• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಗೌರಿ ಹತ್ಯೆ ಹಿಂದೆ ಆರೆಸ್ಸೆಸ್, ಈ ಪತ್ರಕರ್ತನ ಹತ್ಯೆ ಹಿಂದೆ ಯಾರು ಸ್ವಾಮಿ..?

TNN Correspondent Posted On September 21, 2017
0


0
Shares
  • Share On Facebook
  • Tweet It

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

ರಾಹುಲ್ ಗಾಂಧಿಯಿಂದ ಹಿಡಿದು ಕಾಂಗ್ರೆಸ್ಸಿನ ಕಾರ್ಯಕರ್ತರು, ಸಿಪಿಎಂನ ಸೀತಾರಾಮ್ ಯೆಚೂರಿ, ಎಡಬಿಡಂಗಿಗಳು, ಫೇಸ್ ಬುಕ್ಕಿನ ಪುಡಿ ಬರಹಗಾರರು… ಒಬ್ಬರೇ ಇಬ್ಬರೇ, ಎಲ್ಲರೂ ಬಿಜೆಪಿ, ಆರೆಸ್ಸೆಸ್ಸನ್ನೇ ಗುರಿಯಾಗಿಸಿದರು. ರಾಹುಲ್ ಗಾಂಧಿ ಅಂತೂ ಬಿಜೆಪಿ, ಆರೆಸ್ಸೆಸ್ಸನ್ನು ವಿರೋಧಿಸಿದರೆ ಕೊಲೆಯೇ ಗತಿ ಎಂದರು.

ಅಷ್ಟೇ ಅಲ್ಲ, ಇನ್ನೂ ತನಿಖೆಯೇ ಶುರುವಾಗಿರಲಿಲ್ಲ, ಆರೋಪಿಗಳ ಸುಳಿವು ಸಹ ಸಿಕ್ಕಿರಲಿಲ್ಲ, ಅದಾಗಲೇ ಇದು ಸೈದ್ಧಾಂತಿಕ ಕೊಲೆ ಎಂದರು. ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗುತ್ತಿದ್ದರೂ ಮಗುಮ್ಮಾಗಿದ್ದ ಪ್ರಕಾಶ್ ರೈ, ಗೌರಿ ಹತ್ಯೆ ಬಳಿಕ ಏನಾಗ್ತಿದೆ ಕರ್ನಾಟಕದಲ್ಲಿ ಎಂದು ಬುದ್ಧಿಜೀವಿ ಥರ ವರ್ತಿಸಿದರು…

ಆದರೆ ತ್ರಿಪುರ ರಾಜ್ಯದ ರಾಜಧಾನಿ ಅಗರ್ತಲದಲ್ಲಿ ನಡೆದ ಗನಮುಕ್ತಿ ಪರಿಷದ್ ರ್ಯಾಲಿ ವರದಿ ಮಾಡುತ್ತಿದ್ದ “ದಿನ್ ರಾತ್” ಚಾನೆಲ್ಲಿನ ಸಂತನು ಭೌಮಿಕ್ ಎಂಬ ಪತ್ರಕರ್ತರೊಬ್ಬರ ಹತ್ಯೆಯಾಗಿದೆ. ಆದರೆ, ಯಾರೆಂದರೆ ಯಾರೂ ಸೊಲ್ಲೆತ್ತುತ್ತಿಲ್ಲ. ಇದು ಯಾರ ಕೃತ್ಯ ಎಂದು ಯಾರೂ ಷರಾ ಬರೆಯುತ್ತಿಲ್ಲ. ತೀರ್ಪು ನೀಡುತ್ತಿಲ್ಲ…

ಏಕೆ?

ತ್ರಿಪುರದಲ್ಲಿ ಕಮ್ಯುನಿಸ್ಟ್ ಸರಕಾರ ಇದೆ ಅಂತಲೇ? ಇಲ್ಲ, ಆ ಪತ್ರಕರ್ತ ಹಿಂದೂ ಸಂಘಟನೆಯ ರ್ಯಾಲಿ ವರದಿ ಮಾಡುತ್ತಿದ್ದ ಅಂತಲೇ? ಅಥವಾ ಆತ ಆರೆಸ್ಸೆಸ್ ಹಾಗೂ ಬಿಜೆಪಿ ವಿರೋಧಿ ಆಗಿರಲಿಲ್ಲ ಅಂತಲೇ? ಆತ ಎಡಪಂಥೀಯನಾಗಿರಲಿಲ್ಲ, ಮೋದಿ ವಿರೋಧಿಯಾಗಿರಲಿಲ್ಲ ಎಂದೇ?

ಹೌದು, ಬುಧವಾರವೇ ಪತ್ರಕರ್ತನ ಹತ್ಯೆಯಾಗಿದೆ. ಎಲ್ಲೂ ಸುದ್ದಿಯಾಗುತ್ತಿಲ್ಲ ಎಂದರೆ ಇದೆಂಥ ಇಬ್ಬಂದಿತನ. ಗೌರಿ ಲಂಕೇಶ್ ಎಂಬ ಎಡಪಂಥೀಯ ಪತ್ರಕರ್ತೆ ಹತ್ಯೆಯಾದರೆ ಮಾತ್ರ ಆಕೆಯದ್ದು ಜೀವ, ಸೈದ್ಧಾಂತಿಕ ಕೊಲೆ. ಅದೇ ಹಿಂದೂ ಸಂಘಟನೆಯ ರ್ಯಾಲಿ ವರದಿ ಮಾಡುತ್ತಿದ್ದ ಪತ್ರಕರ್ತನ ಹತ್ಯೆಯಾದರೆ ಅದೊಂದು ಮಾಮೂಲಿ ವ್ಯಕ್ತಿಯ ಕೊಲೆ. ಪ್ರತಿರೋಧ ಸಮಾವೇಶ ಮಾಡಿದ ಗಂಜಿ ಗಿರಾಕಿಗಳು ಸಹ ಸುಮ್ಮನಾಗಿವೆಯೆಂದರೆ ಗೌರಿಗೆ ಇವರೆಂಥ ಹಾಗೂ ಎಷ್ಟರಮಟ್ಟಿಗಿನ ಬೆಂಬಲ ನೀಡುತ್ತಾರೆ ಎಂದು ತಿಳಿದುಬರುತ್ತದೆ.

ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ…

  • ಪ್ರಸಾದ್ ಹೆಗಡೆ, ಕಾರ್ಕಳ

 

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • 2
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 3
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 4
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ

  • Privacy Policy
  • Contact
© Tulunadu Infomedia.

Press enter/return to begin your search