• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ: ಇಂಥಾ ಮಸೂದೆ ದೇಶಾದ್ಯಂತ ಜಾರಿಯಾಗಲಿ

TNN Correspondent Posted On September 15, 2017


  • Share On Facebook
  • Tweet It

-ನಿರಂಜನ್ ದೇಶಪಾಂಡೆ, ಮಂಗಳೂರು

ಇತ್ತೀಚೆಗೆ ಜಾರ್ಖಂಡ್ ಸಹ ಕೇರಳದಂತೆ ಮಾರ್ಪಾಡು ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲಲ್ಲಿ ಮತಾಂತರದ ಕುರುಹುಗಳು, ಕ್ರೈಸ್ತ ಪಾದ್ರಿಗಳ ಉಪಟಳದ ಬಗ್ಗೆ ಸುದ್ದಿಯಾಗಿತ್ತಿತ್ತು.
ಜಾರ್ಖಂಡ್‌ನಂಥ ರಾಜ್ಯದಲ್ಲಿ ಇಂಥ ಮಸೂದೆ ಬೇಕಿತ್ತು…

ಮುಖ್ಯಮಂತ್ರಿ ರಘುಬರ್ ದಾಸ್

ಆದರೆ ಈಗ, ಬಹುವರ್ಷಗಳಿಂದ ಜಾರಿಗೆ ತರಬೇಕು ಎಂಬ ಕನಸು ನನಸಾಗಿದೆ. ಕಳೆದ ವಾರ ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ ಅರ್ಥಾತ್ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್(2017)’ಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಆ ಮೂಲಕ ಮತಾಂತರದಂಥ ಕೃತ್ಯಗಳಲ್ಲಿ ತೊಡಗುವವರಿಗೆ ಶಿಕ್ಷೆ ವಿಧಿಸಲು ಈ ಅಸ್ತ್ರ ಬಳಸಲು ಸರಕಾರ ಸಿದ್ಧವಾಗಿದೆ ಎಂಬುದನ್ನು ಮುಖ್ಯಮಂತ್ರಿ ರಘುಬರ್ ದಾಸ್ ಪರೋಕ್ಷವಾಗಿ ಘೋಷಿಸಿದ್ದಾರೆ.

ಇದು ಬುಡಕಟ್ಟು, ದಲಿತ ಸಮುದಾಯದವರನ್ನು ಹಣಕಾಸು, ಶಿಕ್ಷಣ ಸೇರಿ ಹಲವು ಸೌಲಭ್ಯಗಳ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ಕ್ರೈಸ್ತರಿಗೆ ನುಂಗಲಾರದ ತುತ್ತಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.4.3ರಷ್ಟಿರುವ ಕ್ರೈಸ್ತ ಧರ್ಮಿಯರು ಉಗುಳು ನುಂಗುವಂತಾಗಿದೆ.

ಇದೇ ಕಾರಣಕ್ಕೆೆ, ಕ್ಯಾಾಥೋಲಿಕ್ ಪಂಥದ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಸೂದೆ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದಾಗ್ಯೂ, ಹಲವು ಕುತ್ಸಿತ ಮನಸ್ಸುಗಳು ಮಸೂದೆ ಅಂಗೀಕಾರದ ವಿರುದ್ಧ ಶನಿವಾರ ಪ್ರತಿಭಟನೆ ಮುಂದಾಗಿವೆ.

ಏಕೆ?
ಹೇಳಿ, ಮತಾಂತರ ವಿರೋಧಿ ಕಾಯಿದೆ ಜಾರಿಗೊಳಿಸಿದರೆ ಇವರಿಗೇಕೆ ಉರಿಯಬೇಕು? ಇವರೇಕೆ ಪ್ರತಿಭಟನೆ ಮಾಡಬೇಕು? ಅಷ್ಟಕ್ಕೂ ಮತಾಂತರ ಮಾಡುವುದೇ ಈ ಕ್ರಿಿಸ್ತರ ಕಾಯಕವಾ? ಮಸೂದೆ ಅಂಗೀಕಾರ ತಪ್ಪೇ?
ಒಡಿಶಾದಲ್ಲಿ 1967ರಲ್ಲೇ ಈ ಕಾಯಿದೆ ಜಾರಿಗೆ ತರಲಾಗಿದೆ. ಅಷ್ಟೇ ಏಕೆ, ಮಧ್ಯಪ್ರದೇಶದಲ್ಲಿ 1968, ಗುಜರಾತ್‌ನಲ್ಲಿ 2003, ಛತ್ತೀಸ್‌ಗಡದಲ್ಲಿ 2006ರಲ್ಲಿ ಇಂಥ ಮಸೂದೆ ಜಾರಿಗೆ ತರಲಾಗಿದೆ. ಮಸೂದೆ ವಿರೋಧಿಸುತ್ತಿರುವ ಕಾಂಗ್ರೆಸ್ಸೇ 2006ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದೆ.

ಹೀಗಿರುವಾಗ, ಜಾಖರ್ಂಡ್‌ನಲ್ಲಿ ಬಿಜೆಪಿ ಸರಕಾರ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್ ಜಾರಿಗೊಳಿಸಿದೆ. ಅದರಲ್ಲಿ ತಪ್ಪೇನು? ಇದರಿಂದ ಅಂತೂ ಯಾರಿಗೂ ಅನ್ಯಾಯವಾಗುವುದಿಲ್ಲ. ಬದಲಾಗಿ ಕ್ರೈಸ್ತರ ಉಪಟಳ ಕಡಿಮೆಯಾಗುತ್ತದೆ. ಜೀಸಸ್ ಹೆಸರಲ್ಲಿ ಮತಾಂತರಗೊಳಿಸುವುದು ನಿಲ್ಲುತ್ತದೆ. ಇಲ್ಲವಾದರೆ ಪ್ರತಿಯೊಂದು ರಾಜ್ಯವೂ ಕೇರಳವಾಗುತ್ತದೆ. ಹಾಗಾಗಿ ಇಂಥ ಮಸೂದೆ ದೇಶಾದ್ಯಂತ ಜಾರಿಯಾಗಲಿ.

  • Share On Facebook
  • Tweet It


- Advertisement -


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Tulunadu News March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search