• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ಸಿದ್ದರಾಮಯ್ಯನವರೇ, ಮೊದಲು ಗುಂಡಿ ಮುಚ್ಚಿ ಮಾರ್ರೆ

-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು Posted On October 9, 2017
0


0
Shares
  • Share On Facebook
  • Tweet It

ರಸ್ತೆ ಮೇಲೆ ನಡೆದಾಡುವಾಗ ತಲೆ ಮೇಲೆ ವಿದ್ಯುತ್ ತಂತಿ ಕಡಿದು ಬೀಳಬಹುದು, ವಿದ್ಯುತ್ ನಿರೋಧಕ ಜಾಕೆಟ್ ಬಳಸಿ, ಬಸ್ ಆ್ಯಕ್ಸಿಡೆಂಟ್ ಆದಾಗ ಅನಾಹುತ ಸಂಭವಿಸಬಹುದು, ಬಸ್ಸಿನಲ್ಲಿ ಕೂತಾಗಲೂ ಹೆಲ್ಮೆಟ್ ಧರಿಸಿ, ಕೋಣೆಯಲ್ಲಿ ಕುಳಿತಾಗ ಭೂಕಂಪವಾಗಬಹುದು, ಆ್ಯಂಟಿ ಅರ್ಥ್ ಕ್ವೇಕ್ ಕೋಣೆಯಲ್ಲೇ ಕುಳಿತು ಕೆಲಸ ಮಾಡಿ…

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದಾಗ ಈ ಜೋಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು…

ಆದರೆ, ಸಿದ್ದರಾಮಯ್ಯನವರ “ಜಾಣತನ” ಜಗಜ್ಜಾಹೀರಾಯ್ತು…

ಒಂದು ವಾರದ ಹಿಂದಷ್ಟೇ ಮೈಸೂರು ರಸ್ತೆಯ ಫ್ಲೈ ಓವರ್ ಮೇಲೆ ಗುಂಡಿಗಳಿಂದಾಗಿ ದಂಪತಿ ಮೃತಪಟ್ಟರು. ಭಾನುವಾರ ಬೆಳಗ್ಗೆ ಇದೇ ಮೈಸೂರು ರಸ್ತೆಯಲ್ಲಿ 34 ವರ್ಷದ ರಾಧಾ ಎಂಬುವವರು ಇದೇ ಗುಂಡಿಗಳಿಗೆ ಬಲಿಯಾಗಿದ್ದಾರೆ. ಒಂದೇ ವಾರದ ಅಂತರದಲ್ಲಿ ಮೈಸೂರು ರಸ್ತೆಯೊಂದರ ಗುಂಡಿಗಳಿಗೆ ಮೂವರು ಪ್ರಾಣ ತೆತ್ತಿದ್ದಾರೆ. ಬೆಂಗಳೂರಿನ ಯಾವುದೇ ಮೂಲೆಗೆ ಹೋದರು ಗುಂಡಿಗಳ ಮಧ್ಯೆಯೇ ರಸ್ತೆ ಇದೆ ಎನ್ನಿಸುವಷ್ಟರಮಟ್ಟಿಗೆ ಗುಂಡಿರಸ್ತೆಯಾಗಿ ಪರಿಣಮಿಸಿವೆ. ಅಪಘಾತಗಳು ನಿತ್ಯ ನಿರಂತರ ಎಂಬಂತಾಗಿವೆ.

ಇಷ್ಟಾದರೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಮಾತ್ರ ಮಗುಮ್ಮಾಗಿ ಕುಳಿತಿದ್ದಾರೆ. ಇವರ ಅವಧಿಯಲ್ಲೇ ಬೆಂಗಳೂರು ಅಭಿವೃದ್ಧಿಗೆ ನಗರಾಭಿವೃದ್ಧಿ ಖಾತೆ ರಚಿಸಿದ್ದಾರಾದರೂ, ಬೆಂಗಳೂರು ಪ್ಯಾರಿಸ್ ರೇಂಜಿಗೆ ಆಗದಿದ್ದರೂ, ಕನಿಷ್ಠ ರಸ್ತೆಯಂಥ ಮೂಲ ಸೌಕರ್ಯವೂ ಒದಗಿಸಿಲ್ಲ ಎಂಬುದೇ ದುರಂತ.

ಹಾಗಂತ, ಸಿದ್ದರಾಮಯ್ಯನವರು ಜಾರಿಗೆ ತಂದ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಯೋಜನೆಯನ್ನು ಟೀಕಿಸುತ್ತಿಲ್ಲ. ಆದರೆ, ಇಂಥ ನಿಯಮ ಜಾರಿ ಮಾಡುವ ಜತೆಗೆ ರಸ್ತೆಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಲ್ಲವೇ? ಕಾಲಕಾಲಕ್ಕೆ ದುರಸ್ತಿ ಮಾಡಿಸಬೇಕಲ್ಲವೇ?

ಬಿಬಿಎಂಪಿ ವರದಿ ಪ್ರಕಾರ ಬೆಂಗಳೂರಿನಲ್ಲಿ 15 ಸಾವಿರಕ್ಕೂ ಅಧಿಕ ಗುಂಡಿಗಳಿವೆಯಂತೆ. ಅಲ್ಲ ಸ್ವಾಮಿ, ರಸ್ತೆಯೇ ನೆಟ್ಟಗಿಡದೇ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದರೆ ಏನು ಪ್ರಯೋಜನ? ಗುಂಡಿಗೆ ಒಂದು ಜೀವ ಎಂದರೂ 15 ಸಾವಿರ ಜನ ಸಾಯುತ್ತಾರೆ. ಆಗ ಹೆಲ್ಮೆಟ್ ಬಂದು ಜೀವ ಉಳಿಸುತ್ತದೆಯೇ?

ಮಳೆ ಬಂದರೆ ನೆನೆಯಬಹುದು ಎಂದು ತಾರಸಿ ದುರಸ್ತಿಗೊಳಿಸಬೇಕೆ ಹೊರತು, ಮನೆಯಲ್ಲಿ ಛತ್ರಿ ಇಟ್ಟುಕೊಳ್ಳುವುದು ಕಡ್ಡಾಯ ಎಂದು ನಿಯಮ ಜಾರಿಗೊಳಿಸುವುದಲ್ಲ ಸಿದ್ದರಾಮಯ್ಯನವರೇ. ನಿಮ್ಮ ಹೆಲ್ಮೆಟ್ ಯೋಜನೆ ಕೊಡೆ ಕಡ್ಡಾಯಗೊಳಿಸಿದಂತಿದೆ. ಮೊದಲು ಯೋಜನೆ ಜಾರಿಗೆ ಮುನ್ನ ಯೋಚಿಸಿ, ಅದಕ್ಕೂ ಮೊದಲು ಗುಂಡಿ ಮುಚ್ಚಿಸಿ ಮಾರ್ರೆ. ಇಲ್ಲದಿದ್ದರೆ ಗುಂಡಿಗೆ ಬಲಿ ಎಂಬ ಹೆಡ್ ಲೈನ್ ನೋಡಿ “ಎಡ”ಬಿಡಂಗಿಗಳು ಗೌರಿ ಫೋಟೊ ಇಟ್ಟು ಮೋದಿ ವಿರುದ್ಧ ಹೋರಾಟ ಮಾಡಿಯಾರು!

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
-ರಾಘವೇಂದ್ರ ಬೆಳ್ತಂಗಡಿ, ಸಾಫ್ಟ್ ವೇರ್ ಉದ್ಯೋಗಿ, ಬೆಂಗಳೂರು July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search