• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಫತ್ವಾ ಹೊರಡಿಸಿದ ಉಲೂಮ್ ಸಂಸ್ಥೆಯನ್ನೇ ನಿಷೇಧಿಸಿ: ಮುಸ್ಲಿಂ ಮಹಿಳೆಯ ಆಗ್ರಹ

TNN Correspondent Posted On October 23, 2017


  • Share On Facebook
  • Tweet It

ಮುಸ್ಲಿಂ ಮಹಿಳೆಯೊಬ್ಬಳು ಹುಬ್ಬು ನೀಟಾಗಿ ಕತ್ತರಿಸಿದ ಫೋಟೋ ಫೇಸ್ ಬುಕ್ ಗೆ ಪೋಸ್ಟ್ ಮಾಡಿದರಾ? ಫತ್ವಾ.

ಮುಸ್ಲಿಂ ಮಹಿಳೆಯರು ದೀಪಾವಳಿಯಲ್ಲಿ ಆರತಿ ಬೆಳಗಿದರಾ? ಫತ್ವಾ.

ಮುಸ್ಲಿಂ ಮಹಿಳೆಯರು, ಪುರುಷರು ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುವುದು ಇಸ್ಲಾಂ ವಿರೋಧಿ…

ಹೀಗೆ ಪ್ರತಿಯೊಂದರಲ್ಲೂ ಹುಳುಕು ಹುಡುಕಿ, ಸುಖಾಸುಮ್ಮನೆ ಫತ್ವಾ ಹೊರಡಿಸುತ್ತಿದ್ದ ಉತ್ತರ ಪ್ರದೇಶದ ಇಸ್ಲಾಮಿಕ್ ಸಂಸ್ಥೆ ದರೂಲ್ ಉಲೂಮ್ ದಿಯೋಬಂದ್ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಗುಡುಗಿದ್ದು, ದ್ವೇಷ ಹಾಗೂ ಹಾಸ್ಯಾಸ್ಪದವಾಗಿ ಫತ್ವಾ ಹೊರಡಿಸುವ ಈ ಸಂಸ್ಥೆಯನ್ನೇ ಮುಚ್ಚಿ ಎಂದಿದ್ದಾರೆ.

ನಜೀನ್ ಅನ್ಸಾರಿ ಎಂಬ ಮಹಿಳೆ ಈ ಕುರಿತು ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ನೇತೃತ್ವದಲ್ಲೇ ದೀಪಾವಳಿ ದಿನ ಆರತಿ ಬೆಳಗಲಾಗಿತ್ತು. ಹಾಗಾಗಿ ಉಲೂಮ್ ಸಂಸ್ಥೆ ಇವರ ವಿರುದ್ಧ ಫತ್ವಾ ಹೊರಡಿಸಿತ್ತು.

ಸುಮ್ಮಸುಮ್ಮನೆ ಫತ್ವಾ ಹೊರಡಿಸಿದ ಸಂಸ್ಥೆ ವಿರುದ್ಧ ಕಿಡಿಕಾರಿರುವ ನಜೀನ್, “ಈ ಇಸ್ಲಾಮಿಕ್ ಸಂಸ್ಥೆಯ ಹಣಕಾಸು ವ್ಯವಹಾರ, ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಭಾಗಿಯಾದ ಚಟುವಟಿಕೆಗಳ ವಿರುದ್ಧ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

ವೈಯಕ್ತಿಕ ವಿಚಾರಗಳ ಆಧಾರದ ಮೇಲೆ ಫತ್ವಾ ಹೊರಡಿಸುವ ಯಾವ ಹಕ್ಕೂ ಉಲೂಮ್ ದಿಯೋಬಂದ್ ಸಂಸ್ಥೆಗಿಲ್ಲ. ಯಾವ ಇಸ್ಲಾಂ, ಯಾವ ಅಲ್ಲಾನೂ ಈ ಹಕ್ಕು ನೀಡಿಲ್ಲ. ಅವರು ಬರೀ ಇಸ್ಲಾಂ ಕುರಿತ ಸಕಾರಾತ್ಮ ಅಂಶಗಳ ಕುರಿತು ಹೇಳುವ ಹಕ್ಕು ಹೊಂದಿದ್ದಾರೆಯೇ ಹೊರತು ಫತ್ವಾ ಹೊರಡಿಸುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮುಸ್ಲಿಂ ಮಹಿಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಹಾಗೂ ಇಸ್ಲಾಂ ಧರ್ಮದ ನಿಯಮ ಪಾಲಿಸುತ್ತೇನೆ. ಆದರೆ ಇಂಥ ಆಧಾರರಹಿತ ಫತ್ವಾಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ ಎಂದಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search