• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಪಾಕಿಸ್ತಾನ ಬೆಂಬಲಿಸುವ ಭರದಲ್ಲಿ ಢಾಳಾದ ಚೀನಾ

TNN Correspondent Posted On September 26, 2017
0


0
Shares
  • Share On Facebook
  • Tweet It

ಬೀಜಿಂಗ್: ಪಾಕಿಸ್ತಾನಕ್ಕೆ ಯಾರೇ ಟಾಂಗ್ ನೀಡಿದರೂ ಚೀನಾ ಕರಳು ಚುರುಕ್ ಎನ್ನುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಟಾಂಗ್ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ಸುಷ್ಮಾ ಹೇಳಿಕೆ ಸೊಕ್ಕಿನಿಂದ ಕೂಡಿದೆ ಎಂದಿದೆ.

ಇನ್ನು ಭಯೋತ್ಪಾದನೆ ವಿರುದ್ಧ ಚೀನಾ ಹೋರಾಡುತ್ತದೆ ಹಾಗೂ ತಾವು ಪಾಕಿಸ್ತಾನದ ಪರ ಇಲ್ಲ ಎಂಬುದನ್ನು ತೋರಿಸಲು ಹೊರಟ ಚೀನಾ ಮಾಧ್ಯಮಗಳು ವಾಸ್ತವದಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎಂದು ವರದಿ ಮಾಡುವ ಮೂಲಕ ತನ್ನ ಮುಖವಾಡ ಕಳಚಿಕೊಂಡಿದೆ.

ಪಾಕಿಸ್ತಾನದ ಸಾರ್ವಕಾಲಿಕ ಮಿತ್ರನೇ ಆಗಿರುವ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ, “ಪಾಕಿಸ್ತಾನದಲ್ಲಿ ವಾಸ್ತವವಾಗಿ ಭಯೋತ್ಪಾದನೆ ಅಡಗಿದೆ ನಿಜ. ಆದರೆ ಪಾಕಿಸ್ತಾನ ಅದನ್ನೇ ರಾಷ್ಟ್ರೀಯ ನೀತಿಯನ್ನಾಗಿ ಪಾಲಿಸುತ್ತಿದೆಯೇ? ಭಯೋತ್ಪಾದನೆ ಉತ್ಪಾದಿಸಿದರೆ ಪಾಕಿಸ್ತಾನಕ್ಕೆ ಆಗುವ ಲಾಭವೇನು? ಎಂದು ಸಂಪಾದಕೀಯ ಪುಟದಲ್ಲಿ ಭಾರತವನ್ನು ಪ್ರಶ್ನಿಸಿದೆ.

ಪಾಕಿಸ್ತಾನ ಇತ್ತೀಚೆಗೆ ಮೆಲ್ಲಗೆ ಆರ್ಥಿಕ ಏಳಿಗೆ ಸಾಧಿಸುತ್ತಿದೆ. ವಿದೇಶಗಳ ಜತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿದೆ. ಹೀಗಿರುವಾಗ ಭಾರತ ಮಾತ್ರ ಪಾಕಿಸ್ತಾನದತ್ತ ಯಾವಾಗಲೂ ಬೆರಳು ತೋರಿಸುತ್ತದೆ ಎಂದು ದೂರಿದೆ.

ಆದರೆ ಚೀನಾವೇ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಎಂದು ಒಪ್ಪಿಕೊಂಡ ಮೇಲೆ, ಭಯೋತ್ಪಾದನೆಯಿಂದ ಪಾಕಿಸ್ತಾನ ಏನು ಗಳಿಸಿದೆ ಎಂಬುದು ಎಲ್ಲರಿಗೂ ಗೊತ್ತು. ಹೌದು, ಪಾಕಿಸ್ತಾನ ಭಾರತದೊಂದಿಗೆ ಸಂಬಂಧ ವೃದ್ಧಿಸುವ ಮಾತನಾಡುತ್ತದೆ ನಿಜ. ಆದರೆ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಛೂ ಬಿಟ್ಟು ದಾಳಿ ಮಾಡಿಸುತ್ತದಲ್ಲ? ಅದಕ್ಕೇನು ಮಾಡಬೇಕು? ಇದನ್ನು ಚೀನಾ ಪ್ರಶ್ನಿಸುತ್ತದೆಯೇ?

ಚೀನಾಗೆ ಪಾಕಿಸ್ತಾನ ಉತ್ತಮ ಮಾರುಕಟ್ಟೆ, ಕೈಬೊಂಬೆ ಎಂಬ ಕಾರಣಕ್ಕಾಗಿಯೇ ಚೀನಾ ಅದನ್ನು ಬೆಂಬಲಿಸುತ್ತದೆ. ಬೆಂಬಲಿಸಿದಾಗಲೆಲ್ಲ ಹೀಗೆ ಢಾಳಾಗುತ್ತದೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search