• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅಮರನಾಥದಲ್ಲಿ ಗಂಟೆಯಿಂದ  ಶಬ್ದಮಾಲಿನ್ಯ ಎಂದ ಹಸಿರು ನ್ಯಾಯಪೀಠಕ್ಕೆ ಮಸೀದಿಗಳ ಮೇಲಿನ ಮೈಕಾಸುರ ಕಾಣಲಿಲ್ಲವೇ

-ಆಯುಷ್ ಕೃಷ್ಣ. ಯಲ್ಲಾಪುರ Posted On November 19, 2017
0


0
Shares
  • Share On Facebook
  • Tweet It

ಕೋಟ್ಯಂತರ ಭಾರತೀಯರ ನಂಬಿಕೆ, ಶ್ರದ್ಧೆ, ಭಕ್ತಿಯ ತಾಣ ಅಮರನಾಥದಲ್ಲಿ ಶಬ್ದಮಾಲಿನ್ಯ ವಲಯ (ಸೈಲೆಂಟ್ ಜೋನ್) ಎಂದು ಹಸಿರು ನ್ಯಾಯ ಪೀಠ ಘೋಷಿಸಿದೆ. ಈ ಘೋಷಣೆ ಪ್ರಕಾರ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು, ಜೋರಾಗಿ ಮಾತನಾಡಬಾರದು, ಟೆಂಗಿನ ಕಾಯಿ ಒಡೆಯಬಾರದು. ಶಬ್ದಮಾಲಿನ್ಯದಿಂದ ಹಿಮಕುಸಿತವಾಗುತ್ತದೆ ಎಂದು ಆದೇಶಿಸಿದೆ.

ಅಮರನಾಥ್ ಸದಾ ಮಂಜುಗಡ್ಡೆಗಳಿಂದ ಕೂಡಿದ ಅಪಾಯದ ತುದಿಗಾಲಲ್ಲಿ ಇರುವ ಹಿಮಾವೃತ ಪ್ರದೇಶ ಅಮರನಾಥ್. ಇಲ್ಲಿ ಚಳಿಗಾಲದಲ್ಲಿ ನಿತ್ಯ ಸಾವಿರಾರು ದೇವರ ದರ್ಶನಕ್ಕೆ ಬರುತ್ತಾರೆ. ಅವರೆಲ್ಲರ ಪ್ರಾಣ ರಕ್ಷಣೆ ಮುಖ್ಯ.ಸ್ವಲ್ಪ ಏರುಪೇರಾದರೂ ಹಿಮಕುಸಿತದಿಂದ ಎಲ್ಲರ ಪ್ರಾಣ ಪಕ್ಷಿ ಹಾರಿಹೋಗುವುದು ನಿಶ್ಚಿತ.

ಆದರೆ ಹಸಿರು ನ್ಯಾಯಪೀಠದ ಈ ಆದೇಶ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕದೆ ಇರದು. ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ, ಟೆಂಗು ಒಡೆಯುವುದರಿಂದ, ಜೋರಾಗಿ ಮಾತನಾಡುವುದರಿಂದ ಹಿಮ ಕುಸಿತವಾಗುತ್ತದೆ ಎಂಬ ವಿಷಯವೇ ಪ್ರಶ್ನಾರ್ಹ. ಸದಾ ಹಿಂದೂಗಳ ಹಬ್ಬಗಳು, ಆಚರಣೆಗಳು, ಸಂಸ್ಕೃತಿ, ದೇವಸ್ಥಾನಗಳ ಮೇಲೆಯೇ ಹಸಿರುವಾದಿಗಳ ಕಣ್ಣು ಬಿದ್ದಿರುವುದು ಮಾತ್ರ ದುರಂತ. ಇವರಿಗೆಲ್ಲರಿಗೂ ಬೇರೆ ಧರ್ಮದ ಅಂಧಾಚರಣೆಗಳು ಕಾಣುವುದಿಲ್ಲವೇ?

