• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೈದ್ಯರ ಪ್ರಮಾದಕ್ಕೆ ಮೆದುಳು ರೋಗದಿಂದ ಬಳಲುತ್ತಿರುವ ದಿವ್ಯಾಳಿಗೆ ನೆರವು ಬೇಕಿದೆ!

Satish Acharya Posted On September 21, 2017


  • Share On Facebook
  • Tweet It

ಭಗವಂತ ನೀನು ಹೀಗೆಕೆ ಮಾಡಿದೆ ಎಂದು ಒಂದು ಕುಟುಂಬ ಕೇಳುತ್ತದೆ. ಯಾಕೆಂದರೆ ಹಾಡುತ್ತಾ ಕುಣಿಯುತ್ತಾ ಬಾಲ್ಯ ಕಳೆಯ ಬೇಕಿದ್ದ ಬಾಲಕಿಯ ಮೆದುಳು ,ಕೈ ಕಾಲು ಸ್ವಾಧೀನ ಕಿತ್ತುಕೊಂಡು ಹಾಸಿಗೆ ಹಿಡಿಯುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ನೋಡಿದರೆ ಎಂತಹವರ ಕರುಳು ಚುರುಕ್ ಎನ್ನದಿರದು.

ಎಲ್ಲಾ ಮಕ್ಕಳಂತೆ ಆಟವಾಡುತ್ತಾ , ನಲಿಯುತ್ತಾ ಶಾಲೆಯಲ್ಲಿ ಇರ ಬೇಕಾದ ದಿವ್ಯಾ (15)ಇಂದು ದೇಹ ಸ್ವಾಧೀನ ಕಳೆದುಕೊಂಡು ಬಡ ತಂದೆ ತಾಯಿಯ ಆಶ್ರಯದಲ್ಲಿ ದಿನ ಕಳೆಯ ಬೇಕಾಗಿದೆ.ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ದಂಪತಿಗಳ ಪ್ರಥಮ ಪುತ್ರಿ ದಿವ್ಯಾ ಹುಟ್ಟು ಸಂದರ್ಭ ಆಸ್ಪತ್ರೆಯಲ್ಲಿ ಆದ ಪ್ರಮಾದಕ್ಕೆ ದಿವ್ಯಾಳ ತಂದೆ ತಾಯಿ ಮಾತ್ರವಲ್ಲ, ಸ್ವತಃ ಅಂಗವೈಕಲ್ಯಕ್ಕೆ ಒಳಗಾಗಿ ಹೂವಿನಂತಹ ಬಾಳನ್ನು ದಿವ್ಯಾ ಕಳೆದುಕೊಂಡಿದ್ದಾಳೆ.

ಒಂದೆಡೆ ನರದ ಸಮಸ್ಯೆಯಿಂದ ಮೆದುಳು ಸ್ವಾಧೀನ ಕಳೆದುಕೊಂಡಿದ್ದರೆ ,ಇನ್ನೊಂದೆಡೆ ಕೈಕಾಲು ಸ್ವಾಧೀನವಿಲ್ಲದೆ ಇನ್ನೊಬ್ಬರ ನೆರವಿಲ್ಲದೆ ಓಡಾಡಲೂ ಆಗದ ಸ್ಥಿತಿಯಲ್ಲಿದ್ದಾಳೆ. ಮುಖದಲ್ಲಿ ಸದಾ ನಿಷ್ಕಲ್ಮಶ ನಗು. ತಂದೆ ತಾಯಿ , ಅಕ್ಕ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಮಾತು ಬಾರದು. ಕೇವಲ ನಗುವಿನಲ್ಲಿಯೇ ಸಂತಸ ವ್ಯಕ್ತ ಪಡಿಸುತ್ತಾಳೆ.

ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ಆಸ್ಪತ್ರೆಗೆ ನಿತ್ಯ ಹೋಗುವುದು ತಪ್ಪದು. ಒಂದು ಸಲ ಆಸ್ಪತ್ರೆಯ ಖರ್ಚು ಇಪ್ಪತ್ತು ಮೂವತ್ತು ಸಾವಿರ ರೂಪಾಯಿಗಳು. ಹರೀಶ್ ಅವರು ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದು ಇಬ್ಬರು ಪುತ್ರಿಯರನ್ನು ಸಲಹುವ ಜವಾಬ್ದಾರಿಯಿದೆ. ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ. ಈಗಾಗಲೇ ಲಕ್ಷಾಂತರ ಕೈ ಸಾಲ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳ , ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಸಹಾಯ ಮಾಡಲಿಚ್ಚಿಸುವವರು ದಿವ್ಯ ಎಂ.ಜಿ.ತುಳಸಿ ,Kulur Branch ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101000001755 ಗೆ ನೀಡ ಬಹುದು. IFSC CODE: CORP0003140

  • Share On Facebook
  • Tweet It


- Advertisement -
Helping hand to Divya


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Satish Acharya February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Satish Acharya January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search