ರಾಹುಲ್ ಗಾಂಧಿ ನಾಯಕತ್ವದ ಕುರಿತು ಸರ್ದಾರ್ ವಲ್ಲಭಭಾಯಿ ಪಟೇಲ್ ಮೊಮ್ಮಗ ಹೇಗೆ ಟೀಕಿಸಿದ್ದಾರೆ ಗೊತ್ತಾ?
Posted On November 16, 2017

ದೆಹಲಿ: ಕಾಂಗ್ರೆಸ್ಸಿನ ಪ್ರತಿನಿಧಿಯಾಗಿಯೇ ದೇಶದ ಮೊದಲ ಉಪ ಪ್ರಧಾನಿ, ದೇಶವನ್ನು ಒಗ್ಗೂಡಿಸಿದ ನಾಯಕ ಎಂದೇ ಖ್ಯಾತಿಯಾದ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೊಮ್ಮಗನೇ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಟೀಕಿಸಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಪ್ರಸ್ತುತ ದೇಶದ ಒಳಿತಿಗಾಗಿ ಕೆಲಸ ಮಾಡುವ ಯಾವ ನಾಯಕನೂ ಇಲ್ಲ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿದ್ದಾಗಿನ ಕಾಂಗ್ರೆಸ್ ಸಹ ಈಗ ಅಸ್ತಿತ್ವದಲ್ಲಿಲ್ಲ ಎಂದು ಸುಧೀರ್ ಪಟೇಲ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲರೂ ಜವಾಹರ್ ಲಾಲ್ ನೆಹರೂ ಅವರು ಕಾಶ್ಮೀರದ ವಿಷಯದಲ್ಲಿ ಅನುಸರಿಸಿದ ಸಡಿಲ ನೀತಿ ಬಗ್ಗೆಯೂ ಬಹಿರಂಗವಾಗಿಯೇ ಅವರ ಎದುರು ಆಕ್ಷೇಪ ವ್ಯಕ್ತಪಡಿಸಿ ದಿಟ್ಟತನ ತೋರಿಸಿದ್ದರು. ಈಗ ಅವರ ಮೊಮ್ಮಗ ಸುಧೀರ್ ಪಟೇಲ್, ಕಾಂಗ್ರೆಸ್ಸಿನ ದುಸ್ಥಿತಿ ಹಾಗೂ ರಾಹುಲ್ ಗಾಂಧಿಯವರ ಅಪ್ರಬುದ್ಧ ನಾಯಕತ್ವದ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ.
- Advertisement -
Leave A Reply