• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದಿದಿ, ಠಾಕ್ರೆ ಭೇಟಿ ಇದಕ್ಕೆ ಕಾರಣ ಮೋದಿಯಿಂದಾದ ಉಂಟಾದ ಭೇದಿ

TNN Correspondent Posted On November 3, 2017
0


0
Shares
  • Share On Facebook
  • Tweet It

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮಾರಣ ಹೋಮ ನಡೆಸಿ, ಹಿಂದೂ ಹಬ್ಬಗಳ ಮೇಲೆ ತಡೆಯೊಡ್ಡುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಮಾಡಿ ನನ್ನದು ಅವರದ್ದು ಒಂದೇ ನಿಲುವು. ಹೀಗೆ ಹೇಳುತ್ತಿರುವುದು ಯಾರು ಗೊತ್ತೇ ಹಿಂದೂ ಹೃದಯ ಸಾಮ್ರಾಟ ಬಾಳಾ ಸಾಹೇಬ್ ಠಾಕ್ರೆ ಅವರ ಶಿವಸೇನೆಯ ಮುಖ್ಯಸ್ಥ ಉದ್ದವ ಠಾಕ್ರೆ. ಹೌದು ದೇಶದ ಯಾವುದೇ ಮೂಲೆಯಲ್ಲಿ ಹಿಂದೂಗಳ ಕೂದಲು ಸೊಂಕಿದರು ಸಿಡಿದೇಳುತ್ತಿದ್ದ ಬಾಳಾ ಸಾಹೇಬ್ ಠಾಕ್ರೆ ಅವರ ಸುಪುತ್ರ ಎಂಬುದೇ ಹಿಂದೂಸ್ಥಾನದ ದುರಂತ.

ದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದೂತ್ವದ ನಿಲುವು ಹೊಂದಿರುವ ಕೇಂದ್ರ ಸರಕಾರ ಮೋದಿ ನೇತೃತ್ವದಲ್ಲಿ ಅಸ್ತಿತ್ವದಲ್ಲಿದೆ. ಆದರೆ ತನ್ನ ಅಸ್ಥಿತ್ವದ ನೆಲೆ ಉಳಿಸಿಕೊಳ್ಳಲು ಬಡಿದಾಡುತ್ತಿರುವ ಉದ್ಧವ್ ಠಾಕ್ರೆ ಮತ್ತು ಮಮತಾ ದಿದಿ ಈಗ ಕೇವಲ ಅಧಿಕಾರಕ್ಕಾಗಿ ತಮ್ಮ ಪಕ್ಷದ ಉಳಿವಿಗಾಗಿ ಬಡಿದಾಡುತ್ತಿವೆ. ರಾಷ್ಟ್ರದ ಹಿತಾಸಕ್ತಿಗಾಗಿ ದುಡಿಯುತ್ತಿರುವ ಮೋದಿ ವಿರುದ್ಧ ಹೋರಾಡುವ ಸಂಚು ರೂಪಿಸುತ್ತಿರುವ ದಿದಿ ಮತ್ತು ಠಾಕ್ರೆ ತಮ್ಮ ನೆಲೆ ಭದ್ರ ಪಡಿಸಿಕೊಳ್ಳಲು ಅಡ್ಡ ದಾರಿ ಹಿಡಿದರೆ ಗೆಲವು ಸಾಧ್ಯವೇ ಎಂಬುದನ್ನು ಅರಿತುಕೊಳ್ಳಬೇಕು.

