• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ನೀವೂ ವಂಶ ರಾಜಕಾರಣದ ಫಲಾನುಭವಿಯೇ ಅಲ್ಲವೇ ರಾಹುಲ್ ಗಾಂಧಿ?

ಶ್ರೀಶೈಲ್ ಮಳ್ಳಿ, ಶಹಾಪುರ Posted On September 13, 2017
0


0
Shares
  • Share On Facebook
  • Tweet It

ಇದ್ದಿಲು ಮಸಿಗೆ ಹೇಳಿತ್ತಂತೆ, ನೀನು ಕಪ್ಪು ಎಂದು…

ರಾಹುಲ್ ಗಾಂಧಿ ಅವರು ಮಂಗಳವಾರ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ನಿಂತು ಉಲಿದ ಮಾತು ಹೀಗಿದೆ, “ಭಾರತದಲ್ಲಿ ವಂಶರಾಜಕಾರಣದಿಂದ ರಾಜಕೀಯ ಅರಾಜಕತೆಯಂಥ ವಾತಾವರಣ ಸೃಷ್ಟಿಯಾಗಿದೆ’.

ಈ ಮಾತು ಕೇಳಿಯೇ, ಮೇಲಿನ ಉಕ್ತಿ ನೆನಪಾಗಿದ್ದು…

ನಿಜ ರಾಹುಲ್ ಗಾಂಧಿ ಅವರ ಮಾತುಗಳನ್ನು ದೇಶದ ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಹಾಗಂತ ರಾಹುಲ್ ಗಾಂಧಿ ಏನು ಬೇಕಾದರೂ ಮಾತನಾಡಬಹುದೆ? ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಹೀಗೆ ಮಾತನಾಡಿಯೂ, ಯಾರ ಮರ್ಯಾದೆ ಹೋಯಿತು ಹೇಳಿ? ಅಷ್ಟಕ್ಕೂ ರಾಹುಲ್ ಗಾಂಧಿ ವಂಶರಾಜಕಾರಣದ ಫಲಾನುಭವಿಯೇ ಅಲ್ಲವೇ?

ಮೋತಿ ಲಾಲರ ಪ್ರಭಾವಿಯಿಂದ ಬಂದ ಜವಾಹರ ಲಾಲ್ ನೆಹರೂ ದೇಶದ ಪ್ರಧಾನಿಯಾದರೂ. ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದ ಬಳಿಕ ನೆಹರೂ ಪುತ್ರಿ ಎಂಬ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಪ್ರಧಾನಿಯಾದರು. ಇಂದಿರಾ ಪುತ್ರನಾಗಿದ್ದಕ್ಕೇ, ಎಲ್ಲೋ ಪೈಲಟ್ ಆಗಿದ್ದ ರಾಜೀವ್ ಗಾಂಧಿ ದೇಶದ ಚುಕ್ಕಾಣಿ ಹಿಡಿದರು. ಸಂಜಯ್ ಗಾಂಧಿಯೂ ರಾಜಕೀಯದ ಪಡಸಾಲೆಯಲ್ಲಿ ಹೊರಳಾಡಿದರು. ಇಂದಿರಾ ಸೊಸೆ ಎಂಬ ಕಾರಣಕ್ಕಾಗಿಯೇ, ಸೋನಿಯಾ ಕಾಂಗ್ರೆಸ್ ಅಧಿನಾಯಕಿಯಾದರು. ಇನ್ನು ಇಷ್ಟೆಲ್ಲ ಮಾತನಾಡುವ ರಾಹುಲ್ ಗಾಂಧಿ ಸೋನಿಯಾ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕಾಗಿಯೇ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ. ಅದೇ ಕಾರಣಕ್ಕೇ ಮುಂದಿನ ಚುನಾವಣೆಯಲ್ಲಿ ನಾಯಕತ್ವ ವಹಿಸಲು ಸಿದ್ಧ ಎಂದಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದರಲ್ಲಿ ನಿಜ. ವಂಶ ರಾಜಕಾರಣದ ಪ್ರಭಾವದಿಂದಲೇ ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ನೆಹರೂ ಹಗರಣದ ಜನಕರಾದರು. ರಾಜೀವ್ ಗಾಂಧಿ ಬೊಫೋರ್ಸ್ ಹಗರಣದ ಉಡುಗೊರೆ ನೀಡಿದರು. ಸೋನಿಯಾ ಗಾಂಧಿ ಹಿಂಬಾಗಿಲಿನಿಂದಲೂ ದೇಶವನ್ನು ಆಳಬಹುದು ಎಂದು ತೋರಿಸಿದರು. ಕೊನೆಗೆ ರಾಹುಲ್ ಗಾಂಧಿ ವಂಶರಾಜಕಾರಣದ ಕುಡಿಯಾಗಿಯೂ ದೇಶದ ಜನರ ಎದುರು ಜೋಕರ್ ಎನಿಸಿದ್ದಂತೂ ಸುಳ್ಳಲ್ಲ.

ಆದರೆ, ವಿದೇಶಿ ವಿವಿ ವಿದ್ಯಾರ್ಥಿಗಳ ಎದುರು ಭಾರತದ ಘನತೆ ಎತ್ತಿ ಹಿಡಿಯಬೇಕಿದ್ದ ರಾಹುಲ್ ಗಾಂಧಿ, ದೇಶದ ಮರ್ಯಾದೆ ಕಳೆಯಲು ವಿಫಲ ಯತ್ನ ಮಾಡಿದ್ದು ದುರಂತ. ಬಡವನ ಮನೆಯಲ್ಲಿ ಹುಟ್ಟಿದ ಲಾಲ್ ಬಹದ್ದೂರ್ ಶಾಸ್ತ್ರಿ ಈ ದೇಶದ ಪ್ರಧಾನಿಯಾಗಲಿಲ್ಲವೇ? ಅವರು ನಿಮ್ಮ ಕಾಂಗ್ರೆಸ್ಸಿನವರೇ ಅಲ್ಲವೇ? ರಾಜ್ಯದ ದೇವೇಗೌಡರು, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿ, ರಾಮನಾಥ ಕೋವಿಂದ್, ವೆಂಕಯ್ಯ ನಾಯ್ಡು ವಂಶರಾಜಕಾರಣದ ಹಿನ್ನೆಲೆಯಿರದಿದ್ದರೂ ದೇಶದ ರಾಜಕೀಯದಲ್ಲಿ ಛಾಪು ಮೂಡಿಸಿಲ್ಲವೇ? ಇದೇಕೆ ರಾಹುಲ್ ಗಾಂಧಿಗೆ ಹೇಳಬೇಕು ಎನಿಸಲಿಲ್ಲ?

ಆದರೂ, ನಿಮ್ಮಂಥ ವಂಶರಾಜಕಾರಣದ ಕುಡಿಗಳಿಂದ ಬೇಸತ್ತೇ ಅಲ್ಲವೇ, ನಿಮ್ಮನ್ನು ತಿರಸ್ಕರಿಸಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿಸಿದ್ದು. ಇನ್ನಾದರೂ ದೇಶದ ಬಗ್ಗೆ ಗೌರವ ಇಟ್ಟುಕೊಂಡು ಮಾತನಾಡಿ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
ಶ್ರೀಶೈಲ್ ಮಳ್ಳಿ, ಶಹಾಪುರ September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
ಶ್ರೀಶೈಲ್ ಮಳ್ಳಿ, ಶಹಾಪುರ September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search