• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕ್ ನಿಷ್ಠೆ ಮರೆತ ಬಳಿಕ ಚೀನಾ ಭಾರತದೆದುರು ಮಂಡಿಯೂರಿದ್ದು ಏಕೆ ಗೊತ್ತಾ?

TNN Correspondent Posted On November 24, 2017
0


0
Shares
  • Share On Facebook
  • Tweet It

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಡೈಮರ್ ಭಾಷಾ ಅಣೆಕಟ್ಟು ಸ್ಥಾಪಿಸಲು ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅನ್ವಯ 14 ಶತಕೋಟಿ ಡಾಲರ್ ನೀಡುವುದಾಗಿ ಮುಂದೆ ಬಂದಿದ್ದ ಚೀನಾಕ್ಕೆ ಪಾಕಿಸ್ತಾನ ತಿರಸ್ಕಾರದ ಟಾಂಗ್ ನೀಡಿದ ಬಳಿಕ ಈಗ ಚೀನಾ ಭಾರತದೆದುರು ಮಂಡಿಯೂರಿದೆ.

ಚೀನಾ ವಿದೇಶಾಂಗ ಸಚಿವಾಲಯ ಭಾರತದಲ್ಲಿರುವ ರಾಯಭಾರಿ ಲುವೋ ಜಾವೋಹಿ ಮೂಲಕ ಹೇಳಿಕೆಯೊಂದನ್ನು ನೀಡಿದ್ದು, ಭಾರತ ಒಂದು ಪ್ರದೇಶ ಒಂದು ರಸ್ತೆ (ಒಬಿಒಆರ್) ಯೋಜನೆಗೆ ಭಾರತ ಕೈ ಜೋಡಿಸಿದರೆ ಸಿಪಿಇಸಿ ಯೋಜನೆಯ ಹೆಸರನ್ನೇ ಬದಲಾಯಿಸುವುದಾಗಿ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಸಿಪಿಇಸಿ ಅನ್ವಯ ಕಾಮಗಾರಿ ಆರಂಭಿಸಲು ಹಾಗೂ ಒಬಿಒಆರ್ ಗೆ ಭಾರತ ಕೈ ಜೋಡಿಸಿದರೆ ನಾವು ಸಿಪಿಇಸಿ ಯೋಜನೆಯ ಹೆಸರನ್ನೇ ಬದಲಾಯಿಸುತ್ತೇವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ 5 ಲಕ್ಷಕೋಟಿ ಬೃಹತ್ ಬಂಡವಾಳದ ಮಹತ್ತರ ಒಬಿಒಆರ್ ಯೋಜನೆಗೆ ಭಾರತ ಪ್ರತಿರೋಧ ವ್ಯಕ್ತಪಡಿಸಿತ್ತಲ್ಲದೆ, ಚೀನಾದಲ್ಲಿ ನಡೆದ ಸಭೆ ಬಹಿಷ್ಕರಿಸಿತ್ತು. ಬಳಿಕ ನೇಪಾಳ್ ಹಾಗೂ ಮ್ಯಾನ್ಮಾರ್ ಸಹ ಯೋಜನೆಗೆ ಕೈಜೋಡಿಸುವಂತೆ ಭಾರತಕ್ಕೆ ಮನವಿ ಮಾಡಿದ್ದವು.

ಈಗ ಚೀನಾ ಭಾರತದೆದುರು ಮಂಡಿಯೂರಿ ಒಂದು ವಾರವಾದರೂ ಭಾರತ ಇದುವರೆಗೆ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ.

ಒಟ್ಟಿನಲ್ಲಿ ಸಿಪಿಇಸಿ ಮೂಲ ಪಾಕಿಸ್ತಾನವನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊರಟಿದ್ದ ಚೀನಾಕ್ಕೆ ಗೆಳೆಯ ಪಾಕಿಸ್ತಾನವೇ ಸಾಲ ತಿರಸ್ಕರಿಸಿ ಟಾಂಗ್ ನೀಡಿದ ಬಳಿಕ ಚೀನಾ ಭಾರತದೆದುರು ಅಂಗಲಾಚುವಂತಾಗಿರುವುದಂತೂ ಸುಳ್ಳಲ್ಲ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search