• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಎಂದವರು ದೆಹಲಿ ಸ್ಥಿತಿಗೆ ಏನೆನ್ನುತ್ತೀರಿ?

ವಿನಯ್ ಕುಲ್ಕರ್ಣಿ, ಬೆಂಗಳೂರು Posted On November 12, 2017
0


0
Shares
  • Share On Facebook
  • Tweet It

ಹಿಂದೂಸ್ತಾನದಲ್ಲಿ ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ಹಿಂದೂಗಳ ಸಂಸ್ಕೃತಿ ಮೇಲೆ ಸತತ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಪರಿಸರ ಹಾನಿ, ಮೌಢ್ಯ ಎಂಬ ಪಟ್ಟ ಕಟ್ಟುತ್ತಾರೆ. ಆದರೆ ಅವರ ಪಟ್ಟಕಟ್ಟುವ ಪರದೇಶಿ ವಿಚಾರಗಳಿಗೆ ನೆಲೆ ಇಲ್ಲ, ಅದರಲ್ಲಿ ಸತ್ವವೂ ಇಲ್ಲ ಎಂಬುದಕ್ಕೆ ದೆಹಲಿ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಬೊಗಳಿದ ವಿಚಾರವಾದಿಗಳಿಗೆ ಪ್ರಸ್ತುತ ದೆಹಲಿಯಲ್ಲಿ ಉಂಟಾಗಿರುವ ವಿಷಮಯ ಸ್ಥಿತಿಯೇ ಸಾಕ್ಷಿಯಾಗಿ ನಿಂತಿದೆ. ದೆಹಲಿಯಲ್ಲಿ ಸರಿ, ಬೆಸ ಸಂಖ್ಯೆಯ ವಾಹನಗಳ ಓಡಾಟ ನಿಷೇಧಿಸುವ ನಿಯಮ ಜಾರಿಗೆ ತರಲಾಗಿದೆ. ದಿನೇ ದಿನೇ ಹದಗೆಡುತ್ತಿರುವ ಪರಿಸ್ಥಿತಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಆದರೆ ಇಲ್ಲಿ ಯಾರೂ ಪಟಾಕಿ ಹೊಡೆಯುತ್ತಿಲ್ಲ ಎಂಬುದು ಮಾತ್ರ ಕಠೋರ ವಾಸ್ತವ. ಸುಖಾ ಸುಮ್ಮನೇ ಹಿಂದೂ ಹಬ್ಬಗಳ ಮೇಲೆ ಮುಗಿ ಬೀಳುವ ಬುಜೀಗಳಿಗೆ ವಾಯುಮಾಲಿನ್ಯ ಪಟಾಕಿಯಿಂದಲ್ಲ, ಮಿತಿ ಮೀರಿದ ವಾಹನಗಳ ಬಳಕೆ, ಕೈಗಾರಿಕೆಗಳಿಂದ ಎಂಬುದು ಅರ್ಥವಾಗಬೇಕು.

ಇನ್ನು ಆಪ್ ಎಂಬ ಜನರಿಗಾಗದ ಆಪತ್ಬಾಂದವ ಕೇಜ್ರಿವಾಲ್ ‘ದೆಹಲಿ ಮಾಲಿನ್ಯಕ್ಕೆ, ಹರ್ಯಾಣ, ಗುಜರಾತ್ ನಲ್ಲಿ ರೈತರು ಸುಡುತ್ತಿರುವ ಹುಲ್ಲಿನ ಹೊಗೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ನಿಜವಾಗಿ ಪಟಾಕಿಯಿಂದಲೋ, ಹುಲ್ಲು ಸುಟ್ಟಿದ ಹೊಗೆಯಿಂದಲೋ ಪರಿಸ್ಥಿತಿ ವಿಷಮವಾಗುತ್ತದೆ ಎಂದು ಎಲ್ಲರೂ ಸೇರಿ ಯಾರದ್ದೋ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ವಾಸ್ತವವೇ ಬೇರೆಯಾಗಿರಬೇಕಾದರೆ ಪಟಾಕಿ ನೆಪವಷ್ಟೇ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತಲೇ ಕೆಲ ಪ್ರಶ್ನೆಗಳನ್ನು ನಾವು ವಿಚಾರವಾದಿಗಳಿಗೆ ಕೇಳಲೇಬೇಕು.

