• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅಮರನಾಥದಲ್ಲಿ ಗಂಟೆಯಿಂದ  ಶಬ್ದಮಾಲಿನ್ಯ ಎಂದ ಹಸಿರು ನ್ಯಾಯಪೀಠಕ್ಕೆ ಮಸೀದಿಗಳ ಮೇಲಿನ ಮೈಕಾಸುರ ಕಾಣಲಿಲ್ಲವೇ

-ಆಯುಷ್ ಕೃಷ್ಣ. ಯಲ್ಲಾಪುರ Posted On November 19, 2017
0


0
Shares
  • Share On Facebook
  • Tweet It

ಕೋಟ್ಯಂತರ ಭಾರತೀಯರ ನಂಬಿಕೆ, ಶ್ರದ್ಧೆ, ಭಕ್ತಿಯ ತಾಣ ಅಮರನಾಥದಲ್ಲಿ ಶಬ್ದಮಾಲಿನ್ಯ ವಲಯ (ಸೈಲೆಂಟ್ ಜೋನ್) ಎಂದು ಹಸಿರು ನ್ಯಾಯ ಪೀಠ ಘೋಷಿಸಿದೆ. ಈ ಘೋಷಣೆ ಪ್ರಕಾರ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು, ಜೋರಾಗಿ ಮಾತನಾಡಬಾರದು, ಟೆಂಗಿನ ಕಾಯಿ ಒಡೆಯಬಾರದು. ಶಬ್ದಮಾಲಿನ್ಯದಿಂದ ಹಿಮಕುಸಿತವಾಗುತ್ತದೆ ಎಂದು ಆದೇಶಿಸಿದೆ.

ಅಮರನಾಥ್ ಸದಾ ಮಂಜುಗಡ್ಡೆಗಳಿಂದ ಕೂಡಿದ ಅಪಾಯದ ತುದಿಗಾಲಲ್ಲಿ ಇರುವ ಹಿಮಾವೃತ ಪ್ರದೇಶ ಅಮರನಾಥ್. ಇಲ್ಲಿ ಚಳಿಗಾಲದಲ್ಲಿ ನಿತ್ಯ ಸಾವಿರಾರು ದೇವರ ದರ್ಶನಕ್ಕೆ ಬರುತ್ತಾರೆ. ಅವರೆಲ್ಲರ ಪ್ರಾಣ ರಕ್ಷಣೆ ಮುಖ್ಯ.ಸ್ವಲ್ಪ ಏರುಪೇರಾದರೂ ಹಿಮಕುಸಿತದಿಂದ ಎಲ್ಲರ ಪ್ರಾಣ ಪಕ್ಷಿ ಹಾರಿಹೋಗುವುದು ನಿಶ್ಚಿತ.

ಆದರೆ ಹಸಿರು ನ್ಯಾಯಪೀಠದ ಈ ಆದೇಶ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕದೆ ಇರದು. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ, ಟೆಂಗು ಒಡೆಯುವುದರಿಂದ, ಜೋರಾಗಿ ಮಾತನಾಡುವುದರಿಂದ ಹಿಮ ಕುಸಿತವಾಗುತ್ತದೆ ಎಂಬ ವಿಷಯವೇ ಪ್ರಶ್ನಾರ್ಹ. ಸದಾ ಹಿಂದೂಗಳ ಹಬ್ಬಗಳು, ಆಚರಣೆಗಳು, ಸಂಸ್ಕೃತಿ, ದೇವಸ್ಥಾನಗಳ ಮೇಲೆಯೇ ಹಸಿರುವಾದಿಗಳ ಕಣ್ಣು ಬಿದ್ದಿರುವುದು ಮಾತ್ರ ದುರಂತ. ಇವರಿಗೆಲ್ಲರಿಗೂ ಬೇರೆ ಧರ್ಮದ ಅಂಧಾಚರಣೆಗಳು ಕಾಣುವುದಿಲ್ಲವೇ?

