• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯ ಕಾಮಗಾರಿಗಳಲ್ಲಿ 20% ಕಮೀಷನ್ ಕಾರ್ಪೋರೇಟರ್ ಗಳಿಗೆ ಹೋಗುತ್ತದೆ!

TNN Correspondent Posted On October 12, 2017


  • Share On Facebook
  • Tweet It

ಯಾವುದೇ ಕಾಮಗಾರಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯಬೇಕಾದರೆ ಅದರಲ್ಲಿ ಗುತ್ತಿಗೆದಾರ 20% ಕಮೀಷನ್ ಪಾಲಿಕೆಯ ಕಾರ್ಪೋರೇಟರ್ ಗಳಿಗೆ ಕೊಡಬೇಕಾಗುತ್ತದೆ. ಇನ್ನು ಒಂದಿಷ್ಟು ದೊಡ್ಡ ಮೊತ್ತ ಅಧಿಕಾರಿಗಳಿಗೆ ಕೊಡಬೇಕಾಗುತ್ತದೆ. ಹಣ ತೆಗೆದುಕೊಳ್ಳುವಾಗ ಅಧಿಕಾರಿಗಳು ಅದರಲ್ಲಿ ಶಾಸಕರಿಗೆ ಮತ್ತು ಸಚಿವರಿಗೆ ಕೊಡಬೇಕಾಗುತ್ತದೆ ಎಂದು ಹೇಳುತ್ತಾರೆ. ಸಚಿವ ರಮಾನಾಥ ರೈ ಅವರು ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ನನ್ನ ಬಳಿ ದಾಖಲೆ ಇಲ್ಲ. ಆದ್ದರಿಂದ ನಾನು ಸುಮ್ಮಸುಮ್ಮನೆ ಅವರ ಮೇಲೆ ಆರೋಪ ಹೊರಿಸುವುದಿಲ್ಲ. ಆದರೆ ಉಳಿದವರು ತೆಗೆದುಕೊಳ್ಳುತ್ತಾರೆ ಎನ್ನುವುದು ನೂರಕ್ಕೆ ನೂರು ನಿಜ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.

https://tulunadunews.com/wp-content/uploads/2017/10/vk.mp4

ಬುಧವಾರ ಕರಾವಳಿ ಕರ್ನಾಟಕದ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್. ಹಾಗಂತ ಯಾರೇ ತಪ್ಪು ಮಾಡಿದರೂ ಹೇಳಬೇಕಾಗುವ ಅಗತ್ಯ ಇದೆ. ಎಲ್ಲಾ ಕಾರ್ಪೋರೇಟರ್ ಗಳು ಲಂಚ ತೆಗೆದುಕೊಂಡೇ ಕೆಲಸ ಮಾಡುತ್ತಾರೆ ಎಂದಲ್ಲ, ಆದರೆ ತೆಗೆದುಕೊಳ್ಳದಿರುವವರ ಪ್ರಮಾಣ ಭಾರೀ ಚಿಕ್ಕದು. ಹೆಚ್ಚಿನವರು ಮುಂಚೆ ಹೇಗಿದ್ದರು, ಈಗ ಹೇಗಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಅವರು ನುಡಿದರು. 20% ಜನಪ್ರತಿನಿಧಿಗಳಿಗೆ, 10% ಅಧಿಕಾರಿಗಳಿಗೆ ಕೊಟ್ಟ ಮೇಲೆ ಗುತ್ತಿಗೆದಾರರ ಬಳಿ ಎಷ್ಟು ಉಳಿಯುತ್ತದೆ. ಇದರಿಂದ ಅವರು ಸಿಮೆಂಟ್ ಕಡಿಮೆ, ಮರಳು ಜಾಸ್ತಿ ಹಾಕಿ ಕಾಮಗಾರಿ ಮುಗಿಸಬೇಕಾಗುತ್ತದೆ. ಕಾಮಗಾರಿಗಳು ತುಂಬಾ ದಿನ ಉಳಿಯಲ್ಲ ಎಂದು ಅವರು ಹೇಳಿದರು. ಪಾಲಿಕೆಯಲ್ಲಿರುವ ನಗರ ಯೋಜನಾ ವಿಭಾಗದಲ್ಲಿರುವ ಅಧಿಕಾರಿಗಳ ಬಳಿ ಎರಡು ಮೂರು ಐಶಾರಾಮಿ ಫ್ಲಾಟ್ ಗಳು ಇವೆ. ಸಿಕ್ಕಾಪಟ್ಟೆ ಹಣ ಇದೆ. ಇದೆಲ್ಲ ಅವರು ನ್ಯಾಯಯುತವಾಗಿ ದುಡಿಯಲು ಸಾಧ್ಯವಿಲ್ಲ. ಎಲ್ಲವೂ ಲಂಚದ ಮಹಿಮೆ ಎಂದು ಅವರು ಹೇಳಿದರು. ಹಿಂದೆ ಹೀಗಿರಲಿಲ್ಲ. ಇತ್ತೀಚೆಗಂತೂ ಲಂಚವೇ ಹೆಚ್ಚು ಮಾತನಾಡುತ್ತದೆ. ಲಂಚ ತೆಗೆದುಕೊಂಡು ಕೆಲಸ ಮಾಡುವ ಅಧಿಕಾರಿಗಳ ಫೊಟೋಗಳನ್ನು ಹೊರಗೆ ನೇತಾಡಿಸಿದರೆ ಬುದ್ಧಿ ಬರುತ್ತದೆ ಎಂದು ಕೊನೆಯಲ್ಲಿ ಮಾಜಿ ಶಾಸಕರು ಅಭಿಪ್ರಾಯಪಟ್ಟರು.

  • Share On Facebook
  • Tweet It


- Advertisement -


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Tulunadu News March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Tulunadu News March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search