• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಕಿಸ್ತಾಕ್ಕೆ ಮತ್ತೊಂದು ನಿರ್ದಿಷ್ಟ ದಾಳಿಯ ಎಚ್ಚರಿಕೆ ನೀಡಿದ ರಾವತ್

TNN Correspondent Posted On September 26, 2017


  • Share On Facebook
  • Tweet It

ದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾನುವಾರ ಉರಿ ಮಾದರಿಯ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಚಾಟಿಯೇಟು ನೀಡಿದ್ದು, “ಮತ್ತೊಂದು ನಿರ್ದಿಷ್ಟ ದಾಳಿ”ಯ ಎಚ್ಚರಿಕೆ ನೀಡಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಪಾಕಿಸ್ತಾನದ ವಿರುದ್ಧ ಮಾಡಿದ್ದ ನಿರ್ದಿಷ್ಟ ದಾಳಿ ಆ ರಾಷ್ಟ್ರಕ್ಕೆ ದಿಟ್ಟ ಸಂದೇಶವಿದ್ದಂತೆ. ಆದರೆ ಪಾಕಿಸ್ತಾನ ಪಾಠ ಕಲಿಯದಿದ್ದರೆ ಮುಂದೆ ಯಾವ ನಿರ್ಧಾರ ಕೈಗೊಳ್ಳಲು ಸಹ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ 778 ಕಿ.ಮೀ. ಗಡಿಯನ್ನು ನಾವು ಕಾಯುತ್ತೇವೆ. ಒಂದು ವೇಳೆ ಯಾರೇ, ಯಾವಾಗ ಬೇಕಾದರು ನುಗ್ಗಲು ಯತ್ನಿಸಿದರೆ, ಅವರ ವಿರುದ್ಧ ಹೋರಾಡು ಸೇನೆ ಶಕ್ತವಾಗಿದೆ ಎಂದಿದ್ದಾರೆ.

ನಿರ್ದಿಷ್ಟ ದಾಳಿ ಪಾಕಿಸ್ತಾನಕ್ಕೆ ಉಗ್ರವಾದದ ವಿರುದ್ಧದ ಸಂದೇಶವಾಗಿದ್ದು, ಪಾಕಿಸ್ತಾನ ನಮ್ಮ ದಾಳಿಯ ಹಿಂದಿನ ಸಂದೇಶ ಅರಿತಿದೆ ಎಂದು ಭಾವಿಸಿದ್ದೇವೆ. ಆದರೆ ಹಾಗೊಂದು ವೇಳೆ ಪಾಕಿಸ್ತಾನ ಪಾಠ ಕಲಿಯದಿದ್ದರೆ, ನಾವು ಮತ್ತೊಂದು ಪಾಠಕ್ಕೆ ಸಜ್ಜಾಗುತ್ತೇವೆ ಎಂದು ಮತ್ತೊಂದು ನಿರ್ದಿಷ್ಟ ದಾಳಿಯ ಎಚ್ಚರಿಕೆ ನೀಡಿದ್ದಾರೆ.

ನಾವು ಉಗ್ರರ ಯಾವುದೇ ಚಟುವಟಿಕೆಯನ್ನು, ದಾಳಿಯನ್ನು ಎದುರಿಸಲು ಸಜ್ಜಾಗಿದ್ದೇವೆ. ಒಳನುಸುಳುವ ಉಗ್ರರನ್ನು ಗುಂಡಿ ತೋಡಿ ಹೂತು ಹಾಕದೇ ಬಿಡುವುದಿಲ್ಲ ಎಂದಿದ್ದಾರೆ.

2016ರ ಸೆ.29ರಂದು ಭಾರತ ಪಾಕಿಸ್ತಾನದ ಮೇಲೆ ನಿರ್ದಿಷ್ಟ ದಾಳಿ ಮಾಡಿ 19 ಪಾಕಿಸ್ತಾನಿಯರನ್ನು ಹೊಡೆದುರುಳಿಸಿತ್ತು.

  • Share On Facebook
  • Tweet It


- Advertisement -


Trending Now
ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
Tulunadu News June 9, 2023
ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
Tulunadu News June 9, 2023
Leave A Reply

  • Recent Posts

    • ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
  • Popular Posts

    • 1
      ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • 2
      ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • 3
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 4
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 5
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search