• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅಮರನಾಥದಲ್ಲಿ ಗಂಟೆಯಿಂದ  ಶಬ್ದಮಾಲಿನ್ಯ ಎಂದ ಹಸಿರು ನ್ಯಾಯಪೀಠಕ್ಕೆ ಮಸೀದಿಗಳ ಮೇಲಿನ ಮೈಕಾಸುರ ಕಾಣಲಿಲ್ಲವೇ

-ಆಯುಷ್ ಕೃಷ್ಣ. ಯಲ್ಲಾಪುರ Posted On November 19, 2017
0


0
Shares
  • Share On Facebook
  • Tweet It

ಕೋಟ್ಯಂತರ ಭಾರತೀಯರ ನಂಬಿಕೆ, ಶ್ರದ್ಧೆ, ಭಕ್ತಿಯ ತಾಣ ಅಮರನಾಥದಲ್ಲಿ ಶಬ್ದಮಾಲಿನ್ಯ ವಲಯ (ಸೈಲೆಂಟ್ ಜೋನ್) ಎಂದು ಹಸಿರು ನ್ಯಾಯ ಪೀಠ ಘೋಷಿಸಿದೆ. ಈ ಘೋಷಣೆ ಪ್ರಕಾರ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು, ಜೋರಾಗಿ ಮಾತನಾಡಬಾರದು, ಟೆಂಗಿನ ಕಾಯಿ ಒಡೆಯಬಾರದು. ಶಬ್ದಮಾಲಿನ್ಯದಿಂದ ಹಿಮಕುಸಿತವಾಗುತ್ತದೆ ಎಂದು ಆದೇಶಿಸಿದೆ.

ಅಮರನಾಥ್ ಸದಾ ಮಂಜುಗಡ್ಡೆಗಳಿಂದ ಕೂಡಿದ ಅಪಾಯದ ತುದಿಗಾಲಲ್ಲಿ ಇರುವ ಹಿಮಾವೃತ ಪ್ರದೇಶ ಅಮರನಾಥ್. ಇಲ್ಲಿ ಚಳಿಗಾಲದಲ್ಲಿ ನಿತ್ಯ ಸಾವಿರಾರು ದೇವರ ದರ್ಶನಕ್ಕೆ ಬರುತ್ತಾರೆ. ಅವರೆಲ್ಲರ ಪ್ರಾಣ ರಕ್ಷಣೆ ಮುಖ್ಯ.ಸ್ವಲ್ಪ ಏರುಪೇರಾದರೂ ಹಿಮಕುಸಿತದಿಂದ ಎಲ್ಲರ ಪ್ರಾಣ ಪಕ್ಷಿ ಹಾರಿಹೋಗುವುದು ನಿಶ್ಚಿತ.

ಆದರೆ ಹಸಿರು ನ್ಯಾಯಪೀಠದ ಈ ಆದೇಶ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕದೆ ಇರದು. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ, ಟೆಂಗು ಒಡೆಯುವುದರಿಂದ, ಜೋರಾಗಿ ಮಾತನಾಡುವುದರಿಂದ ಹಿಮ ಕುಸಿತವಾಗುತ್ತದೆ ಎಂಬ ವಿಷಯವೇ ಪ್ರಶ್ನಾರ್ಹ. ಸದಾ ಹಿಂದೂಗಳ ಹಬ್ಬಗಳು, ಆಚರಣೆಗಳು, ಸಂಸ್ಕೃತಿ, ದೇವಸ್ಥಾನಗಳ ಮೇಲೆಯೇ ಹಸಿರುವಾದಿಗಳ ಕಣ್ಣು ಬಿದ್ದಿರುವುದು ಮಾತ್ರ ದುರಂತ. ಇವರಿಗೆಲ್ಲರಿಗೂ ಬೇರೆ ಧರ್ಮದ ಅಂಧಾಚರಣೆಗಳು ಕಾಣುವುದಿಲ್ಲವೇ?

