ಎಐಎಡಿಎಂಕೆಯಿಂದ ಶಶಿಕಲಾ ನಟರಾಜನ್ ಉಚ್ಚಾಟನೆ
Posted On September 12, 2017

ಚೆನ್ನೈ: ಕೊನೆಗೂ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಶಿಕಲಾ ನಟರಾಜನ್ರನ್ನು ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಕೌನ್ಸಿಲ್ ಸಭೆಯಲ್ಲಿ ಈ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಶಶಿಕಲಾ ಸಂಬಂಧಿ ಹಾಗೂ ಪ್ರಸ್ತುತ ಬಂಡಾಯ ಎದ್ದಿರುವ ಟಿಟಿವಿ ದಿನಕರನ್ಗೆ ಇದು ಹಿನ್ನಡೆಯಾಗಿದೆ. ಆದಾಗ್ಯೂ, ಪಕ್ಷದ ಮುಖ್ಯ ಸಂಚಾಲಕರಾಗಿ ಓ. ಪನ್ನೀರ್ಸೆಲ್ವಂ ಮತ್ತು ಮುಖ್ಯಮಂತ್ರಿ ಪಳನಿ ಸ್ವಾಮಿಗೆ ಸಹಾಯಕ ಮುಖ್ಯ ಸಂಚಾಲಕರಾಗಿದ್ದಾರೆ. ಸಾಮಾನ್ಯ ಕಾರ್ಯದರ್ಶಿಯ ಎಲ್ಲಾ ಅಧಿಕಾರವನ್ನು ಇವರಿಬ್ಬರಿಗೆ ನೀಡಲಾಗಿದೆ. ಜಯಲಲಿತಾ ಅವರು ಇನ್ನು ಮುಂದೆಯೂ ಪಕ್ಷದ ಸಾಮಾನ್ಯ ಕಾರ್ಯದರ್ಶಿಯಾಗಿರಲಿದ್ದಾರೆ ಎಂದು ಪಕ್ಷ ಪ್ರಕಟಣೆ ತಿಳಿಸಿದೆ.
- Advertisement -
Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
March 25, 2023
Leave A Reply