• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನಿತೀಶ್ ಹೇಳಿದ ಮೇಲಾದರೂ ಎಚ್ಚೆತ್ತುಕೊಳ್ಳಿ ಸಿದ್ದರಾಮಯ್ಯ…

ರಮೇಶ ಗೌಡ ಹಾಸನ Posted On November 5, 2017
0


0
Shares
  • Share On Facebook
  • Tweet It

‘ಕರ್ನಾಟಕದಲ್ಲೂ ಮದ್ಯಪಾನ ನಿಷೇಧ ಕಾಯಿದೆ ಜಾರಿಗೆ ತನ್ನಿ’ ಹೀಗೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ. ಇತ್ತೀಚೆಗೆ ಬಿಹಾರದಲ್ಲಿ ಮದ್ಯಪಾನ ನಿಷೇಧಿಸಿದನ್ನು ಅಧ್ಯಯನ ಮಾಡಲು ರಾಜ್ಯದಿಂದ ತೆರಳಿದ್ದ ಮದ್ಯಪಾನ ಸಂಯಮ ಮಂಡಳಿಗೆ ನಿತೀಶ್ ಸಲಹೆ ನೀಡಿದ್ದಾರೆ.

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ನೇತೃತ್ವದ 35 ಜನರ ನಿಯೋಗ ಶುಕ್ರವಾರ ಅರ್ಧಗಂಟೆ ನಿತೀಶ್ ಚರ್ಚೆ ನಡೆಸಿದ್ದಾರೆ. ಆ ವೇಳೆ ‘ಮದ್ಯಪಾನ ನಿಷೇಧದಿಂದ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಅದರಿಂದ ಕರ್ನಾಟಕದ ಜನರಿಗೆ ಅನುಕೂಲವಾಗುತ್ತದೆ. ಸಿದ್ದರಾಮಯ್ಯ ಶೀಘ್ರದಲ್ಲಿ ಮದ್ಯಪಾನ ನಿಷೇಧ ಕಾಯಿದೆ ಜಾರಿಗೆ ತರಲಿ. ಅವರು ನನ್ನ ಸ್ನೇಹಿತ ಅವರಿಗೆ ಈ ಮಾತನ್ನು ತಿಳಿಸಿ ಎಂದು ಹೇಳಿದ್ದಾರೆ.

ಆದರೆ ಸದಾ ಸರಕಾರದ ಬೊಕ್ಕಸದ ಲೆಕ್ಕಾಚಾರದಲ್ಲೇ ದಿನಕಳೆಯುವ ಆರ್ಥಿಕ ಸಚಿವ ಸಿದ್ದರಾಮಯ್ಯ ಮದ್ಯಪಾನ ನಿಷೇಧದಂತ ಗಟ್ಟಿ ನಿರ್ಧಾರಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಿದ್ದರಾಮಯ್ಯನವರೇ ಕೊಡಬೇಕು. ಸಾಲದ ಸುಳಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಇದೆ ಎಂಬುದು ತಿಳಿದ ವಿಚಾರವೇ. ಇನ್ನು ಬಡವರ ಕುಟುಂಬ ನಾಶ ಮಾಡಿ ಬೊಕ್ಕಸ ತುಂಬುವ ಮದ್ಯಪಾನವನ್ನು ನಿಷೇಧಿಸುವ ಘನ ಕಾರ್ಯಕ್ಕೆ ಸಿದ್ದರಾಮಯ್ಯ ಮುಂದಾಗುವರೇ? ಅದು ಚುನಾವಣೆ ಹೊತ್ತಲ್ಲಿ.

ಕರ್ನಾಟಕದಲ್ಲಿ ಮದ್ಯಪಾನದಿಂದ ನಿತ್ಯ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅದೆಷ್ಟೋ ಹೆಂಗಸರೂ ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ.  ಮುಗ್ದ ಮಕ್ಕಳು ಕುಡುಕ ತಂದೆಯ ಚಟಕ್ಕೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಿತ್ಯ ನಶೆಯಲ್ಲಿ ಅದೆಷ್ಟೋ ಜೀವಗಳು ಹಾದಿ ಹೆಣವಾಗಿ ಹೋಗುತ್ತಿವೆ. ಅದೆಲ್ಲವನ್ನು ಗಮನಿಸಿಯಾದರೂ ಮದ್ಯ ನಿಷೇಧಕ್ಕೆ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಕಣ್ಣಿರಿಡುವ ಮುಗ್ದ ಮಕ್ಕಳ, ಮಹಿಳೆಯರ ಶಾಪ ತಟ್ಟದೆ ಇರದು.

ಸರಕಾರದ ಬೊಕ್ಕಸ ತುಂಬಿಸುವ ಹಪಾಹಪಿ ಬಿಟ್ಟು, ಕಳೆದ ಹದಿನೆಂಟು ತಿಂಗಳಿಂದ ಮದ್ಯಪಾನ ನಿಷೇಧಿಸಿ ಯಶಸ್ವಿಯಾಗಿ ಸರಕಾರ ನಡೆಸುತ್ತಿರುವ ಬಿಹಾರ ಸರಕಾರದ ಆಡಳಿತವನ್ನು ಮಾದರಿಯಾಗಿಟ್ಟುಕೊಳ್ಳಿ. ಅವರಿವರಿಂದ ಪಾಠ, ಸಲಹೆ ಕೇಳಿ, ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ನಿವೇಕೆ ಅದನ್ನು ಮಾದರಿಯಾಗಿಟ್ಟುಕೊಳ್ಳಬಾರದು?. ಮತ್ತೇ ಅಲ್ಲೂ ಎನ್ ಡಿಎ ಮಿತ್ರ ಪಕ್ಷ, ಬಿಜೆಪಿ ಜತೆ ಸೇರಿದ ನಿತೀಶ್ ಕುಮಾರ ಎಂದು ರಾಜಕೀಯ ಮಾಡಬೇಡಿ. ಸಲಹೆ ಸಕಾರಾತ್ಮಕವಾಗಿದೆ. ಅದನ್ನು ಜಾರಿಗೆ ತಂದು ಬಡವರಿಗೆ ಅಂಟಿರುವ ಕಂಟಕ ದೂರ ಮಾಡಿ. ಇಲ್ಲವೇ ಜನರೇ ನಿಮಗೆ ಕಂಟಕಕ್ಕೆ ದೂಡುತ್ತಾರೆ.

 

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
ರಮೇಶ ಗೌಡ ಹಾಸನ June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
ರಮೇಶ ಗೌಡ ಹಾಸನ June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search