ದೀಪಾವಳಿ ಮುಗಿದು ತಿಂಗಳಾದರೂ, ಪಟಾಕಿ ನಿಷೇಧಿಸಿದರೂ ದೆಹಲಿಯ ಸ್ಥಿತಿ ಇಷ್ಟು ವಿಷಮವಾಗಲು ಕಾರಣವೇನು?

ಪಟಾಕಿಯೇ ಮಾಲಿನ್ಯಕ್ಕೆ ಕಾರಣ ಎಂದಾದಮೇಲೆ ನಿಷೇಧಿಸಿದರೂ ಅದ್ಹೇಗೆ ಇಂತಹ ಸ್ಥಿತಿ ನಿರ್ಮಾಣವಾಯಿತು?

ರೈತರು ಸುಡುವ ಹುಲ್ಲಿನಿಂದ ಹೊರಡುವ ಹೊಗೆಯಿಂದ ಅದ್ಹೇಗೆ ದೆಹಲಿ ಮೇಲೆ ದುಷ್ಪರಿಣಾಮ ಬೀರಿತು?0

ಮಾಲಿನ್ಯಕ್ಕೆ ಹುಲ್ಲಿನ ಹೊಗೆ, ಪಟಾಕಿ ಎನ್ನುವವರು ಮತ್ತೇಕೆ, ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದೀರಿ?

ವಾಸ್ತವದಲ್ಲಿ ಕೈಗಾರಿಕೆಗಳು, ಮಿತಿ ಮೀರಿದ ವಾಹನಗಳೇ ವಾಯುಮಾಲಿನ್ಯಕ್ಕೆ ಕಾರಣವಲ್ಲವೇ?

ಸರಕಾರ ಬಂದು ಇಷ್ಟು ವರ್ಷಗಳಾದರೂ ಪ್ರತಿ ವರ್ಷ ಎದುರಾಗುವ ವಿಷಮ ಸ್ಥಿತಿಗೆ ಶಾಶ್ವತ ಕ್ರಮವೇನು ಕೈಗೊಂಡಿದ್ಧೀರಿ?

ವಾಯುಮಾಲಿನ್ಯಕ್ಕೆ ಮೋದಿ ಕಾರಣ ಎನ್ನುವ ಬುಜೀ ರಾಮಚಂದ್ರ ಗುಹಾ ವಾದ ಅದೆಷ್ಟು ಹೀನವೆನಿಸುವುದಿಲ್ಲವೇ?

ರೈತರ ಮೇಲೆ ಗೂಬೆ ಕೂರಿಸುವ ಮುನ್ನ ದೆಹಲಿ ಸ್ಥಿತಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕಲ್ಲವೇ?

ಕೇವಲ ಆಪತ್ತು ಬಂದಾಗ ವಾಹನ ನಿಷೇಧ ಮಾಡುವ ನಾಟಕ ಮಾಡುವುದೇ ಪರಿಹಾರವೇ?

ಇನ್ನು ಪಟಾಕಿ ನಿಷೇಧಿಸುವ ಬರದಲ್ಲಿ ವಾಸ್ತವ ಸಮಸ್ಯೆಯನ್ನೇ ಮರೆತುಬಿಡಲಾಯಿತೇ?

ಮೂರು ದಿನ ಸಿಡಿಸುವ ಪಟಾಕಿಯಿಂದ ಅದೆಷ್ಟೂ ಮಾಲಿನ್ಯವಾದಿತೂ?

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
ವಿನಯ್ ಕುಲ್ಕರ್ಣಿ, ಬೆಂಗಳೂರು November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
ವಿನಯ್ ಕುಲ್ಕರ್ಣಿ, ಬೆಂಗಳೂರು November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search