• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಾನೇಕೆ ಮತ್ತೆ ಬಿಜೆಪಿ ಸೇರಿದೆ ಗೊತ್ತಾ: ಮೋದಿ ಜತೆ ಕೈ ಜೋಡಿಸಿದ್ದಕ್ಕೆ ಕಾರಣ ತಿಳಿಸಿದ ನಿತೀಶ್ ಕುಮಾರ್

TNN Correspondent Posted On November 18, 2017
0


0
Shares
  • Share On Facebook
  • Tweet It

ಪಟನಾ: ರಾಜಕೀಯದಲ್ಲಿ ಬರೀ ಅಧಿಕಾರಕ್ಕೆ ಯಾರು ಯಾರ ಜತೆ ಬೇಕಾದರೂ ಕೈ ಜೋಡಿಸುತ್ತಾರೆ ಎಂಬುದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮಾತು. ಅವರು ಯಾಕೆ ಬೇರೆ ಪಕ್ಷದೊಂದಿಗೆ ಕೈ ಜೋಡಿಸಿದರೂ ಎಂದೂ ಸಹ ಜನರಿಗೆ ಹೇಳದಿರುವ ಕಾರಣ ಇವರು ಅಧಕಾರಕ್ಕಾಗಿಯೇ ಕೈ ಜೋಡಿಸಿದರು ಎಂದು ಜನರೂ ಭಾವಿಸುತ್ತಾರೆ, ವಾಸ್ತವದಲ್ಲೂ ಅದೇ ಆಗಿರುತ್ತದೆ.

ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಇಂಥ ಸಂಪ್ರದಾಯಕ್ಕೆ ವಿದಾಯ ಹೇಳಿದ್ದು, ಅವರೇಕೆ ಲಾಲೂ ಪ್ರಸಾದ್ ಯಾದವ್ ಸಂಗ ಬಿಟ್ಟು ಬಿಜೆಪಿ ಹಾಗೂ ಪ್ರಧಾನಿ ಮೋದಿ ಜತೆ ಕೈ ಜೋಡಿಸಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಿಂಬಾಗಿಲಿನಿಂದ ದೇಶವನ್ನಾಳದೆ, ಜನರಿಗೆ ನೇರವಾಗಿ ಆಡಳಿತ ನಡೆಸುತ್ತಾರೆ. ಹೀಗೆ ನೇರ ಆಡಳಿತ ಮಾಡುವುದರಿಂದ ಒಳ್ಳೆಯದಾದರೂ ಅವರನ್ನು ಹೊಗಳುತ್ತಾರೆ ಹಾಗೂ ಕೆಟ್ಟದಾದರೂ ಅವರನ್ನೇ ಹೊಗಳುತ್ತಾರೆ. ಹೀಗಿರುವಾಗ ನರೇಂದ್ರ ಮೋದಿ ಅವರು ಛಾತಿಯಿಂದ ಆಡಳಿತ ನಡೆಸುತ್ತಾರೆ ಎಂದು ನಿತೀಶ್ ಹೇಳಿದ್ದಾರೆ.

ಹೀಗೆ ಹಿಂದಿನ ಪಕ್ಷ ಜನರ ಜತೆಯಿದ್ದು, ನೇರವಾಗಿ ಆಡಳಿತ ನಡೆಸದೆ ಹಿಂಬಾಗಲಿನಿಂದ ಆಡಳಿತ ನಡೆಸಿತು. ಒಳ್ಳೆಯದಾದದರೆ ಅದರ ಕ್ರೆಡಿಟ್ ತಾವು ಪಡೆದು, ಕೆಡುಕಾದರೆ ಬೇರೆಯವರ ತಲೆಗೆ ಕಟ್ಟುತ್ತಿತ್ತು ಎಂದು ಕಾಂಗ್ರೆಸ್ಸಿಗೂ ನಿತೀಶ್ ಟಾಂಗ್ ನೀಡಿದ್ದಾರೆ.

ಅಲ್ಲದೆ, ನರೇಂದ್ರ ಮೋದಿ ಅವರು ಘೋಷಿಸಿದ ನೋಟು ನಿಷೇಧ ಅತ್ಯಂತ ಮಹತ್ವ ಪೂರ್ಣ ನಿರ್ಧಾರವಾಗಿದೆ. 2016ರ ನ.8ರಂದು ಮೋದಿ ಅವರು ತೆಗೆದುಕೊಂಡ ನಿರ್ಧಾರದಿಂದ ಇಡೀ ದೇಶದ ಚಹರೆಯೇ ಬದಲಾಯಿತು. ಈ ಎಲ್ಲ ಕಾರಣಗಳಿಂದ ನರೇಂದ್ರ ಮೋದಿ ಅವರನ್ನ ಬೆಂಬಲಿಸಲಾಯಿತು ಎಂದು ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search