• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಎಂದವರು ದೆಹಲಿ ಸ್ಥಿತಿಗೆ ಏನೆನ್ನುತ್ತೀರಿ?

ವಿನಯ್ ಕುಲ್ಕರ್ಣಿ, ಬೆಂಗಳೂರು Posted On November 12, 2017
0


0
Shares
  • Share On Facebook
  • Tweet It

ಹಿಂದೂಸ್ತಾನದಲ್ಲಿ ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ಹಿಂದೂಗಳ ಸಂಸ್ಕೃತಿ ಮೇಲೆ ಸತತ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಪರಿಸರ ಹಾನಿ, ಮೌಢ್ಯ ಎಂಬ ಪಟ್ಟ ಕಟ್ಟುತ್ತಾರೆ. ಆದರೆ ಅವರ ಪಟ್ಟಕಟ್ಟುವ ಪರದೇಶಿ ವಿಚಾರಗಳಿಗೆ ನೆಲೆ ಇಲ್ಲ, ಅದರಲ್ಲಿ ಸತ್ವವೂ ಇಲ್ಲ ಎಂಬುದಕ್ಕೆ ದೆಹಲಿ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಬೊಗಳಿದ ವಿಚಾರವಾದಿಗಳಿಗೆ ಪ್ರಸ್ತುತ ದೆಹಲಿಯಲ್ಲಿ ಉಂಟಾಗಿರುವ ವಿಷಮಯ ಸ್ಥಿತಿಯೇ ಸಾಕ್ಷಿಯಾಗಿ ನಿಂತಿದೆ. ದೆಹಲಿಯಲ್ಲಿ ಸರಿ, ಬೆಸ ಸಂಖ್ಯೆಯ ವಾಹನಗಳ ಓಡಾಟ ನಿಷೇಧಿಸುವ ನಿಯಮ ಜಾರಿಗೆ ತರಲಾಗಿದೆ. ದಿನೇ ದಿನೇ ಹದಗೆಡುತ್ತಿರುವ ಪರಿಸ್ಥಿತಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಆದರೆ ಇಲ್ಲಿ ಯಾರೂ ಪಟಾಕಿ ಹೊಡೆಯುತ್ತಿಲ್ಲ ಎಂಬುದು ಮಾತ್ರ ಕಠೋರ ವಾಸ್ತವ. ಸುಖಾ ಸುಮ್ಮನೇ ಹಿಂದೂ ಹಬ್ಬಗಳ ಮೇಲೆ ಮುಗಿ ಬೀಳುವ ಬುಜೀಗಳಿಗೆ ವಾಯುಮಾಲಿನ್ಯ ಪಟಾಕಿಯಿಂದಲ್ಲ, ಮಿತಿ ಮೀರಿದ ವಾಹನಗಳ ಬಳಕೆ, ಕೈಗಾರಿಕೆಗಳಿಂದ ಎಂಬುದು ಅರ್ಥವಾಗಬೇಕು.

ಇನ್ನು ಆಪ್ ಎಂಬ ಜನರಿಗಾಗದ ಆಪತ್ಬಾಂದವ ಕೇಜ್ರಿವಾಲ್ ‘ದೆಹಲಿ ಮಾಲಿನ್ಯಕ್ಕೆ, ಹರ್ಯಾಣ, ಗುಜರಾತ್ ನಲ್ಲಿ ರೈತರು ಸುಡುತ್ತಿರುವ ಹುಲ್ಲಿನ ಹೊಗೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ನಿಜವಾಗಿ ಪಟಾಕಿಯಿಂದಲೋ, ಹುಲ್ಲು ಸುಟ್ಟಿದ ಹೊಗೆಯಿಂದಲೋ ಪರಿಸ್ಥಿತಿ ವಿಷಮವಾಗುತ್ತದೆ ಎಂದು ಎಲ್ಲರೂ ಸೇರಿ ಯಾರದ್ದೋ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ವಾಸ್ತವವೇ ಬೇರೆಯಾಗಿರಬೇಕಾದರೆ ಪಟಾಕಿ ನೆಪವಷ್ಟೇ.

ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತಲೇ ಕೆಲ ಪ್ರಶ್ನೆಗಳನ್ನು ನಾವು ವಿಚಾರವಾದಿಗಳಿಗೆ ಕೇಳಲೇಬೇಕು.

ದೀಪಾವಳಿ ಮುಗಿದು ತಿಂಗಳಾದರೂ, ಪಟಾಕಿ ನಿಷೇಧಿಸಿದರೂ ದೆಹಲಿಯ ಸ್ಥಿತಿ ಇಷ್ಟು ವಿಷಮವಾಗಲು ಕಾರಣವೇನು?

ಪಟಾಕಿಯೇ ಮಾಲಿನ್ಯಕ್ಕೆ ಕಾರಣ ಎಂದಾದಮೇಲೆ ನಿಷೇಧಿಸಿದರೂ ಅದ್ಹೇಗೆ ಇಂತಹ ಸ್ಥಿತಿ ನಿರ್ಮಾಣವಾಯಿತು?

ರೈತರು ಸುಡುವ ಹುಲ್ಲಿನಿಂದ ಹೊರಡುವ ಹೊಗೆಯಿಂದ ಅದ್ಹೇಗೆ ದೆಹಲಿ ಮೇಲೆ ದುಷ್ಪರಿಣಾಮ ಬೀರಿತು?0

ಮಾಲಿನ್ಯಕ್ಕೆ ಹುಲ್ಲಿನ ಹೊಗೆ, ಪಟಾಕಿ ಎನ್ನುವವರು ಮತ್ತೇಕೆ, ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದೀರಿ?

ವಾಸ್ತವದಲ್ಲಿ ಕೈಗಾರಿಕೆಗಳು, ಮಿತಿ ಮೀರಿದ ವಾಹನಗಳೇ ವಾಯುಮಾಲಿನ್ಯಕ್ಕೆ ಕಾರಣವಲ್ಲವೇ?

ಸರಕಾರ ಬಂದು ಇಷ್ಟು ವರ್ಷಗಳಾದರೂ ಪ್ರತಿ ವರ್ಷ ಎದುರಾಗುವ ವಿಷಮ ಸ್ಥಿತಿಗೆ ಶಾಶ್ವತ ಕ್ರಮವೇನು ಕೈಗೊಂಡಿದ್ಧೀರಿ?

ವಾಯುಮಾಲಿನ್ಯಕ್ಕೆ ಮೋದಿ ಕಾರಣ ಎನ್ನುವ ಬುಜೀ ರಾಮಚಂದ್ರ ಗುಹಾ ವಾದ ಅದೆಷ್ಟು ಹೀನವೆನಿಸುವುದಿಲ್ಲವೇ?

ರೈತರ ಮೇಲೆ ಗೂಬೆ ಕೂರಿಸುವ ಮುನ್ನ ದೆಹಲಿ ಸ್ಥಿತಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕಲ್ಲವೇ?

ಕೇವಲ ಆಪತ್ತು ಬಂದಾಗ ವಾಹನ ನಿಷೇಧ ಮಾಡುವ ನಾಟಕ ಮಾಡುವುದೇ ಪರಿಹಾರವೇ?

ಇನ್ನು ಪಟಾಕಿ ನಿಷೇಧಿಸುವ ಬರದಲ್ಲಿ ವಾಸ್ತವ ಸಮಸ್ಯೆಯನ್ನೇ ಮರೆತುಬಿಡಲಾಯಿತೇ?

ಮೂರು ದಿನ ಸಿಡಿಸುವ ಪಟಾಕಿಯಿಂದ ಅದೆಷ್ಟೂ ಮಾಲಿನ್ಯವಾದಿತೂ?

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
ವಿನಯ್ ಕುಲ್ಕರ್ಣಿ, ಬೆಂಗಳೂರು May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
ವಿನಯ್ ಕುಲ್ಕರ್ಣಿ, ಬೆಂಗಳೂರು May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search