• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

48 ವರ್ಷಗಳಿಂದ ದಟ್ಟಾರಣ್ಯ ವಾಸಿಯಾಗಿದ್ದ ಕೆಂಚಪ್ಪ ಗೌಡ ನಿಧನ!

Tulunadu News Posted On October 30, 2017
0


0
Shares
  • Share On Facebook
  • Tweet It

ನಾಡಿಗೆ ಬರಲೊಪ್ಪದೇ ಕಾಡಿನ ವಾಸಿಯಾಗಿದ್ದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ನಿವಾಸಿ ಕೆಂಚಪ್ಪ ಗೌಡ ಆಕ್ಟೋಬರ್ 27 ರಂದು ನಿಧನರಾದರು.

ಮರ್ಕಂಜ ಗ್ರಾಮದ ಕುದನೆಕೋಡಿ ದೊಡ್ಡಣ್ಣ ಗೌಡ ಮತ್ತು ದುಗ್ಗಮ್ಮ ದಂಪತಿಯ ಪುತ್ರ ಕೆಂಚಪ್ಪ, ಕೃಷಿ ಕಾಯಕದಲ್ಲಿ ತೊಡಗಿದ್ದರು. ಕೆಂಚಪ್ಪ ಅವರು ಏಕಾಏಕಿ ತನ್ನ 23 ನೇ ವಯಸ್ಸಿನಲ್ಲಿ ತಮ್ಮ ಮನೆಯಿಂದ ಹೊರಟು ದಟ್ಟವಾದ ರಕ್ಷಿತಾರಣ್ಯದತ್ತ ತೆರಳಿ 48 ವರ್ಷಗಳ ಕಾಲ ಅರಣ್ಯ ವಾಸಿಯಾಗಿದ್ದರು.   ಕಾಡಿನಲ್ಲಿಯೇ ಗರಿಯ ಸೂರು ಮಾಡಿಕೊಂಡು, ಜೊಪಡಿ ಸುತ್ತಲೂ ಕಲ್ಲಿನ ಛಾವಣಿ ಮಾಡಿಕೊಂಡು , ಬಿದಿರಿನಿಂದ ಕೂಡಿದ ಮಂಚ, ಅಡಿಕೆಯ ಹಾಳೆ ಅವರ ಹಾಸಿಗೆಯಾಗಿತ್ತು.  ವೀಪರಿತ ಮಳೆ ಬಂದರೆ ಮರದ ಪೊಟರೆಯೇ ಅವರ ಆಶ್ರಯ ತಾಣವಾಗಿತ್ತು. ದಟ್ಡ ಕಾಡಿನಲ್ಲಿದ್ದರು ದಿನಕ್ಕೊಂದು ಬಾರಿ ಅರಣ್ಯದಿಂದ ಸೊಪ್ಪು ಕಟ್ಟಿಗೆಗಳನ್ನು ಸಹೋದರನ ಮನೆಗೆ ಒಪ್ಪಿಸಿ ಊಟ ಮಾಡಿ ತೆರಳುತ್ತಿದ್ದರು. ಉಳಿದ ಸಮಯದಲ್ಲಿ ಗೆಡ್ಡೆ ಗೆಣಸುಗಳೇ ಆಹಾರವಾಗಿದ್ದವು. ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯದ ಕಾರಣದಿಂದಾಗಿ ಅವರು ಒಂದು ವರ್ಷ ಹಿಂದೆ ತನ್ನ ಸಹೋದರನ ಮನೆಗೆ ಆಗಮಿಸಿದ್ದರು.

ಕಾಡು ಪ್ರಾಣಿಗಳು ಅವರ ಮೇಲೆ ದಾಳಿಮಾಡಲು ಬಂದಾಗ, ಕೆಂಚೆಪ್ಪ ಮರದ ಮೇಲೆ ಹತ್ತಿ, ಜೋರಾಗಿ ಶಬ್ದ ಮಾಡುವ ಮೂಲಕ ಅವುಗಳನ್ನು ಹೆದರಿಸಿ ಓಡಿಸುತಿದ್ದರು. 48 ವರ್ಷಗಳಲ್ಲಿ ಅವರು ಕಾಡಿನಲ್ಲಿ ವಾಸಿಸುತ್ತಿದ್ದರು, ಕೇವಲ ಎರಡು ಬಾರಿ ಆನೆಯಿಂದ ದಾಳಿಯಗಿತ್ತು, ಒಳಗೊಂಡಂತೆ ಕಾಡು ಪ್ರಾಣಿಗಳ ಆಕ್ರಮಣಗಳಿಂದ ತನ್ನನ್ನು ರಕ್ಷಿಸಿಕೊಂಡಿದ್ದರು.

ಬಂಧುಗಳು ಮತ್ತು ಜಿಲ್ಲಾದಿಕಾರಿಗಳು ಅವರನ್ನು ಕಾಡಿನಿಂದ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರೂ , ವಿಫಲವಾಗಿದ್ದು ಕಾಡೇ ಅವರ ಸರ್ವಸ್ವವಾಗಿತ್ತು.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search