ಕಾಶ್ಮೀರದ ಅಮರನಾಥ್ ದಲ್ಲಿ ಗಂಟೆ ಬಾರಿಸಿದರೆ ಹಿಮಕುಸಿತವಾಗುತ್ತದೆ ಎನ್ನುವ ಹಸಿರು ನ್ಯಾಯಪೀಠಕ್ಕೆ ಇಡೀ ಜಮ್ಮು ಮತ್ತು ಕಾಶ್ಮೀರದ ಗಲ್ಲಿ ಗಲ್ಲಿಯಲ್ಲಿರುವ ಮಸೀದಿಗಳ ಮೇಲೆ ನಿತ್ಯ ಕಿವಿ ತಮಟೆ ಒಡೆಯುವಂತೆ ಅರಚುವ ಮೈಕಾಸುರನಿಂದ ಹೊರಹೊಮ್ಮುವ ಭಯಂಕರ ಶಬ್ದದಿಂದ ಹಿಮಕುಸಿತವಾಗುವುದಿಲ್ಲವೇ, ಶಬ್ದಮಾಲಿನ್ಯವಾಗುವುದಿಲ್ಲವೇ?

ಬರೀ ದೇವಸ್ಥಾನದಲ್ಲಿರುವ ಗಂಟೆ ಬಾರಿಸುವುದರಿಂದ ಹಿಮಕುಸಿತವಾಗುತ್ತದೆ ಎಂದಾದರೆ ಮಸೀದಿ ಮೇಲೆ ಅರಚುವ ಮೈಕಾಸುರನಿಂದ ಹಿಮಕುಸಿತವಾಗುವ ಭೀತಿ ಹುಟ್ಟಬೇಕಲ್ಲವೇ? ಇತ್ತೀಚೆಗೆ ಸಂಗೀತಗಾರ ಸೋನು ನಿಗಮ ಮಸೀದಿಯಿಂದ ಹೊರಡುವ ಅಜಾನ್ ನಿಂದ ಹೊರಡುವ ಶಬ್ದದಿಂದ ಕಿರಿಕಿರಿಯಾಗುತ್ತದೆ ಎಂದಿದಕ್ಕೆ ಫತ್ವಾ ಹೊರಡಿಸಿದ್ದ ದುರುಳಿರುವ ನಾಡಿನಲ್ಲಿ, ದೇವಸ್ಥಾನ ಗಂಟೆ ಬಾರಿಸಿದರೇ ಅದ್ಯಾವ ಮಟ್ಟಕ್ಕೆ ಭೂಮಿ ನಡುಗುತ್ತೇ ಎಂಬುದನ್ನು ಹಸಿರು ನ್ಯಾಯ ಪೀಠ ಬಹಿರಂಗಪಡಿಸಬೇಕು.

ಹಿಂದೂ ಧರ್ಮ ಬದಲಾವಣೆಗಳಿಗೆ ಸದಾ ಮೈತೆರೆದುಕೊಳ್ಳುತ್ತದೆ. ಇಲ್ಲಿನ ಎಲ್ಲವೂ ಮೌಢ್ಯ ಎಂಬಂತೆ ಈಗ ದೇವಸ್ಥಾನದ ಗಂಟೆ ಮೇಲೆ ಪರಿಸರವಾದಿಗಳು ಕಣ್ಣಿಟ್ಟಿರುವುದು ದೊಡ್ಡ ದುರಂತ. ಗಂಟೆ ನಿಷೇಧಿಸಿದಂತೆ ಮಸೀದಿ ಮೇಲೆ ಅಜಾನ್ ಅರಚುವ ಮೈಕಾಸುರನ ಹಾವಳಿ, ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಗಬೇಕು. ಆಗ ಪರಿಸರವಾದಿಗಳ ವಾದದಲ್ಲಿ ಹುರುಳಿದೆ ಎಂಬುದನ್ನು ಸಾಬೀತು ಮಾಡಿದಂತಾಗುತ್ತದೆ.

 

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
-ಆಯುಷ್ ಕೃಷ್ಣ. ಯಲ್ಲಾಪುರ September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
-ಆಯುಷ್ ಕೃಷ್ಣ. ಯಲ್ಲಾಪುರ September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search