• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮುಸ್ಲಿಂ ಆಟೋ ಡ್ರೈವರ್ ಮಗನಾದ ಆತ ಟೀಂ ಇಂಡಿಯಾ ಸೇರಿದ ಹಾಗೂ ರಾಷ್ಟ್ರಗೀತೆ ಮೊಳಗುತ್ತಲೇ ಕಣ್ಣೀರಿತ್ತ

TNN Correspondent Posted On November 5, 2017
0


0
Shares
  • Share On Facebook
  • Tweet It

 ನಾವಿಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ  ಮೊಳಗಿದರೆ ಎದ್ದು ನಿಲ್ಲಬೇಕೋ, ಬೇಡವೋ ಎಂದು ಚಿಂತಿಸುತ್ತಿದ್ದರೆ, ನಾನು ನಿಲ್ಲಲ್ಲ, ಏಕೆ ನಿಲ್ಲಬೇಕು ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದರೆ, ರಾಷ್ಟ್ರಗೀತೆ ಹಾಡಿಸೋಕೆ ಅದೇನು ಶಾಲೆಯೇ ಎಂದು ಎಲುಬಿಲ್ಲದ ನಾಲಗೆ ಹರಿಬಿಡುತ್ತಿದ್ದರೆ, ಅಲ್ಲೊಬ್ಬ 23ರ ಯುವಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಸೇರಿದ್ದ.

ನಿನ್ನೆ ರಾಜ್ ಕೋಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಅಂತಾರಾಷ್ಟ್ರೀಯ ಟ್ವೆಂಟಿ ಟ್ವೆಂಟಿ ಪಂದ್ಯದ ಆರಂಭಕ್ಕೂ ಮುನ್ನ ಕೋಚ್ ರವಿಶಾಸ್ತ್ರಿ ಅವನಿಗೆ ಟೀಂ ಇಂಡಿಯಾದ ಕ್ಯಾಪ್ ಕೊಟ್ಟರು.

ನಂತರ, ಜನಗಣಮನ ಮೊಳಗುತ್ತಲೇ ಆತ ಭಾವನೆ ತಡೆದುಕೊಳ್ಳಲಾಗಲಿಲ್ಲ. ಕಣ್ಣಲ್ಲಿ ನೀರು ಜಿನುಗುತ್ತಿದ್ದವು.

ಆತನ ಹೆಸರು ಮೊಹಮ್ಮದ್ ಸಿರಾಜ್.

ಬಡ ಮುಸ್ಲಿಮ್ ಆಟೋ ಡ್ರೈವರನ ಮಗನಾದ ಸಿರಾಜ್ 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿ, 2017ರಲ್ಲಿ ಐಪಿಎಲ್ ಗೂ ಕಾಲಿರಿಸಿದರು. ಆಗ ಬಂದ 2.4 ಕೋಟಿ ರೂ. ಕಂಡು ಖುಷಿಯಾದ ಈತ ಮೊದಲು ಅಪ್ಪ ಆಟೋ ಓಡಿಸುವುದನ್ನು ನಿಲ್ಲಿಸಿದ.

ಶನಿವಾರ ಆರಂಭವಾದ ಪಂದ್ಯದಲ್ಲಿ ಸಿರಾಜ್ ರಾಷ್ಟ್ರಗೀತೆ ಮೊಳಗುವಾಗ ಇದಕ್ಕಾಗಿಯೇ ಇಷ್ಟು ದಿನ ಶ್ರಮಿಸಿದೆ ಎಂಬ ಕಾರಣಕ್ಕಾಗಿಯೋ, ಕೊನೆಗೂ ಅಂತಾರಾಷ್ಟ್ರೀಯ ಪಂದ್ಯವೊಂದರ ಆರಂಭಕ್ಕೂ ಮೊದಲು ದೇಶಭಕ್ತಿ ಗೀತೆ ಕೇಳುವಂತಾಯಿತಲ್ಲ ಎಂಬ ಸಾರ್ಥಕ ಭಾವದಿಂದಲೋ, ದೇಶಕ್ಕಾಗಿ ಆಡುವ ಅವಕಾಶ ನನ್ನದಾಯಿತಲ್ಲ ಎಂಬ ಮನೋಭಾವನೆಯಿಂದಲೋ ಆತ ಸಿರಾಜ್ ಕಣ್ಣೀರಿಟ್ಟು ದೇಶದ ಮನಗೆದ್ದಿದ್ದಾನೆ.

ಈಗ ಸಿರಾಜ್ ರಾಷ್ಟ್ರಗೀತೆಗೆ ಕಣ್ಣೀರಟ್ಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗಿವೆ. ಸಿರಾಜ್ ದೇಶಭಕ್ತಿ ಹೀಗೆಯೇ ಇರಲಿ, ಆಶಿಶ್ ನೆಹ್ರಾ ಸ್ಥಾನವನ್ನು ಸಮರ್ಪಕವಾಗಿ ತುಂಬಿ ದೇಶಕ್ಕೆ ಕೀರ್ತಿ ತರಲಿ. ಹಾಗೆಯೇ ಗೆದ್ದಲು ಹಿಡಿದ ಮನಸ್ಸುಗಳಿಗೆ ಸಿರಾಜ್ ದೇಶಭಕ್ತಿ ಮಾದರಿಯಾಗಲಿ.

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search