• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಿಎಸ್ ಟಿ ವಿರೋಧಿಸುವವರೇ ನರೇಂದ್ರ ಮೋದಿ ಅವರ ಈ ಮಾತು ಕೇಳಿ. ಒಮ್ಮೆ ಅಂಕಿ-ಅಂಶ ನೋಡಿ.

TNN Correspondent Posted On October 27, 2017
0


0
Shares
  • Share On Facebook
  • Tweet It

ದೇಶಾದ್ಯಂತ ಕೆಲವು ಎಡಬಿಡಂಗಿ ಮನಸ್ಸುಗಳು ಸುಖಾಸುಮ್ಮನೆ ಜಿಎಸ್ ಟಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ, ಮೆರ್ಸೆಲ್ ಚಿತ್ರದ ಮೂಲಕ ಜಿಎಸ್ಟಿಯನ್ನು ವಿರೋಧಿಸುವ ಪ್ರಯತ್ನ ವಿವಾದವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರಕು ಮತ್ತು ಸೇವಾ ತೆರಿಗೆ ಕುರಿತು ಮಾತನಾಡಿದ್ದು, “ಜಿಎಸ್ಟಿಯಿಂದ ಬಡವರಿಗೆ ಅನುಕೂಲ’ ಎಂದಿದ್ದಾರೆ.

ಜಿಎಸ್ಟಿಯಿಂದ ಗ್ರಾಹಕರ ಹಿತಾಸಕ್ತಿಯೇ ಮೇಲಾಗಿದೆ. ಈಗ ಗ್ರಾಹಕರು ಶೇ.10ರಷ್ಟು ಬುಕ್ಕಿಂಗ್ ಮೊತ್ತ ನೀಡಿ ಫ್ಲ್ಯಾಟ ಖರೀದಿಸಬಹುದು. ಅಂದಹಾಗೆ ಇದು ಮೊದಲು ಶೇ.40ರಷ್ಟಿತ್ತು. ಜಿಎಸ್ಟಿಯಿಂದ 5 ಲಕ್ಷ ತೆರಿಗೆದಾರರು ನೋಂದಣಿಯಾಗಿದ್ದಾರೆ. ಅವರು ಕಟ್ಟಿದ ತೆರಿಗೆ ದೇಶದ ಅಭ್ಯುದಯಕ್ಕೆ ಬಳಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.

ಜಿಎಸ್ಟಿ ನೂತನ, ಪಾರದರ್ಶಕ, ಪ್ರಾಮಾಣಿಕವಾಗಿ ಉದ್ಯಮ ಕೈಗೊಳ್ಳಲು ಸಹಕಾರಿಯಾಗಿದ್ದು, ಪರೋಕ್ಷ ಹಾಗೂ ಗೌಪ್ಯ ತೆರಿಗೆಯಿಂದ ಮುಕ್ತವಾಗಿದೆ. ಮಧ್ಯವರ್ತಿಗಳ ಉಪಟಳವಿಲ್ಲದೆ ಜನ ನೇರವಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸಬಹುದಾಗಿದೆ. ಜಿಎಸ್ಟಿಯಿಂದ ಮಾತ್ರ ಇಂಥ ಪಾರದರ್ಶಕತೆ ಕಾಣಬಹುದಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಜಿಎಸ್ಟಿ ಜನರಿಗೆ ಹತ್ತಿರವಾಗುತ್ತ ಹೋಗುತ್ತದೆ. ಗ್ರಾಹಕ ಸ್ನೇಹಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಉತ್ಪಾದಕರ ನಡುವೆ ಸ್ಪರ್ಧೆ ಉಂಟಾಗಲಿದ್ದು, ಉತ್ಪನ್ನಗಳ ದರದಲ್ಲಿ ಕಡಿಮೆಯಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಅಲ್ಲದೆ ಮುಂದಿನ ದಿನಗಳಲ್ಲಿ ನೂತನ ಗ್ರಾಹಕ ಹಿತರಕ್ಷಣಾ ಕಾನೂನು ಜಾರಿಗೊಳಿಸುವುದಾಗಿ ಮೋದಿ ಘೋಷಿಸಿದ್ದಾರೆ. ಸುಮ್ಮನೆ ಜಿಎಸ್ಟಿ ಬಗ್ಗೆ ಪೂರ್ವಗೃಹಪೀಡಿತರಾಗದೆ ಅಂಕಿ-ಅಂಶ ದೂರಾಲೋಚನೆ ನೋಡುವುದು ಮುಖ್ಯ.

 

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Tulunadu News January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Tulunadu News January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!

  • Privacy Policy
  • Contact
© Tulunadu Infomedia.

Press enter/return to begin your search