ವಾಣಿಜ್ಯ ನಗರಿಯಲ್ಲಿದ್ದುಕೊಂಡು ಕಾಶ್ಮೀರ ಪಂಡಿತರು, ಶ್ರೀರಾಮ ಮಂದಿರ, ಗುಜರಾತ್ ಗೋದ್ರಾ ಗಲಭೆ ಹೀಗೆ ಎಲ್ಲಿಯೇ ಹಿಂದೂಗಳ ವಿರುದ್ಧ ಮಾತು ಕೇಳಿಬಂದರೂ ಟೊಂಕಕಟ್ಟಿ ನಿಲ್ಲುತ್ತಿದ್ದರು ಬಾಳಾ ಸಾಹೇಬ್ ಠಾಕ್ರೆ. ಆದರೆ ಇಂದು ಉದ್ಧವ್ ಠಾಕ್ರೆ ದಸರಾ ಆಚರಣೆಗೆ ತಡೆ ಒಡ್ಡಿದ, ಬಾಂಗ್ಲಾ ನುಸುಳುಕೋಳರಿಗೆ ಆಶ್ರಯ ನೀಡಿದ, ಹಿಂದೂಗಳ ವಿರುದ್ಧ ಸದಾ ಷಡ್ಯಂತ್ರ ನಡೆಸುತ್ತಿರುವ ರೂಪಿಸುವ ಮಮತಾ ಜತೆ ಕೈ ಜೋಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದುವರೆಗೆ ಲಕ್ಷಾಂತರ ಹಿಂದೂಗಳ ಮಾರಣ ಹೋಮಕ್ಕೆ ಕಾರಣವಾದವರ ಜೊತೆಗೆ ಹೋಗುತ್ತಿರುವುದು ದುರಂತ.

ಟಾ ಟಾ ನ್ಯಾನೋ ಕಂಪನಿ ಘಟಕ ವಿರೋಧಿಸಿ, ರೈತರ ಜಮೀನು ರಕ್ಷಣೆ ಮಾಡಿದ್ದೇನೆ ಎಂದು ಅಧಿಕಾರಕ್ಕೆ ಬಂದವರು ತೃಣಮೂಲ ಕಾಂಗ್ರೆಸ್ ನ  ದಿದಿ. ಈಗ ಮುಂಬೈಯಲ್ಲಿ ಕೈಗಾರಿಕೆಗಳ ಕುರಿತು ಮಾಹಿತಿ ಪಡೆಯಲು ಬಂದ ದಿದಿ ಅದೇ ನೆಪದಲ್ಲಿ ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವುದಕ್ಕಾಗಿ ವಿರೋಧಿಸುವ ಠಾಕ್ರೆಯನ್ನು ಭೇಟಿ ಮಾಡಿದ್ದರ ಹಿಂದಿನ ಮರ್ಮವೇನು. ಇನ್ನು ಪಶ್ಚಿಮ ಬಂಗಾಳದಲ್ಲಿ ಜಾಗತೀಕ ಉದ್ಯಮ ಶೃಂಗ ಸಭೆ ನಡೆಸಲು ಸಿದ್ಧರಾಗಿದ್ದಾರೆ. ಅಂದರೆ ಅಲ್ಲಿಗೆ ಮತ್ತಿಷ್ಟು ರೈತರ ಭೂಮಿಗೆ ದಿದಿ ಕನ್ನ ಹಾಕುತ್ತಿದ್ದಾರೆ ಎಂದಾಯಿತು. ಹೀಗೆ ಅಧಿಕಾರಕ್ಕಾಗಿ ನಾಲಿಗೆ ಹರಿದ ಕಡೆ ಹೊರಳಾಡಿಸುವ ಮಮತಾಳನ್ನು ಭೇಟಿ ಮಾಡಿ, ಬಿಜೆಪಿ ಮತ್ತು ಮೋದಿ ವಿರುದ್ಧ ನಮ್ಮದು, ನಿಮ್ಮದು ಒಂದೇ ನಿಲುವು ಎನ್ನುತ್ತಿರಲ್ಲಾ ಠಾಕ್ರೆ ಅದೆಂಥ ದುರ್ಗತಿ ಬಂತು ನಿಮಗೆ.

ಹಿಂದೂ ಹೃದಯ ಸಾಮ್ರಾಟನಿಗೆ ಇರುವ ಮರ್ಯಾದೆಯನ್ನು ಕಾಪಾಡಿ ಇಲ್ಲವೇ ಸುಮ್ಮನಿರಿ. ನಿಮ್ಮ ಅಧಿಕಾರದ ತೆವಲಿಗಾಗಿ ಯಾರ್ಯಾರದ್ದೋ ಬೆಂಬಲಕ್ಕೆ ನಿಂತು, ಬಲಿಷ್ಟ ಸರಕಾರವನ್ನು ನಿಂದಿಸುವ ಹುಚ್ಚುತನ ಬೇಡ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search