ಕಾಶ್ಮೀರದ ಅಮರನಾಥ್ ದಲ್ಲಿ ಗಂಟೆ ಬಾರಿಸಿದರೆ ಹಿಮಕುಸಿತವಾಗುತ್ತದೆ ಎನ್ನುವ ಹಸಿರು ನ್ಯಾಯಪೀಠಕ್ಕೆ ಇಡೀ ಜಮ್ಮು ಮತ್ತು ಕಾಶ್ಮೀರದ ಗಲ್ಲಿ ಗಲ್ಲಿಯಲ್ಲಿರುವ ಮಸೀದಿಗಳ ಮೇಲೆ ನಿತ್ಯ ಕಿವಿ ತಮಟೆ ಒಡೆಯುವಂತೆ ಅರಚುವ ಮೈಕಾಸುರನಿಂದ ಹೊರಹೊಮ್ಮುವ ಭಯಂಕರ ಶಬ್ದದಿಂದ ಹಿಮಕುಸಿತವಾಗುವುದಿಲ್ಲವೇ, ಶಬ್ದಮಾಲಿನ್ಯವಾಗುವುದಿಲ್ಲವೇ?

ಬರೀ ದೇವಸ್ಥಾನದಲ್ಲಿರುವ ಗಂಟೆ ಬಾರಿಸುವುದರಿಂದ ಹಿಮಕುಸಿತವಾಗುತ್ತದೆ ಎಂದಾದರೆ ಮಸೀದಿ ಮೇಲೆ ಅರಚುವ ಮೈಕಾಸುರನಿಂದ ಹಿಮಕುಸಿತವಾಗುವ ಭೀತಿ ಹುಟ್ಟಬೇಕಲ್ಲವೇ? ಇತ್ತೀಚೆಗೆ ಸಂಗೀತಗಾರ ಸೋನು ನಿಗಮ ಮಸೀದಿಯಿಂದ ಹೊರಡುವ ಅಜಾನ್ ನಿಂದ ಹೊರಡುವ ಶಬ್ದದಿಂದ ಕಿರಿಕಿರಿಯಾಗುತ್ತದೆ ಎಂದಿದಕ್ಕೆ ಫತ್ವಾ ಹೊರಡಿಸಿದ್ದ ದುರುಳಿರುವ ನಾಡಿನಲ್ಲಿ, ದೇವಸ್ಥಾನ ಗಂಟೆ ಬಾರಿಸಿದರೇ ಅದ್ಯಾವ ಮಟ್ಟಕ್ಕೆ ಭೂಮಿ ನಡುಗುತ್ತೇ ಎಂಬುದನ್ನು ಹಸಿರು ನ್ಯಾಯ ಪೀಠ ಬಹಿರಂಗಪಡಿಸಬೇಕು.

ಹಿಂದೂ ಧರ್ಮ ಬದಲಾವಣೆಗಳಿಗೆ ಸದಾ ಮೈತೆರೆದುಕೊಳ್ಳುತ್ತದೆ. ಇಲ್ಲಿನ ಎಲ್ಲವೂ ಮೌಢ್ಯ ಎಂಬಂತೆ ಈಗ ದೇವಸ್ಥಾನದ ಗಂಟೆ ಮೇಲೆ ಪರಿಸರವಾದಿಗಳು ಕಣ್ಣಿಟ್ಟಿರುವುದು ದೊಡ್ಡ ದುರಂತ. ಗಂಟೆ ನಿಷೇಧಿಸಿದಂತೆ ಮಸೀದಿ ಮೇಲೆ ಅಜಾನ್ ಅರಚುವ ಮೈಕಾಸುರನ ಹಾವಳಿ, ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಗಬೇಕು. ಆಗ ಪರಿಸರವಾದಿಗಳ ವಾದದಲ್ಲಿ ಹುರುಳಿದೆ ಎಂಬುದನ್ನು ಸಾಬೀತು ಮಾಡಿದಂತಾಗುತ್ತದೆ.

 

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
-ಆಯುಷ್ ಕೃಷ್ಣ. ಯಲ್ಲಾಪುರ November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
-ಆಯುಷ್ ಕೃಷ್ಣ. ಯಲ್ಲಾಪುರ November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search