• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

48 ವರ್ಷಗಳಿಂದ ದಟ್ಟಾರಣ್ಯ ವಾಸಿಯಾಗಿದ್ದ ಕೆಂಚಪ್ಪ ಗೌಡ ನಿಧನ!

Tulunadu News Posted On October 30, 2017
0


0
Shares
  • Share On Facebook
  • Tweet It

ನಾಡಿಗೆ ಬರಲೊಪ್ಪದೇ ಕಾಡಿನ ವಾಸಿಯಾಗಿದ್ದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ನಿವಾಸಿ ಕೆಂಚಪ್ಪ ಗೌಡ ಆಕ್ಟೋಬರ್ 27 ರಂದು ನಿಧನರಾದರು.

ಮರ್ಕಂಜ ಗ್ರಾಮದ ಕುದನೆಕೋಡಿ ದೊಡ್ಡಣ್ಣ ಗೌಡ ಮತ್ತು ದುಗ್ಗಮ್ಮ ದಂಪತಿಯ ಪುತ್ರ ಕೆಂಚಪ್ಪ, ಕೃಷಿ ಕಾಯಕದಲ್ಲಿ ತೊಡಗಿದ್ದರು. ಕೆಂಚಪ್ಪ ಅವರು ಏಕಾಏಕಿ ತನ್ನ 23 ನೇ ವಯಸ್ಸಿನಲ್ಲಿ ತಮ್ಮ ಮನೆಯಿಂದ ಹೊರಟು ದಟ್ಟವಾದ ರಕ್ಷಿತಾರಣ್ಯದತ್ತ ತೆರಳಿ 48 ವರ್ಷಗಳ ಕಾಲ ಅರಣ್ಯ ವಾಸಿಯಾಗಿದ್ದರು.   ಕಾಡಿನಲ್ಲಿಯೇ ಗರಿಯ ಸೂರು ಮಾಡಿಕೊಂಡು, ಜೊಪಡಿ ಸುತ್ತಲೂ ಕಲ್ಲಿನ ಛಾವಣಿ ಮಾಡಿಕೊಂಡು , ಬಿದಿರಿನಿಂದ ಕೂಡಿದ ಮಂಚ, ಅಡಿಕೆಯ ಹಾಳೆ ಅವರ ಹಾಸಿಗೆಯಾಗಿತ್ತು.  ವೀಪರಿತ ಮಳೆ ಬಂದರೆ ಮರದ ಪೊಟರೆಯೇ ಅವರ ಆಶ್ರಯ ತಾಣವಾಗಿತ್ತು. ದಟ್ಡ ಕಾಡಿನಲ್ಲಿದ್ದರು ದಿನಕ್ಕೊಂದು ಬಾರಿ ಅರಣ್ಯದಿಂದ ಸೊಪ್ಪು ಕಟ್ಟಿಗೆಗಳನ್ನು ಸಹೋದರನ ಮನೆಗೆ ಒಪ್ಪಿಸಿ ಊಟ ಮಾಡಿ ತೆರಳುತ್ತಿದ್ದರು. ಉಳಿದ ಸಮಯದಲ್ಲಿ ಗೆಡ್ಡೆ ಗೆಣಸುಗಳೇ ಆಹಾರವಾಗಿದ್ದವು. ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯದ ಕಾರಣದಿಂದಾಗಿ ಅವರು ಒಂದು ವರ್ಷ ಹಿಂದೆ ತನ್ನ ಸಹೋದರನ ಮನೆಗೆ ಆಗಮಿಸಿದ್ದರು.

ಕಾಡು ಪ್ರಾಣಿಗಳು ಅವರ ಮೇಲೆ ದಾಳಿಮಾಡಲು ಬಂದಾಗ, ಕೆಂಚೆಪ್ಪ ಮರದ ಮೇಲೆ ಹತ್ತಿ, ಜೋರಾಗಿ ಶಬ್ದ ಮಾಡುವ ಮೂಲಕ ಅವುಗಳನ್ನು ಹೆದರಿಸಿ ಓಡಿಸುತಿದ್ದರು. 48 ವರ್ಷಗಳಲ್ಲಿ ಅವರು ಕಾಡಿನಲ್ಲಿ ವಾಸಿಸುತ್ತಿದ್ದರು, ಕೇವಲ ಎರಡು ಬಾರಿ ಆನೆಯಿಂದ ದಾಳಿಯಗಿತ್ತು, ಒಳಗೊಂಡಂತೆ ಕಾಡು ಪ್ರಾಣಿಗಳ ಆಕ್ರಮಣಗಳಿಂದ ತನ್ನನ್ನು ರಕ್ಷಿಸಿಕೊಂಡಿದ್ದರು.

ಬಂಧುಗಳು ಮತ್ತು ಜಿಲ್ಲಾದಿಕಾರಿಗಳು ಅವರನ್ನು ಕಾಡಿನಿಂದ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರೂ , ವಿಫಲವಾಗಿದ್ದು ಕಾಡೇ ಅವರ ಸರ್ವಸ್ವವಾಗಿತ್ತು.

0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • 3
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search