ಕಾಶ್ಮೀರದ ಅಮರನಾಥ್ ದಲ್ಲಿ ಗಂಟೆ ಬಾರಿಸಿದರೆ ಹಿಮಕುಸಿತವಾಗುತ್ತದೆ ಎನ್ನುವ ಹಸಿರು ನ್ಯಾಯಪೀಠಕ್ಕೆ ಇಡೀ ಜಮ್ಮು ಮತ್ತು ಕಾಶ್ಮೀರದ ಗಲ್ಲಿ ಗಲ್ಲಿಯಲ್ಲಿರುವ ಮಸೀದಿಗಳ ಮೇಲೆ ನಿತ್ಯ ಕಿವಿ ತಮಟೆ ಒಡೆಯುವಂತೆ ಅರಚುವ ಮೈಕಾಸುರನಿಂದ ಹೊರಹೊಮ್ಮುವ ಭಯಂಕರ ಶಬ್ದದಿಂದ ಹಿಮಕುಸಿತವಾಗುವುದಿಲ್ಲವೇ, ಶಬ್ದಮಾಲಿನ್ಯವಾಗುವುದಿಲ್ಲವೇ?

ಬರೀ ದೇವಸ್ಥಾನದಲ್ಲಿರುವ ಗಂಟೆ ಬಾರಿಸುವುದರಿಂದ ಹಿಮಕುಸಿತವಾಗುತ್ತದೆ ಎಂದಾದರೆ ಮಸೀದಿ ಮೇಲೆ ಅರಚುವ ಮೈಕಾಸುರನಿಂದ ಹಿಮಕುಸಿತವಾಗುವ ಭೀತಿ ಹುಟ್ಟಬೇಕಲ್ಲವೇ? ಇತ್ತೀಚೆಗೆ ಸಂಗೀತಗಾರ ಸೋನು ನಿಗಮ ಮಸೀದಿಯಿಂದ ಹೊರಡುವ ಅಜಾನ್ ನಿಂದ ಹೊರಡುವ ಶಬ್ದದಿಂದ ಕಿರಿಕಿರಿಯಾಗುತ್ತದೆ ಎಂದಿದಕ್ಕೆ ಫತ್ವಾ ಹೊರಡಿಸಿದ್ದ ದುರುಳಿರುವ ನಾಡಿನಲ್ಲಿ, ದೇವಸ್ಥಾನ ಗಂಟೆ ಬಾರಿಸಿದರೇ ಅದ್ಯಾವ ಮಟ್ಟಕ್ಕೆ ಭೂಮಿ ನಡುಗುತ್ತೇ ಎಂಬುದನ್ನು ಹಸಿರು ನ್ಯಾಯ ಪೀಠ ಬಹಿರಂಗಪಡಿಸಬೇಕು.

ಹಿಂದೂ ಧರ್ಮ ಬದಲಾವಣೆಗಳಿಗೆ ಸದಾ ಮೈತೆರೆದುಕೊಳ್ಳುತ್ತದೆ. ಇಲ್ಲಿನ ಎಲ್ಲವೂ ಮೌಢ್ಯ ಎಂಬಂತೆ ಈಗ ದೇವಸ್ಥಾನದ ಗಂಟೆ ಮೇಲೆ ಪರಿಸರವಾದಿಗಳು ಕಣ್ಣಿಟ್ಟಿರುವುದು ದೊಡ್ಡ ದುರಂತ. ಗಂಟೆ ನಿಷೇಧಿಸಿದಂತೆ ಮಸೀದಿ ಮೇಲೆ ಅಜಾನ್ ಅರಚುವ ಮೈಕಾಸುರನ ಹಾವಳಿ, ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಗಬೇಕು. ಆಗ ಪರಿಸರವಾದಿಗಳ ವಾದದಲ್ಲಿ ಹುರುಳಿದೆ ಎಂಬುದನ್ನು ಸಾಬೀತು ಮಾಡಿದಂತಾಗುತ್ತದೆ.

 

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
-ಆಯುಷ್ ಕೃಷ್ಣ. ಯಲ್ಲಾಪುರ July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
-ಆಯುಷ್ ಕೃಷ್ಣ. ಯಲ್ಲಾಪುರ July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search