• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭೂಕಂಪ ಆಗುತ್ತೆ ಎಂದು ಪ್ರಧಾನಿಗೆ ಪತ್ರ ಬರೆದ ವಿಜ್ಞಾನಿ!

Naresh Shenoy Posted On September 27, 2017
0


0
Shares
  • Share On Facebook
  • Tweet It

ಡಿಸೆಂಬರ್ 31 ರ ಒಳಗೆ ಭಾರತದ ಕಡಲ ತೀರಗಳಲ್ಲಿ ಆತಂಕಕಾರಿ ವಿದ್ಯಮಾನವೊಂದು ಘಟಿಸಲಿದೆ ಎನ್ನುವ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಇದನ್ನು ಮಾಧ್ಯಮಗಳು ಹಬ್ಬಿಸುತ್ತಿರುವ ಗಾಳಿಸುದ್ದಿ ಎಂದು ಪಕ್ಕಕ್ಕೆ ಸರಿಸುತ್ತಿರೋ ಅಥವಾ ಗಂಭೀರವಾಗಿ ತೆಗೆದುಕೊಳ್ಳುತ್ತಿರೋ ಎನ್ನುವುದು ನಿಮಗೆ ಬಿಟ್ಟಿದ್ದು. ಯಾಕೆಂದರೆ ದೇಶದಲ್ಲಿ ಪ್ರಳಯ ಆಗುತ್ತದೆ, ಸುನಾಮಿ ಬರುತ್ತದೆ, ದೇಶದಲ್ಲಿ ನೆಲ ಬಾಯಿ ಬಿಡುತ್ತದೆ ಎನ್ನುವ ಸುದ್ದಿ ಇದು ಮೊದಲನೇಯದ್ದು ಅಲ್ಲ, ಬಹುಶ: ಕೊನೆಯದ್ದೂ ಆಗಿರುವುದಿಲ್ಲ. ಯಾಕೆಂದರೆ ಅಂತದ್ದನ್ನು ಜನರು ಈಗ ನಂಬುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸುದ್ದಿ ವರ್ಷದಲ್ಲಿ ನಾಲ್ಕು ಸಲ ಬರುತ್ತೆ. ಅದನ್ನು ನಂಬಿ ಕುಳಿತರೆ ಆಗುತ್ತಾ ಎನ್ನುವುದನ್ನು ನೀವು ಕೇಳಬಹುದು. ಆದರೆ ಈಗ ಬಂದಿರುವ ಮೂಲ ಕೇವಲ ಗಾಳಿಸುದ್ದಿ ಅಲ್ಲ. ಅದನ್ನು ಸುಮ್ಮನೆ ಹಾಗೆ ಪಕ್ಕಕ್ಕೆ ಸರಿಸುವಂತದ್ದು ಅಲ್ಲ.
ಭಾರತದ ಕಡಲ ತೀರಗಳಲ್ಲಿ ಮಾತ್ರವಲ್ಲ ಒಟ್ಟು 11 ರಾಷ್ಟ್ರಗಳಾದ ಚೀನಾ, ಜಪಾನ್, ಪಾಕಿಸ್ತಾನ, ನೇಪಾಲ, ಬಾಂಗ್ಲಾದೇಶ, ಥೈಲ್ಯಾಂಡ್, ಇಂಡೋನೇಶಿಯಾ, ಅಫಘಾನಿಸ್ತಾನ, ಶ್ರೀಲಂಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕೂಡ ಭೂಕಂಪ ಸಂಭವಿಸುತ್ತದೆ ಎಂದು ಬಿಕೆ ರಿಸರ್ಚ್ ಅಸೋಸಿಯೇಶನ್ ಆಫ್ ಇಎಸ್ ಪಿಯ ನಿರ್ದೇಶಕರಾದ ಬಾಬು ಕಲಾಯಿಲ್ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸೆಪ್ಟೆಂಬರ್ 20 ರಂದು ಪತ್ರ ಬರೆದಿದ್ದಾರೆ.
ಸೇಸ್ಮಾ ಎನ್ನುವ ಬಿರುಗಾಳಿ ಕಡಲ ತೀರಗಳನ್ನು ಅಪ್ಪಳಿಸಲಿದ್ದು 120ಕಿಲೋ ಮೀಟರ್ ನಿಂದ 180 ಕಿಲೋ ಮೀಟರ್ ವೇಗದಲ್ಲಿ ಧಾವಿಸುವ ಈ ಚಂಡ ಮಾರುತ ಕಡಲ ತೀರದ ಜನರ ಬದುಕನ್ನು ನಿರ್ನಾಮಗೊಳಿಸಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಒಬ್ಬ ವಿಜ್ಞಾನಿ ನೇರವಾಗಿ ಪ್ರಧಾನ ಮಂತ್ರಿಗೆ ಪತ್ರ ಬರೆದು ದೇಶದ ಈ ಭಾಗಗಳಲ್ಲಿ ಇಂತಿಷ್ಟು ಸಮಯದ ಒಳಗೆ ಚಂಡ ಮಾರುತ ಬೀಸುತ್ತೆ ಎಂದು ಪತ್ರ ಬರೆದಿರುವುದು ಒಂದು ತೂಕವಾದರೆ ಇದೇ ಬಾಬು ಕಲಾಯಿಲ್ 2004 ರಲ್ಲಿ ಭಾರತದಲ್ಲಿ ಸುನಾಮಿ ಬೀಸಲಿದೆ ಎಂದು ಹೇಳಿದ್ದನ್ನು ಮತ್ತು ಅದು ನಿಜವಾದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಮಾಹಿತಿ ಸುಳ್ಳಾಗಿ ಹೋಗಲೂಬಹುದು ಅಥವಾ ಒಂದಿಷ್ಟರ ಮಟ್ಟಿಗೆ ನಿಜವೂ ಆಗಬಹುದು. ಬಾಬು ಕಲಾಯಿಲ್ ಹೇಳಿದ ಈ ಸಂಗತಿ ನಿಜವಾಗುತ್ತಾ ಇಲ್ಲವಾ ಎನ್ನುವುದನ್ನು ಕಾಲವೇ ಹೇಳಲಿದೆ.

0
Shares
  • Share On Facebook
  • Tweet It


babu Kalayilearth quake


Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Naresh Shenoy February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Naresh Shenoy January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search