• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ಸಿದ್ದರಾಮಯ್ಯನವರೇ, ಮೊದಲು ಗುಂಡಿ ಮುಚ್ಚಿ ಮಾರ್ರೆ

-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು Posted On October 9, 2017
0


0
Shares
  • Share On Facebook
  • Tweet It

ರಸ್ತೆ ಮೇಲೆ ನಡೆದಾಡುವಾಗ ತಲೆ ಮೇಲೆ ವಿದ್ಯುತ್ ತಂತಿ ಕಡಿದು ಬೀಳಬಹುದು, ವಿದ್ಯುತ್ ನಿರೋಧಕ ಜಾಕೆಟ್ ಬಳಸಿ, ಬಸ್ ಆ್ಯಕ್ಸಿಡೆಂಟ್ ಆದಾಗ ಅನಾಹುತ ಸಂಭವಿಸಬಹುದು, ಬಸ್ಸಿನಲ್ಲಿ ಕೂತಾಗಲೂ ಹೆಲ್ಮೆಟ್ ಧರಿಸಿ, ಕೋಣೆಯಲ್ಲಿ ಕುಳಿತಾಗ ಭೂಕಂಪವಾಗಬಹುದು, ಆ್ಯಂಟಿ ಅರ್ಥ್ ಕ್ವೇಕ್ ಕೋಣೆಯಲ್ಲೇ ಕುಳಿತು ಕೆಲಸ ಮಾಡಿ…

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದಾಗ ಈ ಜೋಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು…

ಆದರೆ, ಸಿದ್ದರಾಮಯ್ಯನವರ “ಜಾಣತನ” ಜಗಜ್ಜಾಹೀರಾಯ್ತು…

ಒಂದು ವಾರದ ಹಿಂದಷ್ಟೇ ಮೈಸೂರು ರಸ್ತೆಯ ಫ್ಲೈ ಓವರ್ ಮೇಲೆ ಗುಂಡಿಗಳಿಂದಾಗಿ ದಂಪತಿ ಮೃತಪಟ್ಟರು. ಭಾನುವಾರ ಬೆಳಗ್ಗೆ ಇದೇ ಮೈಸೂರು ರಸ್ತೆಯಲ್ಲಿ 34 ವರ್ಷದ ರಾಧಾ ಎಂಬುವವರು ಇದೇ ಗುಂಡಿಗಳಿಗೆ ಬಲಿಯಾಗಿದ್ದಾರೆ. ಒಂದೇ ವಾರದ ಅಂತರದಲ್ಲಿ ಮೈಸೂರು ರಸ್ತೆಯೊಂದರ ಗುಂಡಿಗಳಿಗೆ ಮೂವರು ಪ್ರಾಣ ತೆತ್ತಿದ್ದಾರೆ. ಬೆಂಗಳೂರಿನ ಯಾವುದೇ ಮೂಲೆಗೆ ಹೋದರು ಗುಂಡಿಗಳ ಮಧ್ಯೆಯೇ ರಸ್ತೆ ಇದೆ ಎನ್ನಿಸುವಷ್ಟರಮಟ್ಟಿಗೆ ಗುಂಡಿರಸ್ತೆಯಾಗಿ ಪರಿಣಮಿಸಿವೆ. ಅಪಘಾತಗಳು ನಿತ್ಯ ನಿರಂತರ ಎಂಬಂತಾಗಿವೆ.

ಇಷ್ಟಾದರೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಮಾತ್ರ ಮಗುಮ್ಮಾಗಿ ಕುಳಿತಿದ್ದಾರೆ. ಇವರ ಅವಧಿಯಲ್ಲೇ ಬೆಂಗಳೂರು ಅಭಿವೃದ್ಧಿಗೆ ನಗರಾಭಿವೃದ್ಧಿ ಖಾತೆ ರಚಿಸಿದ್ದಾರಾದರೂ, ಬೆಂಗಳೂರು ಪ್ಯಾರಿಸ್ ರೇಂಜಿಗೆ ಆಗದಿದ್ದರೂ, ಕನಿಷ್ಠ ರಸ್ತೆಯಂಥ ಮೂಲ ಸೌಕರ್ಯವೂ ಒದಗಿಸಿಲ್ಲ ಎಂಬುದೇ ದುರಂತ.

ಹಾಗಂತ, ಸಿದ್ದರಾಮಯ್ಯನವರು ಜಾರಿಗೆ ತಂದ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಯೋಜನೆಯನ್ನು ಟೀಕಿಸುತ್ತಿಲ್ಲ. ಆದರೆ, ಇಂಥ ನಿಯಮ ಜಾರಿ ಮಾಡುವ ಜತೆಗೆ ರಸ್ತೆಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಲ್ಲವೇ? ಕಾಲಕಾಲಕ್ಕೆ ದುರಸ್ತಿ ಮಾಡಿಸಬೇಕಲ್ಲವೇ?

ಬಿಬಿಎಂಪಿ ವರದಿ ಪ್ರಕಾರ ಬೆಂಗಳೂರಿನಲ್ಲಿ 15 ಸಾವಿರಕ್ಕೂ ಅಧಿಕ ಗುಂಡಿಗಳಿವೆಯಂತೆ. ಅಲ್ಲ ಸ್ವಾಮಿ, ರಸ್ತೆಯೇ ನೆಟ್ಟಗಿಡದೇ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೆ ಏನು ಪ್ರಯೋಜನ? ಗುಂಡಿಗೆ ಒಂದು ಜೀವ ಎಂದರೂ 15 ಸಾವಿರ ಜನ ಸಾಯುತ್ತಾರೆ. ಆಗ ಹೆಲ್ಮೆಟ್ ಬಂದು ಜೀವ ಉಳಿಸುತ್ತದೆಯೇ?

ಮಳೆ ಬಂದರೆ ನೆನೆಯಬಹುದು ಎಂದು ತಾರಸಿ ದುರಸ್ತಿಗೊಳಿಸಬೇಕೆ ಹೊರತು, ಮನೆಯಲ್ಲಿ ಛತ್ರಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ನಿಯಮ ಜಾರಿಗೊಳಿಸುವುದಲ್ಲ ಸಿದ್ದರಾಮಯ್ಯನವರೇ. ನಿಮ್ಮ ಹೆಲ್ಮೆಟ್ ಯೋಜನೆ ಕೊಡೆ ಕಡ್ಡಾಯಗೊಳಿಸಿದಂತಿದೆ. ಮೊದಲು ಯೋಜನೆ ಜಾರಿಗೆ ಮುನ್ನ ಯೋಚಿಸಿ, ಅದಕ್ಕೂ ಮೊದಲು ಗುಂಡಿ ಮುಚ್ಚಿಸಿ ಮಾರ್ರೆ. ಇಲ್ಲದಿದ್ದರೆ ಗುಂಡಿಗೆ ಬಲಿ ಎಂಬ ಹೆಡ್ ಲೈನ್ ನೋಡಿ “ಎಡ”ಬಿಡಂಗಿಗಳು ಗೌರಿ ಫೋಟೊ ಇಟ್ಟು ಮೋದಿ ವಿರುದ್ಧ ಹೋರಾಟ ಮಾಡಿಯಾರು!

0
Shares
  • Share On Facebook
  • Tweet It




Trending Now
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು December 9, 2025
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
  • Popular Posts

    • 1
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 2
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 3
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search