• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಂದೇ ಮಾತರಂ ಹಾಡಿದರೆ ಬಹಿಷ್ಕಾರ ಹಾಕಿದ ಮುಸ್ಲಿಂ ಮೂಲಭೂತವಾದಿಗಳೇ, ಇದೆಂಥ ಅಸಹಿಷ್ಣುತೆ?

TNN Correspondent Posted On November 30, 2017


  • Share On Facebook
  • Tweet It

ಲಖನೌ: ದೇಶದ ಯಾವುದೇ ಮೂಲೆಯಲ್ಲಿ ವಿಚಾರವಾದಿಗಳ ಹತ್ಯೆಯಾಗಲಿ, ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲೇ ಹಲ್ಲೆಗಳಾಗಲಿ, ಯಾರೋ ಮುಸ್ಲಿಮರನ್ನು ಹತ್ಯೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಅದನ್ನು ಮಾಡಿದ್ದಾರೆ ಎಂದು ಘೀಳಿಡುವವರಿದ್ದಾರೆ. ಸಣ್ಣ ಟೀಕೆ ವ್ಯಕ್ತವಾದರೂ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮುಸ್ಲಿಂ ಕುಟುಂಕ್ಕೆ ಆದ ಅನ್ಯಾಯ ಪ್ರಶ್ನಿಸುವ ತಾಕತ್ತು, ಗುಂಡಿಗೆ ಮಾತ್ರ ಯಾರಿಗೂ ಇಲ್ಲ.

ಹೌದು, ಆಗ್ರಾದ ಅಜಂಪುರ ಎಂಬಲ್ಲಿ ವಾಸಿಸುತ್ತಿರುವ ಗುಲ್ಚಮನ್ ಶೇರ್ವಾನಿ ಮುಸ್ಲಿಂ ಎಂಬ ಕುಟುಂಬಕ್ಕೆ  ಇಸ್ಲಾಂನ ಮೂಲಭೂತವಾದಿಗಳೇ ಫತ್ವಾ ಹೊರಡಿಸಿದ್ದಾರೆ. ಶಾಲೆಯಿಂದ ಆತನ ಮಕ್ಕಳನ್ನು ಶಾಳೆಯಿಂದ ಹೊರಹಾಕಿದ್ದಾರೆ.

ಅಷ್ಟಕ್ಕೂ ಮುಸ್ಲಿಂ ಶೇರ್ವಾನಿ ಕುಟುಂಬ ಮಾಡಿರುವ ತಪ್ಪಾದರೂ ಏನು ಗೊತ್ತಾ?

ಗುಲ್ಚಮನ್ ಶೇರ್ವಾನಿ ಕುಟುಂಬಕ್ಕೆ ಎಲ್ಲಿಲ್ಲದ ದೇಶಭಕ್ತಿ. ಹಾಗಾಗಿಯೇ ಇಡೀ ಕುಟುಂಬ ಭಾರತದ ಧ್ವಜ ಹೋಲುವ ಬಟ್ಟೆ ತೊಡುತ್ತಾರೆ. ವಂದೇ ಮಾತರಂ ಹಾಡುತ್ತಾರೆ. ಆದರೆ ಇದೇ ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಬಹಿಷ್ಕಾರ ಹಾಕಿದ್ದಾರೆ.

ಇದೇ ಕಾರಣಕ್ಕೇ, ಅಜಂಪುರದ ಮುಸ್ಲಿಂ ಶಾಲೆಯೊಂದರಿಂದ ಶೇರ್ವಾನಿಯ ಇಬ್ಬರು ಮಕ್ಕಳನ್ನು ಹೊರಹಾಕಿದ್ದಾರೆ. ಅವರು ವಂದೇ ಮಾತರಂ ಹಾಡುವುದರಿಂದ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನಿವಾರ್ಯವಾಗಿ ಮಕ್ಕಳನ್ನು ಹೊರಹಾಕಲಾಗಿದೆ ಎಂದು ಶಾಲೆ ಪ್ರಾಂಶುಪಾಲ ಅಸ್ಲಾಂ ಖಾನ್ ಲಜ್ಜೆಯಿಲ್ಲದೆ ಹೇಳುತ್ತಾರೆ.

ಅಷ್ಟೇ ಅಲ್ಲ, ದೆಹಲಿಯ ಜಾಮಾ ಮಸೀದಿಯ ಮೌಲ್ವಿ ಮೌಲಾನಾ ಅಹ್ಮದ್ ಬುಖಾರಿ, ಶೇರ್ವಾನಿ ವಿರುದ್ಧ ಫತ್ವಾ ಹೊರಡಿಸಿದ್ದಾನೆ. ಶೇರ್ವಾನಿಯನ್ನು “ಕಾಫಿರ್, (ಮುಸ್ಲಿಮೇತರ)” ಎಂದು ಘೋಷಿಸಿದ್ದಾನೆ.

ಇಷ್ಟಾದರೂ ನಾನು ವಂದೇ ಮಾತರಂ ಹಾಡುವುದನ್ನು ನಿಲ್ಲಿಸುವುದಿಲ್ಲ. ದೇಶಭಕ್ತಿ ಸಾರುವ ರಾಷ್ಟ್ರಧ್ವಜದ ಬಟ್ಟೆ ಧರಿಸದೇ ಇರುವುದಿಲ್ಲ ಎಂದು ಶೇರ್ವಾನಿ ದಿಟ್ಟತನ ಮೆರೆದಿದ್ದಾರೆ.

ಆದರೆ ಒಂದು ಮುಸ್ಲಿಂ ಕುಟುಂಬ ವಂದೇ ಮಾತರಂ ಹಾಡಿದ್ದಕ್ಕಾಗಿ ಬಹಿಷ್ಕಾರ ಹಾಕಿದ ಮೂಲಭೂತವಾದಿಗಳ ವಿರುದ್ಧ ಒಬ್ಬನೇ ಒಬ್ಬ ಜಾತ್ಯತೀತವಾದಿ, ಪ್ರಗತಿಪರ, ಬುದ್ಧಿ ಜೀವಿ ಸೊಲ್ಲೆತ್ತುವುದಿಲ್ಲವಲ್ಲ. ನಾಚಿಕೆಯಾಗಬೇಕು. ಛೇ!

  • Share On Facebook
  • Tweet It


- Advertisement -


Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Tulunadu News September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Tulunadu News September 15, 2023
Leave A Reply

  • Recent Posts

    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
  • Popular Posts

    • 1
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search