• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ದೇವಾಲಯ ತೆರವು, ಅದೇ ಮಸೀದಿಯಾಗಿದ್ದರೆ ಸಿದ್ದರಾಮಯ್ಯನವರು ಸುಮ್ಮನಿರುತ್ತಿದ್ದರೆ?

TNN Correspondent Posted On September 26, 2017
0


0
Shares
  • Share On Facebook
  • Tweet It

ಗೋವಾದ ಬೈನಾ ಬೀಚ್ ನಲ್ಲಿ ಮತ್ತೆ ಜೆಸಿಬಿ ಸದ್ದು ಕೇಳಿಸುತ್ತಿದೆ. ಕನ್ನಡಿಗರು ಅನಾಥರಾಗಿದ್ದಾರೆ. ಕನ್ನಡಿಗರು ಬಿಡಿ, ದೇವರಿರುವ ದೇವಾಲಯಗಳಿಗೇ ರಕ್ಷಣೆ ಇಲ್ಲದಂತಾಗಿದೆ.

ಇಷ್ಟಾದರೂ ಯಾರೊಬ್ಬರೂ ಬಾಯಿಬಿಡುತ್ತಿಲ್ಲ. ರಾಜ್ಯದ ಸಿದ್ದರಾಮಯ್ಯನವರೂ ಒಂದೂ ಮಾತನಾಡುತ್ತಿಲ್ಲ. ಕನ್ನಡಿಗರ, ಹಿಂದೂಗಳ, ದೇವಾಲಯಗಳ ರಕ್ಷಣೆ ಬಗ್ಗೆ ಗೋವಾ ಮುಖ್ಯಮಂತ್ರಿ ಜತೆ ಮಾತನಾಡುತ್ತಿಲ್ಲ.

ಏಕೆ…

ಏಕೆಂದರೆ ಅವರೆಲ್ಲರೂ ಹಿಂದೂಗಳು. ದೇವಾಲಯ ಹಿಂದೂಗಳವು, ದೇವರು ಹಿಂದೂ. ಅದೇ ಮಸೀದಿಯಾಗಿದ್ದರೆ, ಅಲ್ಲಿರುವರೆಲ್ಲರೂ ಮುಸ್ಲಿಮರು, ಅಲ್ಪಸಂಖ್ಯಾತರು ಆಗಿದ್ದರೆ ಇದೇ ಸಿದ್ದರಾಮಯ್ಯನವರು ಸುಮ್ಮನಾಗಿರುತ್ತಿದ್ದರೆ?

ಪರ ರಾಜ್ಯ ಬಿಡಿ ರಾಜ್ಯದಲ್ಲೇ, ಹಿಂದೂಗಳ, ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಆದರೂ ಸಿದ್ದರಾಮಯ್ಯನವರು ಯಾವುದೇ ಕ್ರಮ ಕೈಗೊಂಡಿಲ್ಲ.

ಆದರೆ ಇದೇ ಮುಖ್ಯಮಂತ್ರಿಯವರು ಹರಿಯಾಣದಲ್ಲಿ ಜುನೈದ್ ಖಾನ್ ಎಂಬ ಮುಸ್ಲಿಂ ಯುವಕನ ಹತ್ಯೆಯಾದರೆ ಕೇಂದ್ರ ಸರಕಾರದತ್ತ ಬೆರಳು ಮಾಡುತ್ತಾರೆ. ಮುಸ್ಲಿಮರ ಹತ್ಯೆಯಾದರೆ ಕರಳು ಚುರುಕ್ ಎನ್ನುತ್ತದೆ.

ಇದೇ ಇಬ್ಬಂದಿತನವೇ ಮುಖ್ಯಮಂತ್ರಿಯವರ ಬಂಡವಾಳವಾಗಿದೆ. ರಾಜ್ಯದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದರೂ ಅದಕ್ಕೆ ಸಿದ್ಧಾಂತವೇ ಕಾರಣ ಎಂದು ಷರಾ ಬರೆಯುತ್ತಾರೆ.

ರಾಜ್ಯದ ನೇತೃತ್ವ ವಹಿಸಿಕೊಂಡವರು, ಜಾತ್ಯತೀತ, ಧರ್ಮಾತೀತರಾಗಿ ನಡೆದುಕೊಳ್ಳಬೇಕು. ರಾಜ್ಯದ ಜನರ ರಕ್ಷಣೆ ಮಾಡಬೇಕು. ಆದರೆ ನಮ್ಮ ಮುಖ್ಯಮಂತ್ರಿ ಮಹೋದಯರು ಮಾತ್ರ, ಜಾತಿ, ಧರ್ಮದ ಆಧಾರದ ಮೇಲೆ ಯೋಜನೆ ಜಾರಿಗೊಳಿಸಲು ಮುಂದಾಗುತ್ತಾರೆ. ಇದಕ್ಕೆ ಶಾದಿ ಭಾಗ್ಯದಂತಹ ಯೋಜನೆಗಳೇ ಸಾಕ್ಷಿ.

ಗೋವಾದಲ್ಲಿ ಕನ್ನಡಗಿರ, ಹಿಂದೂ ದೇವಾಲಯಗಳ ಧ್ವಂಸಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಯವರೇ ನಿಮಗೆ ಅಂತಃಕರಣ ಎಂಬುದಿದ್ದರೆ ಮೊದಲು ಅವರನ್ನು ರಕ್ಷಿಸಿ.

 

-ನವೀನ್ ಪೆಲ್ಲತಡ್ಕ, ಪತ್ರಿಕೋದ್ಯಮ ವಿದ್ಯಾರ್ಥಿ

 

 

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!

  • Privacy Policy
  • Contact
© Tulunadu Infomedia.

Press enter/return to begin your search