• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕ್ ಇಬ್ಬಂದಿತನ ಪ್ರದರ್ಶನ, ಉಗ್ರ ಸಯೀದ್ ಗೆ ಮುಂದುವರಿದ ಗೃಹ ಬಂಧನ

TNN Correspondent Posted On November 30, 2017
0


0
Shares
  • Share On Facebook
  • Tweet It

ದೆಹಲಿ:  ಗೃಹ ಬಂಧನದಿಂದ ಬಿಡುಗಡೆಯಾದ ನಂತರದ ದಿನದಿಂದಲೇ ಭಾರತದ ವಿರುದ್ಧ ನಮ್ಮ ಜಿಹಾದ್ ಮುಂದುವರಿಯಲಿದೆ ಎಂದು ಘೋಳಿಟ್ಟಿದ್ದ ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನ ಗೃಹ ಬಂಧನ ಮುಂದುವರಿಸಲು ನಿರ್ಧರಿಸಿದೆ.

ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಸಯೀದ್ ನನ್ನು ಪಾಕಿಸ್ತಾನ ತನ್ನ ಕುತಂತ್ರದ ಮೂಲಕ ಸೂಕ್ತ ಸಾಕ್ಷ್ಯಾದಾರ ಒದಗಿಸದೇ ಗೃಹ ಬಂಧನಕ್ಕೆ ಮುಕ್ತಿ ನೀಡಿತ್ತು. ಆದರೆ ತನ್ನ ಕುತಂತ್ರ ತನಗೆ ತಿರುಗಿದ್ದರಿಂದ ಇಂಗು ತಿಂದ ಮಂಗನಂತಾಗಿರುವ ಪಾಕಿಸ್ತಾನ ಇದೀಗ ತನ್ನ ಮಾತಿಗೆ ತಾನೇ ಬದ್ಧವಾಗಿರದೇ ಮತ್ತೆ ಗೃಹ ಬಂಧನ ಮುಂದುವರಿಸಿದೆ.

ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಮುಕ್ತಿ ನೀಡಿದಕ್ಕೆ ಅಮೆರಿಕ, ಭಾರತ ಸೇರಿ ವಿಶ್ವಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ ಗೃಹ ಬಂಧನ ಮಾಡಿ, ಸಯೀದ್ ನನ್ನು ವಿಶ್ವ ಉಗ್ರರ ಪಟ್ಟಿಯಲ್ಲಿ ಸೇರಿಸಿ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮತ್ತೆ ಗೃಹ ಬಂಧನವನ್ನು ಮುಂದುವರಿಸಿದೆ.

ಇನ್ನು ಪಾಕಿಸ್ತಾನದ ಈ ನಿರ್ಧಾರಕ್ಕೆ ಹಾಸ್ಯಭರಿತ ಮತ್ತು ಪಾಕಿಸ್ತಾನಕ್ಕೆ ಮುಖಭಂಗವಾಗುವಂತ ಪ್ರತಿಕ್ರಿಯೆಗಳು ಬಂದಿವೆ. ‘ಒಬ್ಬ ಉಗ್ರನನ್ನು ಸಾಕ್ಷಿ ಇಲ್ಲ ಎಂದು ಬಿಡುಗಡೆ ಮಾಡುವುದು, ಕೋರ್ಟ್ ನೀಡಿದ ಆದೇಶವನ್ನು ಮೀರಿ ಗೃಹ ಬಂಧನ ಮಾಡುವುದು ಅದೇ ಸರ್ಕಾರ. ಇದು ಪಾಕಿಸ್ತಾನದ ಇಬ್ಬಂದಿತನ ಪ್ರದರ್ಶಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

0
Shares
  • Share On Facebook
  • Tweet It


#hafizsaeed


Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search