• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆಯ ಕಾಮಗಾರಿಗಳಲ್ಲಿ 20% ಕಮೀಷನ್ ಕಾರ್ಪೋರೇಟರ್ ಗಳಿಗೆ ಹೋಗುತ್ತದೆ!

TNN Correspondent Posted On October 12, 2017
0


0
Shares
  • Share On Facebook
  • Tweet It

ಯಾವುದೇ ಕಾಮಗಾರಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯಬೇಕಾದರೆ ಅದರಲ್ಲಿ ಗುತ್ತಿಗೆದಾರ 20% ಕಮೀಷನ್ ಪಾಲಿಕೆಯ ಕಾರ್ಪೋರೇಟರ್ ಗಳಿಗೆ ಕೊಡಬೇಕಾಗುತ್ತದೆ. ಇನ್ನು ಒಂದಿಷ್ಟು ದೊಡ್ಡ ಮೊತ್ತ ಅಧಿಕಾರಿಗಳಿಗೆ ಕೊಡಬೇಕಾಗುತ್ತದೆ. ಹಣ ತೆಗೆದುಕೊಳ್ಳುವಾಗ ಅಧಿಕಾರಿಗಳು ಅದರಲ್ಲಿ ಶಾಸಕರಿಗೆ ಮತ್ತು ಸಚಿವರಿಗೆ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ. ಸಚಿವ ರಮಾನಾಥ ರೈ ಅವರು ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ನನ್ನ ಬಳಿ ದಾಖಲೆ ಇಲ್ಲ. ಆದ್ದರಿಂದ ನಾನು ಸುಮ್ಮಸುಮ್ಮನೆ ಅವರ ಮೇಲೆ ಆರೋಪ ಹೊರಿಸುವುದಿಲ್ಲ. ಆದರೆ ಉಳಿದವರು ತೆಗೆದುಕೊಳ್ಳುತ್ತಾರೆ ಎನ್ನುವುದು ನೂರಕ್ಕೆ ನೂರು ನಿಜ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.

https://tulunadunews.com/wp-content/uploads/2017/10/vk.mp4

ಬುಧವಾರ ಕರಾವಳಿ ಕರ್ನಾಟಕದ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ಹಾಗಂತ ಯಾರೇ ತಪ್ಪು ಮಾಡಿದರೂ ಹೇಳಬೇಕಾಗುವ ಅಗತ್ಯ ಇದೆ. ಎಲ್ಲಾ ಕಾರ್ಪೋರೇಟರ್ ಗಳು ಲಂಚ ತೆಗೆದುಕೊಂಡೇ ಕೆಲಸ ಮಾಡುತ್ತಾರೆ ಎಂದಲ್ಲ, ಆದರೆ ತೆಗೆದುಕೊಳ್ಳದಿರುವವರ ಪ್ರಮಾಣ ಭಾರೀ ಚಿಕ್ಕದು. ಹೆಚ್ಚಿನವರು ಮುಂಚೆ ಹೇಗಿದ್ದರು, ಈಗ ಹೇಗಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಅವರು ನುಡಿದರು. 20% ಜನಪ್ರತಿನಿಧಿಗಳಿಗೆ, 10% ಅಧಿಕಾರಿಗಳಿಗೆ ಕೊಟ್ಟ ಮೇಲೆ ಗುತ್ತಿಗೆದಾರರ ಬಳಿ ಎಷ್ಟು ಉಳಿಯುತ್ತದೆ. ಇದರಿಂದ ಅವರು ಸಿಮೆಂಟ್ ಕಡಿಮೆ, ಮರಳು ಜಾಸ್ತಿ ಹಾಕಿ ಕಾಮಗಾರಿ ಮುಗಿಸಬೇಕಾಗುತ್ತದೆ. ಕಾಮಗಾರಿಗಳು ತುಂಬಾ ದಿನ ಉಳಿಯಲ್ಲ ಎಂದು ಅವರು ಹೇಳಿದರು. ಪಾಲಿಕೆಯಲ್ಲಿರುವ ನಗರ ಯೋಜನಾ ವಿಭಾಗದಲ್ಲಿರುವ ಅಧಿಕಾರಿಗಳ ಬಳಿ ಎರಡು ಮೂರು ಐಶಾರಾಮಿ ಫ್ಲಾಟ್ ಗಳು ಇವೆ. ಸಿಕ್ಕಾಪಟ್ಟೆ ಹಣ ಇದೆ. ಇದೆಲ್ಲ ಅವರು ನ್ಯಾಯಯುತವಾಗಿ ದುಡಿಯಲು ಸಾಧ್ಯವಿಲ್ಲ. ಎಲ್ಲವೂ ಲಂಚದ ಮಹಿಮೆ ಎಂದು ಅವರು ಹೇಳಿದರು. ಹಿಂದೆ ಹೀಗಿರಲಿಲ್ಲ. ಇತ್ತೀಚೆಗಂತೂ ಲಂಚವೇ ಹೆಚ್ಚು ಮಾತನಾಡುತ್ತದೆ. ಲಂಚ ತೆಗೆದುಕೊಂಡು ಕೆಲಸ ಮಾಡುವ ಅಧಿಕಾರಿಗಳ ಫೊಟೋಗಳನ್ನು ಹೊರಗೆ ನೇತಾಡಿಸಿದರೆ ಬುದ್ಧಿ ಬರುತ್ತದೆ ಎಂದು ಕೊನೆಯಲ್ಲಿ ಮಾಜಿ ಶಾಸಕರು ಅಭಿಪ್ರಾಯಪಟ್ಟರು.

0
Shares
  • Share On Facebook
  • Tweet It




Trending Now
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
Tulunadu News October 22, 2025
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
Tulunadu News October 21, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
  • Popular Posts

    • 1
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • 2
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search