• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಗನನ್ನು ಮನೆಗೆ ಸೇರಿಸಿದಕ್ಕೆ ಸೈನಿಕರಿಗೆ ನಮೋ ಎಂದ ಮಾಜಿ ಉಗ್ರನ ತಂದೆ

TNN Correspondent Posted On November 28, 2017


  • Share On Facebook
  • Tweet It

 ಅನಂತನಾಗ (ಶ್ರೀನಗರ): ಫುಟಬಾಲ್ ಪಟುವಾಗಿದ್ದ ಮಜೀದ್ ಖಾನ್ ಉಗ್ರನಾಗಿದ್ದ. ಆತನ ಮನವೊಲಿಸಿ ಮರಳಿ ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಬಂದಿದ್ದಕ್ಕೆ ತಂದೆ ಇರ್ಷಾದ್ ಅಹ್ಮದ್ ಖಾನ್ ಭಾರತೀಯ ಸೈನಿಕರಿಗೆ ಧನ್ಯವಾದ ಹೇಳಿದ್ದಾರೆ.

ಫುಟಬಾಲ್ ಆಟಗಾರನಾಗಿದ್ದ ಮಜೀದ್ ಖಾನ್ ಲಷ್ಕರ್ ಈ ತಯ್ಯಬಾ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ. ತಾಯಿ ಮನವಿ ಮೆರೆಗೆ ಮರಳಿ ಮುಖ್ಯವಾಹಿನಿಗೆ ಬರಲು ಇಚ್ಚಿಸಿದ. ಆತನನ್ನು ಸೈನಿಕರು ಗೌರವಯುತವಾಗಿ ಸ್ವಾಗತಿಸಿದ್ದರು. ಇದು ಮಜೀದ್ ಖಾನ್ ಕುಟುಂಬಸ್ಥರಲ್ಲಿ ಸಂತೋಷ ಮೂಡಿಸಿತ್ತು. ತಮ್ಮ ಮಗ ಮರಳಿ ಮನೆಗೆ ಬಂದರೆ ಸೈನಿಕರು ಸಮಸ್ಯೆಯೊಡ್ಡುತ್ತಾರೆ ಎಂಬ ಭೀತಿಯಲ್ಲಿದ್ದ ಕುಟುಂಬಕ್ಕೆ ಸೈನ್ಯ ಅಭಯ ಹಸ್ತ ನೀಡಿದ್ದು, ಹೊಸ ಆಕಾಂಕ್ಷೆ ಮೂಡಿಸಿದೆ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಮಜೀದ್ ಖಾನ್ ತಂದೆ ತಂದೆ ಇರ್ಷಾದ್ ಅಹ್ಮದ್ ಖಾನ್ ‘ನನ್ನ ಮಗನನ್ನು ಮರಳಿ ಮನೆಗೆ ಕರೆತರಲು ಶ್ರಮಿಸಿದ ಎಲ್ಲ ಸೈನ್ಯಾಧಿಕಾರಿಗಳಿಗೆ, ಈ ಸುದ್ದಿಯನ್ನು ಸಕಾರಾತ್ಮಕವಾಗಿ ಬಿಂಬಿಸಿರುವ ಎಲ್ಲ ಮಾಧ್ಯಮಗಳಿಗೆ ಮತ್ತು ಸಹಕಾರ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನನ್ನ ಮಗನ ಜೊತೆ ಮಾತನಾಡಲು ನನಗೆ ಎಲ್ ಟಿ ಟಿ ಉಗ್ರರು ಕೇವಲ ಐದು ನಿಮಿಷ ಸಮಯ ನೀಡಿದ್ದರು. ಆತನನ್ನು ಒತ್ತಾಯವಾಗಿ ಬಂಧನದಲ್ಲಿಟ್ಟು, ಉಗ್ರತ್ವವನ್ನು ತುಂಬಲಾಗುತ್ತಿತ್ತು. ಆತನ ಮನದಾಳ ಅರಿತು ನಾನು ಪೊಲೀಸರಿಗೆ ದೂರು ನೀಡಿದ್ದೇ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯಾಚರಣೆ ನಡೆಸಿದರು. ಆದ್ದರಿಂದ ಇಂದು ಮಗ ಮನೆಯಲ್ಲಿ ನೆಮ್ಮದಿಯಿಂದ ಹೊಸ ಜೀವನಕ್ಕೆ ನೆಲೆ ಕಲ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಇರ್ಷಾದ್ ಖಾನ್.

ಮಜೀದ್ ಮುಗ್ದ ಹುಡುಗ ಆತ ಯಾವತ್ತು ಪ್ರತ್ಯೇಕವಾದಿಗಳ ಹೋರಾಟದಲ್ಲೂ ಭಾಗಿಯಾಗಿರಲಿಲ್ಲ, ಕಲ್ಲು ತೂರಾಟದಿಂದಲೂ ದೂರವಿದ್ದ. ಆತನ ಮುಗ್ದತೆಯನ್ನೆ ದುರ್ಬಳಕೆಯನ್ನಾಗಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮಜೀದ್ ಖಾನ್ ಕುಟುಂಬಸ್ಥರು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search