• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಮದ್ಯದಂಗಡಿಗಳ ಬಂದ್ ನಿಂದ ಜನರಿಗೆ ಆಗುವ ಐದು ಉಪಯೋಗಗಳು!

TNN Correspondent Posted On July 3, 2017
0


0
Shares
  • Share On Facebook
  • Tweet It

ಜುಲೈ 1 ಶನಿವಾರ ಬಂದಿತ್ತು. ವಾರಾಂತ್ಯದಲ್ಲಿ ತಮ್ಮ ನಿತ್ಯದ ಬಾರ್ ಅಥವಾ ಬಾರ್ ಎಂಡ್ ರೆಸ್ಟೋರೆಂಟ್ ಗೆ ಹೋಗುವ ಕುಡುಕ ಮಹಾಶಯರಿಗೆ ಆಶ್ಚರ್ಯ ಕಾದಿತ್ತು. ಚುನಾವಣೆಯ ಸಂದರ್ಭ ಅಥವಾ ಆ ರಸ್ತೆಯಲ್ಲಿ ಜಾತ್ರೆ, ಮೆರವಣಿಗೆ ಇರುವ ವೇಳೆಯಲ್ಲಿ ಮಾತ್ರ ಬಾರ್ ಗಳು ಬಂದ್ ಆಗುವುದು ಸಾಮಾನ್ಯ. ಅದನ್ನು ಬಿಟ್ಟು ಮದ್ಯದಂಗಡಿಯೊಂದು ಬಂದ್ ಆಗಿರಬೇಕಾದರೆ ಆ ಅಂಗಡಿಗಳ ಹತ್ತಿರದ ಸಂಬಂಧಿಗೆ ಮದುವೆಯಿರಬೇಕು ಅಥವಾ ಮರಣವಾಗಿರಬೇಕು. ಇದು ಬಿಟ್ಟು ಬೇರೆ ಸಂದರ್ಭದಲ್ಲಿ ಇವು ಬಂದ್ ಆಗುವುದಿಲ್ಲ. ಆದರೆ ಕೇಂದ್ರ ಸರಕಾರದ ಆದೇಶದ ಪ್ರಕಾರ ರಾಜ್ಯ, ರಾಷ್ಟ್ರ ಹೆದ್ದಾರಿಗಳ ಪಕ್ಕದಲ್ಲಿ 500 ಮೀಟರ್ ಒಳಗೆ ಮದ್ಯದಂಗಡಿಗಳು ಇರಬಾರದು ಎನ್ನುವ ಸುತ್ತೋಲೆ ಜುಲೈ 1 ರಿಂದ ಕಟ್ಟುನಿಟ್ಟಾಗಿ ಕರಾವಳಿಯಲ್ಲಿ ಜಾರಿಗೆ ಬಂದಿದೆ. ಉದಾಹರಣೆಗೆ ಸುರತ್ಕಲ್ ನಿಂದಲೇ ತೆಗೆದುಕೊಂಡರೆ ಸುರತ್ಕಲ್ ಪೇಟೆಯಿಂದ ಕೊಟ್ಟಾರ ಚೌಕಿಯ ತನಕ ಇರುವ ಬಾರ್ ಮತ್ತು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಮಾರಾಟವಾಗುವ ಮದ್ಯದ ವ್ಯಾಪಾರವನ್ನು ಅಬಕಾರಿ ಇಲಾಖೆ ನಿಷೇಧಿಸಿದ ಬಳಿಕ ಆ ಭಾಗದ ಮದ್ಯಪ್ರಿಯರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ. ಕೈಗಾರಿಕೆ ಕೇಂದ್ರಿಕೃತವಾಗಿರುವ ಪ್ರದೇಶ ಅದು. ಈಗ ಅಲ್ಲಿನ ನಶೆಪ್ರಿಯರು ತಮ್ಮ ಪ್ರೀತಿಯ ಪಾನೀಯವನ್ನು ಹುಡುಕಿ ಬೇರೆಡೆ ಹೋಗಬೇಕಿದೆ.
ಆದರೆ ಇದರಿಂದ ಸಾರ್ವಜನಿಕರಿಗೆ ಏನು ಉಪಯೋಗ ಎನ್ನುವುದನ್ನು ತಿಳಿಯೋಣ.
ಮೊದಲನೇಯದಾಗಿ ಸುರತ್ಕಲ್ ಪೇಟೆಯ ಇಕ್ಕೆಲಗಳಲ್ಲಿ ಇದ್ದ ಮದ್ಯದ ಅಂಗಡಿಗಳು ಬಂದ್ ಆದ ಕಾರಣ ಅಲ್ಲಲ್ಲಿ ವಾಹನ ಸಂಚಾರ ಸುಗಮವಾಗಿ ಸಾಗುತ್ತಿದೆ. ಇದರಿಂದ ಯಾವುದೇ ಟ್ರಾಫಿಕ್ ಜಾಮ್ ನಂತಹ ಘಟನೆಗಳು ನಡೆಯುತ್ತಿಲ್ಲ. ಎರಡನೇಯದಾಗಿ ಹಿಂದೆ ಬಾರ್ ಮತ್ತು ಬಾರ್ ರೆಸ್ಟೋರೆಂಟ್ ಇರುವ ಸ್ಥಳಗಳಿಂದ ಮುನ್ನೂರು ಮೀಟರ್ ಉದ್ದದಲ್ಲಿ ಗ್ರಾಹಕರ ವಾಹನಗಳು ಉದ್ದಗಲಕ್ಕೂ ನಿಂತು ಇದರಿಂದ ಪಾದಚಾರಿಗಳಿಗೆ ಹೋಗಲು ಬರಲು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲ ರಸ್ತೆಯಲ್ಲಿ ಹೋಗುವ ವಾಹನಗಳು ಪಾರ್ಕ ಮಾಡಿದ ವಾಹನಗಳಿಗೆ ಸವರಿ ಎರಡೂ ವಾಹನಗಳ ಮಾಲೀಕರ ನಡುವೆ ಗಲಾಟೆ ನಡೆಯುತ್ತಿತ್ತು. ಅದೀಗ ನಿಂತಿದೆ. ಮೂರನೇಯದಾಗಿ ಅತಿಯಾಗಿ ಕುಡಿದು ರಸ್ತೆಬದಿಯಲ್ಲಿ ಬೀಳುತ್ತಿದ್ದ ಕುಡುಕರಿಂದ ಸಭ್ಯರಿಗೆ ನಡೆದಾಡಿಕೊಂಡು ಹೋಗಲು ಕಷ್ಟವಾಗುತ್ತಿತ್ತು. ಅದು ಸ್ಟಾಪ್ ಆಗಿದೆ. ನಾಲ್ಕನೇಯದಾಗಿ ಹಲವೆಡೆ ಮದ್ಯದಂಗಡಿಯ ಪಕ್ಕದಲ್ಲಿಯೇ ಬಸ್ ಸ್ಟಾಪ್ ಗಳು ಇದ್ದ ಕಾರಣ ಮಹಿಳೆಯರಿಗೆ ಮತ್ತು ಹಿರಿಯರಿಗೆ ಬಸ್ಸಿಗಾಗಿ ನಿಲ್ಲಲು ಕೂಡ ಮುಜುಗರವಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಅನೇಕರು ಬಾರ್ ಗಳನ್ನು ಶಪಿಸುತ್ತಿದ್ದರು. ಐದನೇಯದಾಗಿ ಗಂಡಸರು ಸೀದಾ ಮನೆಗೆ ಬಂದು ಲೆಕ್ಕದ್ದು ಕುಡಿಯುತ್ತಾರೆ. ಇದರಿಂದ ಹೆಂಡತಿಗೆ ಟೆನ್ಷನ್ ಕಡಿಮೆಯಾಗಿದೆ.
ಸರಕಾರದ ಈ ನಿಧರ್ಾರದಿಂದ ಸುರತ್ಕಲ್ ನಿಂದ ಕೊಟ್ಟಾರ ಚೌಕಿಯ ವರೆಗೆ ಇದ್ದ 47 ಬಾರ್ ಗಳು ಮತ್ತು 11 ಬಾರ್ ಎಂಡ್ ರೆಸ್ಟೋರೆಂಟ್ ಗಳು ಬಂದ್ ಆಗಿವೆ. ಬಾರ್ ಎಂಡ್ ರೆಸ್ಟೋರೆಂಟ್ ಗಳಲ್ಲಿ ಕೇವಲ ಆಹಾರಗಳನ್ನು ಮಾತ್ರ ಗ್ರಾಹಕರಿಗೆ ನೀಡಬಹುದಾಗಿದೆ. ಇದರಿಂದ ಬಾರ್ ಹೊರಗೆ ಬಿಕ್ಷುಕರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಹೆದ್ದಾರಿಯ ಪಕ್ಕದಲ್ಲಿ ಮದ್ಯದಂಗಡಿಗಳು ಇದ್ದ ಕಾರಣ ಅಪಘಾತಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದ್ದ ಕಾರಣ ಈ ನಿಯಮವನ್ನು ತರಲು ಕೇಂದ್ರ ಸರಕಾರ ಸಾಕಷ್ಟು ಯೋಚಿಸಿ ಈ ತೀಮರ್ಾನವನ್ನು ಜಾರಿಗೆ ತಂದಿತ್ತು. ಬಾರ್ ಮಾಲೀಕರು ಈ ನಿಯಮದಿಂದ ಅನಿವಾರ್ಯವಾಗಿ ತಮ್ಮ ಅಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಮುಂದಾಗಬೇಕಿದೆ ಅಥವಾ ರಾಜ್ಯ ಸರಕಾರ ಇವರ ಸಹಾಯಕ್ಕೆ ಮುಂದಾಗುತ್ತೋ ಎಂದು ಕಾದು ನೋಡಬೇಕಿದೆ.

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Tulunadu News July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Tulunadu News July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search