• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮುಸ್ಲಿಂ ಆಟೋ ಡ್ರೈವರ್ ಮಗನಾದ ಆತ ಟೀಂ ಇಂಡಿಯಾ ಸೇರಿದ ಹಾಗೂ ರಾಷ್ಟ್ರಗೀತೆ ಮೊಳಗುತ್ತಲೇ ಕಣ್ಣೀರಿತ್ತ

TNN Correspondent Posted On November 5, 2017
0


0
Shares
  • Share On Facebook
  • Tweet It

 ನಾವಿಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ  ಮೊಳಗಿದರೆ ಎದ್ದು ನಿಲ್ಲಬೇಕೋ, ಬೇಡವೋ ಎಂದು ಚಿಂತಿಸುತ್ತಿದ್ದರೆ, ನಾನು ನಿಲ್ಲಲ್ಲ, ಏಕೆ ನಿಲ್ಲಬೇಕು ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದರೆ, ರಾಷ್ಟ್ರಗೀತೆ ಹಾಡಿಸೋಕೆ ಅದೇನು ಶಾಲೆಯೇ ಎಂದು ಎಲುಬಿಲ್ಲದ ನಾಲಗೆ ಹರಿಬಿಡುತ್ತಿದ್ದರೆ, ಅಲ್ಲೊಬ್ಬ 23ರ ಯುವಕ ಟೀಂ ಇಂಡಿಯಾ ಕ್ರಿಕೆಟ್ ತಂಡ ಸೇರಿದ್ದ.

ನಿನ್ನೆ ರಾಜ್ ಕೋಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಅಂತಾರಾಷ್ಟ್ರೀಯ ಟ್ವೆಂಟಿ ಟ್ವೆಂಟಿ ಪಂದ್ಯದ ಆರಂಭಕ್ಕೂ ಮುನ್ನ ಕೋಚ್ ರವಿಶಾಸ್ತ್ರಿ ಅವನಿಗೆ ಟೀಂ ಇಂಡಿಯಾದ ಕ್ಯಾಪ್ ಕೊಟ್ಟರು.

ನಂತರ, ಜನಗಣಮನ ಮೊಳಗುತ್ತಲೇ ಆತ ಭಾವನೆ ತಡೆದುಕೊಳ್ಳಲಾಗಲಿಲ್ಲ. ಕಣ್ಣಲ್ಲಿ ನೀರು ಜಿನುಗುತ್ತಿದ್ದವು.

ಆತನ ಹೆಸರು ಮೊಹಮ್ಮದ್ ಸಿರಾಜ್.

ಬಡ ಮುಸ್ಲಿಮ್ ಆಟೋ ಡ್ರೈವರನ ಮಗನಾದ ಸಿರಾಜ್ 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿ, 2017ರಲ್ಲಿ ಐಪಿಎಲ್ ಗೂ ಕಾಲಿರಿಸಿದರು. ಆಗ ಬಂದ 2.4 ಕೋಟಿ ರೂ. ಕಂಡು ಖುಷಿಯಾದ ಈತ ಮೊದಲು ಅಪ್ಪ ಆಟೋ ಓಡಿಸುವುದನ್ನು ನಿಲ್ಲಿಸಿದ.

ಶನಿವಾರ ಆರಂಭವಾದ ಪಂದ್ಯದಲ್ಲಿ ಸಿರಾಜ್ ರಾಷ್ಟ್ರಗೀತೆ ಮೊಳಗುವಾಗ ಇದಕ್ಕಾಗಿಯೇ ಇಷ್ಟು ದಿನ ಶ್ರಮಿಸಿದೆ ಎಂಬ ಕಾರಣಕ್ಕಾಗಿಯೋ, ಕೊನೆಗೂ ಅಂತಾರಾಷ್ಟ್ರೀಯ ಪಂದ್ಯವೊಂದರ ಆರಂಭಕ್ಕೂ ಮೊದಲು ದೇಶಭಕ್ತಿ ಗೀತೆ ಕೇಳುವಂತಾಯಿತಲ್ಲ ಎಂಬ ಸಾರ್ಥಕ ಭಾವದಿಂದಲೋ, ದೇಶಕ್ಕಾಗಿ ಆಡುವ ಅವಕಾಶ ನನ್ನದಾಯಿತಲ್ಲ ಎಂಬ ಮನೋಭಾವನೆಯಿಂದಲೋ ಆತ ಸಿರಾಜ್ ಕಣ್ಣೀರಿಟ್ಟು ದೇಶದ ಮನಗೆದ್ದಿದ್ದಾನೆ.

ಈಗ ಸಿರಾಜ್ ರಾಷ್ಟ್ರಗೀತೆಗೆ ಕಣ್ಣೀರಟ್ಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗಿವೆ. ಸಿರಾಜ್ ದೇಶಭಕ್ತಿ ಹೀಗೆಯೇ ಇರಲಿ, ಆಶಿಶ್ ನೆಹ್ರಾ ಸ್ಥಾನವನ್ನು ಸಮರ್ಪಕವಾಗಿ ತುಂಬಿ ದೇಶಕ್ಕೆ ಕೀರ್ತಿ ತರಲಿ. ಹಾಗೆಯೇ ಗೆದ್ದಲು ಹಿಡಿದ ಮನಸ್ಸುಗಳಿಗೆ ಸಿರಾಜ್ ದೇಶಭಕ್ತಿ ಮಾದರಿಯಾಗಲಿ.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search