• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮುಖಭಂಗ: ಭಾರತದ ಟೊಮ್ಯಾಟೋ ಬೇಡ ಎಂದ ಪಾಕಿ

TNN Correspondent Posted On September 27, 2017


  • Share On Facebook
  • Tweet It

ಈ ಪಾಕಿಸ್ತಾನವೇ ಹೀಗೆ, ನೇರಾ ನೇರ ಯುದ್ಧ ಮಾಡುವುದಿಲ್ಲ. ಹುರುಳಿರುವ ವಾದ ಮಾಡುವುದಿಲ್ಲ. ಬೆಟ್ಟಕ್ಕೆ ನಾಯಿ ಬೊಗಳಿ ಸತ್ತಿತು ಎಂಬ ಮಾತಿನಂತೆ ಭಾರತದ ವಿರುದ್ಧ ಆಗಾಗ ಗುಟುರು ಹಾಕುತ್ತದೆ. ಗುರ್ ಎನ್ನುತ್ತದೆ. ನಾವೇನು ಸುಮ್ಮನೆ ಇರುತ್ತೇವೆಯೇ? ಪಾಕಿಸ್ತಾನದ ತಲೆಗೊಂದು ಮೊಟಕುತ್ತೇವೆ. ಆಗ ಪಾಕಿಸ್ತಾನ ತೋಯ್ದ ಕೋಳಿಯಂತಾಗುತ್ತದೆ. ಅದಾದ ಬಳಿಕ ಮತ್ತೆ ಕೈಲಾಗದ ನರಿಯಂತೆ ಮೆಲ್ಲಗೆ ಹಿಂಬಾಗಿಲಿನಿಂದ ಏನು ಕುತಂತ್ರ ಮಾಡಬೇಕು ಎಂದು ಹೊಂಚು ಹಾಕುತ್ತದೆ.

ಈ ಅದೇ ಪಾಕಿಸ್ತಾನ ಎಂಬ ಕಳ್ಳಬೆಕ್ಕು ಮತ್ತೊಂದು ಹೊಂಚು ಹಾಕಿದೆ.

ಹೌದು, ವಿಶ್ವಸಂಸ್ಥೆಯಲ್ಲಿ ಭಾರತದಿಂದ ಭಾರಿ ಮುಖಭಂಕ್ಕೀಡಾಗಿರುವ ಪಾಕಿಸ್ತಾನ ಈಗ ಭಾರತದಿಂದ ಟೊಮ್ಯಾಟೊ ಆಮದು ಮಾಡಿಕೊಳ್ಳುವುದಿಲ್ಲ ಎಂಬ ಮೊಂಡು ವಾದ ಮುಂದಿಟ್ಟಿದೆ. ಈ ಕುರಿತು ಆಹಾರ ಸಚಿವ ಸಿಕಂದರ್ ಹಯಾತ್ ಬೋಸನ್ ತಿಳಿಸಿದ್ದಾರೆ.

ಆದರೆ ಇಂಥ ಮೊಂಡು ಹಾಗೂ ಅಹಂಕಾರದ ನಿರ್ಧಾರದಿಂದ ಪಾಕಿಸ್ತಾನಕ್ಕೇ ನಷ್ಟ. ಏಕೆಂದರೆ ಸದ್ಯ ಪಾಕಿಸ್ತಾನದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ, ಈರುಳ್ಳಿ ಬೆಲೆ 300 ರೂಪಾಯಿಗೆ ಏರಿಕೆಯಾಗಿತ್ತು. ಇದನ್ನು ಸರಿದೂಗಿಸಲು ಪಾಕಿಸ್ತಾನ ಭಾರತದಿಂದ ಟೊಮ್ಯಾಟೊ, ಈರುಳ್ಳಿ ಆಮದು ಮಾಡಿಕೊಂಡು, 150-160 ರೂಪಾಯಿಗೆ ಕೆ.ಜಿ.ಯಂತೆ ಮಾರಾಟ ಮಾಡುತ್ತಿತ್ತು.

ಆದರೆ ಈಗ ಯಾವುದೋ ಕಾರಣಕ್ಕೆ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಇದರಿಂದ ಪಾಕಿಸ್ತಾನಕ್ಕೇ ನಷ್ಟ ಎಂಬದನ್ನು ನೆರೆರಾಷ್ಟ್ರ ಮರೆತಂತಿದೆ. ಆದಾಗ್ಯೂ, ಈ ಆಮದು ಸ್ಥಗಿತದಿಂದ ಭಾರತಕ್ಕೇನು ನಷ್ಟವಿಲ್ಲದಿದ್ದರೂ, ದ್ವಿಪಕ್ಷೀಯ ಸಂಬಂಧ ಬಿಗಡಾಯಿಸುವ ಸಾಧ್ಯತೆಯಿದೆ.

 

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Tulunadu News February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Tulunadu News January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search