• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಮಾನತೆಯ, ರಾಮರಾಜ್ಯದ ಸಂದೇಶ ಸಾರಿದ ವಿಶ್ವ ಹಿಂದೂ ಧರ್ಮ ಸಂಸದ್

TNN Correspondent Posted On November 27, 2017


  • Share On Facebook
  • Tweet It

ಉಡುಪಿ: ಹಿಂದೂ ಸಮಾಜಕ್ಕೆ ಕಂಟಕವಾಗಿರುವ ಅಸಮಾನತೆಯನ್ನು ಹೊಡೆದೊಡಿಸಬೇಕು. ಎಲ್ಲರೂ ಸೌಖ್ಯದಿಂದ ಬಾಳುವಂತ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಬೇಕು ಎಂಬ ಮಹತ್ತರ ಸಂದೇಶವನ್ನು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಧರ್ಮ ಸಂಸದ್ ಸಾರಿತು.

ಹಿಂದೂ ಸಂಘಟನೆಗಳೆಂದರೆ ದಲಿತ ವಿರೋಧಿಗಳು ಎಂಬ ಪಟ್ಟ ಕಳಚಲು ವೇದಿಕೆ ಮೇಲೆಯೇ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ ಭಾಯಿ ತೊಗಾಡಿಯಾ ಹೇಳಿದ ಮಾತುಗಳು ಗಮನಾರ್ಹ. ‘ಅಸಮಾನತೆ ತೊಲಗಿಸುವ ಕಾರ್ಯ ಇಲ್ಲಿಂದಲೇ ಆರಂಭವಾಗಬೇಕು. ಇಲ್ಲಿರುವ ಎಲ್ಲ ಸಾಧುಗಳು, ಸಂತರು ಪ್ರತ್ಯೇಕವಾಗಿ ಭೋಜನ ಮಾಡುವುದು ಬಿಟ್ಟು, ಉಳಿದ ಎಲ್ಲ ಸಾಧು, ಸಂತರೊಂದಿಗೆ ಭೋಜನ ಸ್ವೀಕರಿಸಬೇಕು ಎಂದು ಹೇಳಿದ್ದು ಮಹತ್ತ ಘಟನೆ.

ಅಲ್ಲದೇ ಸಂಸದ್ ನ ನಿರ್ಣಯಗಳಲ್ಲೂ ಹಿಂದೂ ಧರ್ಮಕ್ಕೆ ಕಾರ್ಕೋಟಕ ವಿಷದಂತೆ ಕಾಡುತ್ತಿರುವ ಅಸಮಾನತೆ ಹೊಡೆದೋಡಿಸಬೇಕು ಎಂದು ನಿರ್ಣಯ ಕೈಗೊಂಡಿದ್ದು ಶ್ಲಾಘನೀಯ. ಧರ್ಮ ಸಂಸದ್ ಕೇಂದ್ರ ಬಿಂದುವಾಗಿದ್ದ 97ರ ಹರೆಯದ ವಿಶ್ವೇಶ ತೀರ್ಥ ಶ್ರೀಗಳು ಕೈಗೊಂಡ ದಲಿತ ಕಾಲೋನಿಗಳ ಭೇಟಿಯ ಕ್ರಾಂತಿಕಾರಕ ನಡೆಯನ್ನು ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಎಲ್ಲರೂ ಶ್ಲಾಘಿಸಿದ್ದು, ಅಸಮಾನತೆ ನಿರ್ನಾಮಕ್ಕೆ ಹೊಸ ಮುನ್ನುಡಿ ಬರೆದಂತಿತ್ತು.

ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೆ ಎಲ್ಲ ದೇವಸ್ಥಾನಗಳಲ್ಲಿ, ಹಿಂದೂಗಳ ಮನೆಯಲ್ಲಿ ಮುಕ್ತ ಪ್ರವೇಶ ನೀಡಬೇಕು, ಜಾತಿಗೊಂದು ಸ್ಮಶಾನ ಮಾಡದೇ, ಇಡೀ ಗ್ರಾಮದ ಸಮಸ್ತ ಹಿಂದೂಗಳಿಗೆ ಒಂದೇ ಸ್ಮಶಾನ  ಆರಂಭಿಸಬೇಕು ಎಂಬ ಮಹತ್ತರ ನಿರ್ಣಯವನ್ನು ಮಂಡಿಸುವ ಮೂಲಕ ಧರ್ಮ ಸಂಸದ್ ಹೊಸ ಮುನ್ನುಡಿಯನ್ನು, ಇತಿಹಾಸವನ್ನು ಬರೆಯಿತು.

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Tulunadu News June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Tulunadu News June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search