• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ: ಇಂಥಾ ಮಸೂದೆ ದೇಶಾದ್ಯಂತ ಜಾರಿಯಾಗಲಿ

TNN Correspondent Posted On September 15, 2017
0


0
Shares
  • Share On Facebook
  • Tweet It

-ನಿರಂಜನ್ ದೇಶಪಾಂಡೆ, ಮಂಗಳೂರು

ಇತ್ತೀಚೆಗೆ ಜಾರ್ಖಂಡ್ ಸಹ ಕೇರಳದಂತೆ ಮಾರ್ಪಾಡು ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲಲ್ಲಿ ಮತಾಂತರದ ಕುರುಹುಗಳು, ಕ್ರೈಸ್ತ ಪಾದ್ರಿಗಳ ಉಪಟಳದ ಬಗ್ಗೆ ಸುದ್ದಿಯಾಗಿತ್ತಿತ್ತು.
ಜಾರ್ಖಂಡ್‌ನಂಥ ರಾಜ್ಯದಲ್ಲಿ ಇಂಥ ಮಸೂದೆ ಬೇಕಿತ್ತು…

ಮುಖ್ಯಮಂತ್ರಿ ರಘುಬರ್ ದಾಸ್

ಆದರೆ ಈಗ, ಬಹುವರ್ಷಗಳಿಂದ ಜಾರಿಗೆ ತರಬೇಕು ಎಂಬ ಕನಸು ನನಸಾಗಿದೆ. ಕಳೆದ ವಾರ ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ ಅರ್ಥಾತ್ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್(2017)’ಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಆ ಮೂಲಕ ಮತಾಂತರದಂಥ ಕೃತ್ಯಗಳಲ್ಲಿ ತೊಡಗುವವರಿಗೆ ಶಿಕ್ಷೆ ವಿಧಿಸಲು ಈ ಅಸ್ತ್ರ ಬಳಸಲು ಸರಕಾರ ಸಿದ್ಧವಾಗಿದೆ ಎಂಬುದನ್ನು ಮುಖ್ಯಮಂತ್ರಿ ರಘುಬರ್ ದಾಸ್ ಪರೋಕ್ಷವಾಗಿ ಘೋಷಿಸಿದ್ದಾರೆ.

ಇದು ಬುಡಕಟ್ಟು, ದಲಿತ ಸಮುದಾಯದವರನ್ನು ಹಣಕಾಸು, ಶಿಕ್ಷಣ ಸೇರಿ ಹಲವು ಸೌಲಭ್ಯಗಳ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ಕ್ರೈಸ್ತರಿಗೆ ನುಂಗಲಾರದ ತುತ್ತಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.4.3ರಷ್ಟಿರುವ ಕ್ರೈಸ್ತ ಧರ್ಮಿಯರು ಉಗುಳು ನುಂಗುವಂತಾಗಿದೆ.

ಇದೇ ಕಾರಣಕ್ಕೆೆ, ಕ್ಯಾಾಥೋಲಿಕ್ ಪಂಥದ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಸೂದೆ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದಾಗ್ಯೂ, ಹಲವು ಕುತ್ಸಿತ ಮನಸ್ಸುಗಳು ಮಸೂದೆ ಅಂಗೀಕಾರದ ವಿರುದ್ಧ ಶನಿವಾರ ಪ್ರತಿಭಟನೆ ಮುಂದಾಗಿವೆ.

ಏಕೆ?
ಹೇಳಿ, ಮತಾಂತರ ವಿರೋಧಿ ಕಾಯಿದೆ ಜಾರಿಗೊಳಿಸಿದರೆ ಇವರಿಗೇಕೆ ಉರಿಯಬೇಕು? ಇವರೇಕೆ ಪ್ರತಿಭಟನೆ ಮಾಡಬೇಕು? ಅಷ್ಟಕ್ಕೂ ಮತಾಂತರ ಮಾಡುವುದೇ ಈ ಕ್ರಿಿಸ್ತರ ಕಾಯಕವಾ? ಮಸೂದೆ ಅಂಗೀಕಾರ ತಪ್ಪೇ?
ಒಡಿಶಾದಲ್ಲಿ 1967ರಲ್ಲೇ ಈ ಕಾಯಿದೆ ಜಾರಿಗೆ ತರಲಾಗಿದೆ. ಅಷ್ಟೇ ಏಕೆ, ಮಧ್ಯಪ್ರದೇಶದಲ್ಲಿ 1968, ಗುಜರಾತ್‌ನಲ್ಲಿ 2003, ಛತ್ತೀಸ್‌ಗಡದಲ್ಲಿ 2006ರಲ್ಲಿ ಇಂಥ ಮಸೂದೆ ಜಾರಿಗೆ ತರಲಾಗಿದೆ. ಮಸೂದೆ ವಿರೋಧಿಸುತ್ತಿರುವ ಕಾಂಗ್ರೆಸ್ಸೇ 2006ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದೆ.

ಹೀಗಿರುವಾಗ, ಜಾಖರ್ಂಡ್‌ನಲ್ಲಿ ಬಿಜೆಪಿ ಸರಕಾರ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್ ಜಾರಿಗೊಳಿಸಿದೆ. ಅದರಲ್ಲಿ ತಪ್ಪೇನು? ಇದರಿಂದ ಅಂತೂ ಯಾರಿಗೂ ಅನ್ಯಾಯವಾಗುವುದಿಲ್ಲ. ಬದಲಾಗಿ ಕ್ರೈಸ್ತರ ಉಪಟಳ ಕಡಿಮೆಯಾಗುತ್ತದೆ. ಜೀಸಸ್ ಹೆಸರಲ್ಲಿ ಮತಾಂತರಗೊಳಿಸುವುದು ನಿಲ್ಲುತ್ತದೆ. ಇಲ್ಲವಾದರೆ ಪ್ರತಿಯೊಂದು ರಾಜ್ಯವೂ ಕೇರಳವಾಗುತ್ತದೆ. ಹಾಗಾಗಿ ಇಂಥ ಮಸೂದೆ ದೇಶಾದ್ಯಂತ ಜಾರಿಯಾಗಲಿ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search