• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ: ಇಂಥಾ ಮಸೂದೆ ದೇಶಾದ್ಯಂತ ಜಾರಿಯಾಗಲಿ

TNN Correspondent Posted On September 15, 2017
0


0
Shares
  • Share On Facebook
  • Tweet It

-ನಿರಂಜನ್ ದೇಶಪಾಂಡೆ, ಮಂಗಳೂರು

ಇತ್ತೀಚೆಗೆ ಜಾರ್ಖಂಡ್ ಸಹ ಕೇರಳದಂತೆ ಮಾರ್ಪಾಡು ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲಲ್ಲಿ ಮತಾಂತರದ ಕುರುಹುಗಳು, ಕ್ರೈಸ್ತ ಪಾದ್ರಿಗಳ ಉಪಟಳದ ಬಗ್ಗೆ ಸುದ್ದಿಯಾಗಿತ್ತಿತ್ತು.
ಜಾರ್ಖಂಡ್‌ನಂಥ ರಾಜ್ಯದಲ್ಲಿ ಇಂಥ ಮಸೂದೆ ಬೇಕಿತ್ತು…

ಮುಖ್ಯಮಂತ್ರಿ ರಘುಬರ್ ದಾಸ್

ಆದರೆ ಈಗ, ಬಹುವರ್ಷಗಳಿಂದ ಜಾರಿಗೆ ತರಬೇಕು ಎಂಬ ಕನಸು ನನಸಾಗಿದೆ. ಕಳೆದ ವಾರ ಜಾರ್ಖಂಡ್‌ನಲ್ಲಿ ಮತಾಂತರ ವಿರೋಧಿ ಮಸೂದೆ ಅರ್ಥಾತ್ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್(2017)’ಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಆ ಮೂಲಕ ಮತಾಂತರದಂಥ ಕೃತ್ಯಗಳಲ್ಲಿ ತೊಡಗುವವರಿಗೆ ಶಿಕ್ಷೆ ವಿಧಿಸಲು ಈ ಅಸ್ತ್ರ ಬಳಸಲು ಸರಕಾರ ಸಿದ್ಧವಾಗಿದೆ ಎಂಬುದನ್ನು ಮುಖ್ಯಮಂತ್ರಿ ರಘುಬರ್ ದಾಸ್ ಪರೋಕ್ಷವಾಗಿ ಘೋಷಿಸಿದ್ದಾರೆ.

ಇದು ಬುಡಕಟ್ಟು, ದಲಿತ ಸಮುದಾಯದವರನ್ನು ಹಣಕಾಸು, ಶಿಕ್ಷಣ ಸೇರಿ ಹಲವು ಸೌಲಭ್ಯಗಳ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದ ಕ್ರೈಸ್ತರಿಗೆ ನುಂಗಲಾರದ ತುತ್ತಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.4.3ರಷ್ಟಿರುವ ಕ್ರೈಸ್ತ ಧರ್ಮಿಯರು ಉಗುಳು ನುಂಗುವಂತಾಗಿದೆ.

ಇದೇ ಕಾರಣಕ್ಕೆೆ, ಕ್ಯಾಾಥೋಲಿಕ್ ಪಂಥದ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಸೂದೆ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಆದಾಗ್ಯೂ, ಹಲವು ಕುತ್ಸಿತ ಮನಸ್ಸುಗಳು ಮಸೂದೆ ಅಂಗೀಕಾರದ ವಿರುದ್ಧ ಶನಿವಾರ ಪ್ರತಿಭಟನೆ ಮುಂದಾಗಿವೆ.

ಏಕೆ?
ಹೇಳಿ, ಮತಾಂತರ ವಿರೋಧಿ ಕಾಯಿದೆ ಜಾರಿಗೊಳಿಸಿದರೆ ಇವರಿಗೇಕೆ ಉರಿಯಬೇಕು? ಇವರೇಕೆ ಪ್ರತಿಭಟನೆ ಮಾಡಬೇಕು? ಅಷ್ಟಕ್ಕೂ ಮತಾಂತರ ಮಾಡುವುದೇ ಈ ಕ್ರಿಿಸ್ತರ ಕಾಯಕವಾ? ಮಸೂದೆ ಅಂಗೀಕಾರ ತಪ್ಪೇ?
ಒಡಿಶಾದಲ್ಲಿ 1967ರಲ್ಲೇ ಈ ಕಾಯಿದೆ ಜಾರಿಗೆ ತರಲಾಗಿದೆ. ಅಷ್ಟೇ ಏಕೆ, ಮಧ್ಯಪ್ರದೇಶದಲ್ಲಿ 1968, ಗುಜರಾತ್‌ನಲ್ಲಿ 2003, ಛತ್ತೀಸ್‌ಗಡದಲ್ಲಿ 2006ರಲ್ಲಿ ಇಂಥ ಮಸೂದೆ ಜಾರಿಗೆ ತರಲಾಗಿದೆ. ಮಸೂದೆ ವಿರೋಧಿಸುತ್ತಿರುವ ಕಾಂಗ್ರೆಸ್ಸೇ 2006ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದೆ.

ಹೀಗಿರುವಾಗ, ಜಾಖರ್ಂಡ್‌ನಲ್ಲಿ ಬಿಜೆಪಿ ಸರಕಾರ ‘ಫ್ರೀಡಂ ಆಫ್ ರಿಲಿಜಿಯನ್ ಬಿಲ್ ಜಾರಿಗೊಳಿಸಿದೆ. ಅದರಲ್ಲಿ ತಪ್ಪೇನು? ಇದರಿಂದ ಅಂತೂ ಯಾರಿಗೂ ಅನ್ಯಾಯವಾಗುವುದಿಲ್ಲ. ಬದಲಾಗಿ ಕ್ರೈಸ್ತರ ಉಪಟಳ ಕಡಿಮೆಯಾಗುತ್ತದೆ. ಜೀಸಸ್ ಹೆಸರಲ್ಲಿ ಮತಾಂತರಗೊಳಿಸುವುದು ನಿಲ್ಲುತ್ತದೆ. ಇಲ್ಲವಾದರೆ ಪ್ರತಿಯೊಂದು ರಾಜ್ಯವೂ ಕೇರಳವಾಗುತ್ತದೆ. ಹಾಗಾಗಿ ಇಂಥ ಮಸೂದೆ ದೇಶಾದ್ಯಂತ ಜಾರಿಯಾಗಲಿ.

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search