• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಮಾನತೆಯ, ರಾಮರಾಜ್ಯದ ಸಂದೇಶ ಸಾರಿದ ವಿಶ್ವ ಹಿಂದೂ ಧರ್ಮ ಸಂಸದ್

TNN Correspondent Posted On November 27, 2017
0


0
Shares
  • Share On Facebook
  • Tweet It

ಉಡುಪಿ: ಹಿಂದೂ ಸಮಾಜಕ್ಕೆ ಕಂಟಕವಾಗಿರುವ ಅಸಮಾನತೆಯನ್ನು ಹೊಡೆದೊಡಿಸಬೇಕು. ಎಲ್ಲರೂ ಸೌಖ್ಯದಿಂದ ಬಾಳುವಂತ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಬೇಕು ಎಂಬ ಮಹತ್ತರ ಸಂದೇಶವನ್ನು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಧರ್ಮ ಸಂಸದ್ ಸಾರಿತು.

ಹಿಂದೂ ಸಂಘಟನೆಗಳೆಂದರೆ ದಲಿತ ವಿರೋಧಿಗಳು ಎಂಬ ಪಟ್ಟ ಕಳಚಲು ವೇದಿಕೆ ಮೇಲೆಯೇ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ ಭಾಯಿ ತೊಗಾಡಿಯಾ ಹೇಳಿದ ಮಾತುಗಳು ಗಮನಾರ್ಹ. ‘ಅಸಮಾನತೆ ತೊಲಗಿಸುವ ಕಾರ್ಯ ಇಲ್ಲಿಂದಲೇ ಆರಂಭವಾಗಬೇಕು. ಇಲ್ಲಿರುವ ಎಲ್ಲ ಸಾಧುಗಳು, ಸಂತರು ಪ್ರತ್ಯೇಕವಾಗಿ ಭೋಜನ ಮಾಡುವುದು ಬಿಟ್ಟು, ಉಳಿದ ಎಲ್ಲ ಸಾಧು, ಸಂತರೊಂದಿಗೆ ಭೋಜನ ಸ್ವೀಕರಿಸಬೇಕು ಎಂದು ಹೇಳಿದ್ದು ಮಹತ್ತ ಘಟನೆ.

ಅಲ್ಲದೇ ಸಂಸದ್ ನ ನಿರ್ಣಯಗಳಲ್ಲೂ ಹಿಂದೂ ಧರ್ಮಕ್ಕೆ ಕಾರ್ಕೋಟಕ ವಿಷದಂತೆ ಕಾಡುತ್ತಿರುವ ಅಸಮಾನತೆ ಹೊಡೆದೋಡಿಸಬೇಕು ಎಂದು ನಿರ್ಣಯ ಕೈಗೊಂಡಿದ್ದು ಶ್ಲಾಘನೀಯ. ಧರ್ಮ ಸಂಸದ್ ಕೇಂದ್ರ ಬಿಂದುವಾಗಿದ್ದ 97ರ ಹರೆಯದ ವಿಶ್ವೇಶ ತೀರ್ಥ ಶ್ರೀಗಳು ಕೈಗೊಂಡ ದಲಿತ ಕಾಲೋನಿಗಳ ಭೇಟಿಯ ಕ್ರಾಂತಿಕಾರಕ ನಡೆಯನ್ನು ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಎಲ್ಲರೂ ಶ್ಲಾಘಿಸಿದ್ದು, ಅಸಮಾನತೆ ನಿರ್ನಾಮಕ್ಕೆ ಹೊಸ ಮುನ್ನುಡಿ ಬರೆದಂತಿತ್ತು.

ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೆ ಎಲ್ಲ ದೇವಸ್ಥಾನಗಳಲ್ಲಿ, ಹಿಂದೂಗಳ ಮನೆಯಲ್ಲಿ ಮುಕ್ತ ಪ್ರವೇಶ ನೀಡಬೇಕು, ಜಾತಿಗೊಂದು ಸ್ಮಶಾನ ಮಾಡದೇ, ಇಡೀ ಗ್ರಾಮದ ಸಮಸ್ತ ಹಿಂದೂಗಳಿಗೆ ಒಂದೇ ಸ್ಮಶಾನ  ಆರಂಭಿಸಬೇಕು ಎಂಬ ಮಹತ್ತರ ನಿರ್ಣಯವನ್ನು ಮಂಡಿಸುವ ಮೂಲಕ ಧರ್ಮ ಸಂಸದ್ ಹೊಸ ಮುನ್ನುಡಿಯನ್ನು, ಇತಿಹಾಸವನ್ನು ಬರೆಯಿತು.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search