• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಫತ್ವಾ ಹೊರಡಿಸಿದ ಉಲೂಮ್ ಸಂಸ್ಥೆಯನ್ನೇ ನಿಷೇಧಿಸಿ: ಮುಸ್ಲಿಂ ಮಹಿಳೆಯ ಆಗ್ರಹ

TNN Correspondent Posted On October 23, 2017


  • Share On Facebook
  • Tweet It

ಮುಸ್ಲಿಂ ಮಹಿಳೆಯೊಬ್ಬಳು ಹುಬ್ಬು ನೀಟಾಗಿ ಕತ್ತರಿಸಿದ ಫೋಟೋ ಫೇಸ್ ಬುಕ್ ಗೆ ಪೋಸ್ಟ್ ಮಾಡಿದರಾ? ಫತ್ವಾ.

ಮುಸ್ಲಿಂ ಮಹಿಳೆಯರು ದೀಪಾವಳಿಯಲ್ಲಿ ಆರತಿ ಬೆಳಗಿದರಾ? ಫತ್ವಾ.

ಮುಸ್ಲಿಂ ಮಹಿಳೆಯರು, ಪುರುಷರು ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡುವುದು ಇಸ್ಲಾಂ ವಿರೋಧಿ…

ಹೀಗೆ ಪ್ರತಿಯೊಂದರಲ್ಲೂ ಹುಳುಕು ಹುಡುಕಿ, ಸುಖಾಸುಮ್ಮನೆ ಫತ್ವಾ ಹೊರಡಿಸುತ್ತಿದ್ದ ಉತ್ತರ ಪ್ರದೇಶದ ಇಸ್ಲಾಮಿಕ್ ಸಂಸ್ಥೆ ದರೂಲ್ ಉಲೂಮ್ ದಿಯೋಬಂದ್ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಗುಡುಗಿದ್ದು, ದ್ವೇಷ ಹಾಗೂ ಹಾಸ್ಯಾಸ್ಪದವಾಗಿ ಫತ್ವಾ ಹೊರಡಿಸುವ ಈ ಸಂಸ್ಥೆಯನ್ನೇ ಮುಚ್ಚಿ ಎಂದಿದ್ದಾರೆ.

ನಜೀನ್ ಅನ್ಸಾರಿ ಎಂಬ ಮಹಿಳೆ ಈ ಕುರಿತು ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ನೇತೃತ್ವದಲ್ಲೇ ದೀಪಾವಳಿ ದಿನ ಆರತಿ ಬೆಳಗಲಾಗಿತ್ತು. ಹಾಗಾಗಿ ಉಲೂಮ್ ಸಂಸ್ಥೆ ಇವರ ವಿರುದ್ಧ ಫತ್ವಾ ಹೊರಡಿಸಿತ್ತು.

ಸುಮ್ಮಸುಮ್ಮನೆ ಫತ್ವಾ ಹೊರಡಿಸಿದ ಸಂಸ್ಥೆ ವಿರುದ್ಧ ಕಿಡಿಕಾರಿರುವ ನಜೀನ್, “ಈ ಇಸ್ಲಾಮಿಕ್ ಸಂಸ್ಥೆಯ ಹಣಕಾಸು ವ್ಯವಹಾರ, ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಭಾಗಿಯಾದ ಚಟುವಟಿಕೆಗಳ ವಿರುದ್ಧ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

ವೈಯಕ್ತಿಕ ವಿಚಾರಗಳ ಆಧಾರದ ಮೇಲೆ ಫತ್ವಾ ಹೊರಡಿಸುವ ಯಾವ ಹಕ್ಕೂ ಉಲೂಮ್ ದಿಯೋಬಂದ್ ಸಂಸ್ಥೆಗಿಲ್ಲ. ಯಾವ ಇಸ್ಲಾಂ, ಯಾವ ಅಲ್ಲಾನೂ ಈ ಹಕ್ಕು ನೀಡಿಲ್ಲ. ಅವರು ಬರೀ ಇಸ್ಲಾಂ ಕುರಿತ ಸಕಾರಾತ್ಮ ಅಂಶಗಳ ಕುರಿತು ಹೇಳುವ ಹಕ್ಕು ಹೊಂದಿದ್ದಾರೆಯೇ ಹೊರತು ಫತ್ವಾ ಹೊರಡಿಸುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮುಸ್ಲಿಂ ಮಹಿಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಹಾಗೂ ಇಸ್ಲಾಂ ಧರ್ಮದ ನಿಯಮ ಪಾಲಿಸುತ್ತೇನೆ. ಆದರೆ ಇಂಥ ಆಧಾರರಹಿತ ಫತ್ವಾಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ ಎಂದಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Tulunadu News March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search