posts

    • ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
  • Popular Posts

    • 1
      ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • 2
      ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • 3
      ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • 4
      ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • 5
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search