• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭೂಕಂಪ ಆಗುತ್ತೆ ಎಂದು ಪ್ರಧಾನಿಗೆ ಪತ್ರ ಬರೆದ ವಿಜ್ಞಾನಿ!

Naresh Shenoy Posted On September 27, 2017
0


0
Shares
  • Share On Facebook
  • Tweet It

ಡಿಸೆಂಬರ್ 31 ರ ಒಳಗೆ ಭಾರತದ ಕಡಲ ತೀರಗಳಲ್ಲಿ ಆತಂಕಕಾರಿ ವಿದ್ಯಮಾನವೊಂದು ಘಟಿಸಲಿದೆ ಎನ್ನುವ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಇದನ್ನು ಮಾಧ್ಯಮಗಳು ಹಬ್ಬಿಸುತ್ತಿರುವ ಗಾಳಿಸುದ್ದಿ ಎಂದು ಪಕ್ಕಕ್ಕೆ ಸರಿಸುತ್ತಿರೋ ಅಥವಾ ಗಂಭೀರವಾಗಿ ತೆಗೆದುಕೊಳ್ಳುತ್ತಿರೋ ಎನ್ನುವುದು ನಿಮಗೆ ಬಿಟ್ಟಿದ್ದು. ಯಾಕೆಂದರೆ ದೇಶದಲ್ಲಿ ಪ್ರಳಯ ಆಗುತ್ತದೆ, ಸುನಾಮಿ ಬರುತ್ತದೆ, ದೇಶದಲ್ಲಿ ನೆಲ ಬಾಯಿ ಬಿಡುತ್ತದೆ ಎನ್ನುವ ಸುದ್ದಿ ಇದು ಮೊದಲನೇಯದ್ದು ಅಲ್ಲ, ಬಹುಶ: ಕೊನೆಯದ್ದೂ ಆಗಿರುವುದಿಲ್ಲ. ಯಾಕೆಂದರೆ ಅಂತದ್ದನ್ನು ಜನರು ಈಗ ನಂಬುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸುದ್ದಿ ವರ್ಷದಲ್ಲಿ ನಾಲ್ಕು ಸಲ ಬರುತ್ತೆ. ಅದನ್ನು ನಂಬಿ ಕುಳಿತರೆ ಆಗುತ್ತಾ ಎನ್ನುವುದನ್ನು ನೀವು ಕೇಳಬಹುದು. ಆದರೆ ಈಗ ಬಂದಿರುವ ಮೂಲ ಕೇವಲ ಗಾಳಿಸುದ್ದಿ ಅಲ್ಲ. ಅದನ್ನು ಸುಮ್ಮನೆ ಹಾಗೆ ಪಕ್ಕಕ್ಕೆ ಸರಿಸುವಂತದ್ದು ಅಲ್ಲ.
ಭಾರತದ ಕಡಲ ತೀರಗಳಲ್ಲಿ ಮಾತ್ರವಲ್ಲ ಒಟ್ಟು 11 ರಾಷ್ಟ್ರಗಳಾದ ಚೀನಾ, ಜಪಾನ್, ಪಾಕಿಸ್ತಾನ, ನೇಪಾಲ, ಬಾಂಗ್ಲಾದೇಶ, ಥೈಲ್ಯಾಂಡ್, ಇಂಡೋನೇಶಿಯಾ, ಅಫಘಾನಿಸ್ತಾನ, ಶ್ರೀಲಂಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕೂಡ ಭೂಕಂಪ ಸಂಭವಿಸುತ್ತದೆ ಎಂದು ಬಿಕೆ ರಿಸರ್ಚ್ ಅಸೋಸಿಯೇಶನ್ ಆಫ್ ಇಎಸ್ ಪಿಯ ನಿರ್ದೇಶಕರಾದ ಬಾಬು ಕಲಾಯಿಲ್ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸೆಪ್ಟೆಂಬರ್ 20 ರಂದು ಪತ್ರ ಬರೆದಿದ್ದಾರೆ.
ಸೇಸ್ಮಾ ಎನ್ನುವ ಬಿರುಗಾಳಿ ಕಡಲ ತೀರಗಳನ್ನು ಅಪ್ಪಳಿಸಲಿದ್ದು 120ಕಿಲೋ ಮೀಟರ್ ನಿಂದ 180 ಕಿಲೋ ಮೀಟರ್ ವೇಗದಲ್ಲಿ ಧಾವಿಸುವ ಈ ಚಂಡ ಮಾರುತ ಕಡಲ ತೀರದ ಜನರ ಬದುಕನ್ನು ನಿರ್ನಾಮಗೊಳಿಸಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಒಬ್ಬ ವಿಜ್ಞಾನಿ ನೇರವಾಗಿ ಪ್ರಧಾನ ಮಂತ್ರಿಗೆ ಪತ್ರ ಬರೆದು ದೇಶದ ಈ ಭಾಗಗಳಲ್ಲಿ ಇಂತಿಷ್ಟು ಸಮಯದ ಒಳಗೆ ಚಂಡ ಮಾರುತ ಬೀಸುತ್ತೆ ಎಂದು ಪತ್ರ ಬರೆದಿರುವುದು ಒಂದು ತೂಕವಾದರೆ ಇದೇ ಬಾಬು ಕಲಾಯಿಲ್ 2004 ರಲ್ಲಿ ಭಾರತದಲ್ಲಿ ಸುನಾಮಿ ಬೀಸಲಿದೆ ಎಂದು ಹೇಳಿದ್ದನ್ನು ಮತ್ತು ಅದು ನಿಜವಾದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಮಾಹಿತಿ ಸುಳ್ಳಾಗಿ ಹೋಗಲೂಬಹುದು ಅಥವಾ ಒಂದಿಷ್ಟರ ಮಟ್ಟಿಗೆ ನಿಜವೂ ಆಗಬಹುದು. ಬಾಬು ಕಲಾಯಿಲ್ ಹೇಳಿದ ಈ ಸಂಗತಿ ನಿಜವಾಗುತ್ತಾ ಇಲ್ಲವಾ ಎನ್ನುವುದನ್ನು ಕಾಲವೇ ಹೇಳಲಿದೆ.

0
Shares
  • Share On Facebook
  • Tweet It


babu Kalayilearth quake


Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Naresh Shenoy December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Naresh Shenoy December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search